ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳು ಸಿದ್ಧ
ಬೆಂಗಳೂರು, ಮೇ 27 : ಜೆಡಿಎಸ್ ಪಕ್ಷ ವಿಧಾನಪರಿಷತ್ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಜೂನ್ 20ರಂದು ನಡೆಯಲಿರುವ ನಾಲ್ಕು ಕ್ಷೇತ್ರಗಳ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಂಗಳವಾರದಿಂದ ಪರಿಷತ್ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದ್ದು, ನಾಮಪತ್ರ ಸಲ್ಲಿಸಬಹುದಾಗಿದೆ.
ಸೋಮವಾರ
ಜೆಡಿಎಸ್
ವಿಧಾನಪರಿಷತ್ತಿನ
ನಾಲ್ಕು
ಕ್ಷೇತ್ರಗಳಿಗೆ
ಅಭ್ಯರ್ಥಿಗಳ
ಪಟ್ಟಿಯನ್ನು
ಬಿಡುಗಡೆ
ಮಾಡಿದೆ.
ಬೆಂಗಳೂರು
ಶಿಕ್ಷಕರ
ಕ್ಷೇತ್ರದಿಂದ
ಹಾಲಿ
ಸದಸ್ಯ
ಪುಟ್ಟಣ್ಣ
ಅವರಿಗೆ
ಟಿಕೆಟ್
ನೀಡಲಾಗಿದೆ.
ಪಶ್ಚಿಮ
ಪದವೀಧರರ
ಕ್ಷೇತ್ರಕ್ಕೆ
ಮಾಜಿ
ಸಚಿವ
ಬಸವರಾಜ
ಹೊರಟ್ಟಿ
ಪುತ್ರ
ವಸಂತ
ಹೊರಟ್ಟಿಗೆ
ಟಿಕೆಟ್
ನೀಡಲಾಗಿದೆ.
ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಈ ಹಿಂದೆ ಶಿಕ್ಷಕರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲುಅನುಭವಿಸಿದ್ದ ಚೌಡರೆಡ್ಡಿ ಅವರಿಗೆ ಟಿಕೆಟ್ ನೀಡಿದ್ದರೆ, ಈಶಾನ್ಯ ಶಿಕ್ಷಕರ ಕ್ಷೇತ್ರಕ್ಕೆ ಎಂ.ಬಿ.ಅಂಬಲಗಿ ಅವರಿಗೆ ಟಿಕೆಟ್ ನೀಡಲಾಗಿದೆ. ಇಂದಿನಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದ್ದು, ನಾಮಪತ್ರ ಸಲ್ಲಿಸಬಹುದಾಗಿದೆ. [ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ]
ಇಂದು ಅಧಿಸೂಚನೆ ಪ್ರಕಟ : ವಿಧಾನಪರಿಷತ್ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳಿಂದ ನಡೆಯಲಿರುವ ನಾಲ್ಕು ಸ್ಥಾನಗಳ ಚುನಾವಣೆಗೆ ಮಂಗಳವಾರ ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. [ಪರಿಷತ್ ಪ್ರತಿಪಕ್ಷ ಸ್ಥಾನಕ್ಕೆ ಈಶ್ವರಪ್ಪ?]
ಬೆಂಗಳೂರು ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳಿಗೆ ಜೂನ್ 20ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಜೂ.3 ಕೊನೆಯ ದಿನವಾಗಿದ್ದು, ಜೂ.4ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ, ವಾಪಸ್ ಪಡೆಯಲು ಜೂ.6 ಕೊನೆಯ ದಿನವಾಗಿದೆ.