ಶ್ರೀಲಂಕಾ ಪ್ರವಾಸದ ಬಗ್ಗೆ ಕುಮಾರಸ್ವಾಮಿ ಸ್ಪಷ್ಟನೆಗಳು
ಬೆಂಗಳೂರು, ಜೂ. 12 : ಜೆಡಿಎಸ್ ಶಾಸಕರಲ್ಲಿ ಆತ್ಮಸ್ಥೈರ್ಯ ತುಂಬಿ ಪಕ್ಷ ಸಂಘಟನೆ ಮಾಡುವ ಬಗ್ಗೆ ಚರ್ಚೆ ಮಾಡಲು ಶ್ರೀಲಂಕಾಕ್ಕೆ ಹೋಗುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಕುಪೇಂದ್ರ ರೆಡ್ಡಿ ಅವರು ಈ ಪ್ರವಾಸವನ್ನು ಆಯೋಜನೆ ಮಾಡಿದ್ದಾರೆ ಎಂಬ ಆರೋಪಗಳನ್ನು ಅವರು ತಳ್ಳಿಹಾಕಿದ್ದಾರೆ.
ಬುಧವಾರ
ಬೆಂಗಳೂರಿನಲ್ಲಿ
ಪತ್ರಿಕಾಗೋಷ್ಠಿ
ನಡೆಸಿದ
ಎಚ್.ಡಿ.ಕುಮಾರಸ್ವಾಮಿ,
ವಿಧಾನಸಭೆ
ಚುನಾವಣೆ
ಬಳಿಕ
ರಾಜ್ಯದಲ್ಲಿ
ಜೆಡಿಎಸ್
ಪಕ್ಷಕ್ಕೆ
ಭವಿಷ್ಯವಿಲ್ಲ,
ಲೋಕಸಭೆ
ಚುನಾವಣೆಯಲ್ಲಿ
ಪಕ್ಷ
ಸಂಪೂರ್ಣವಾಗಿ
ನೆಲಕಚ್ಚಿದೆ
ಎಂಬ
ವರದಿಗಳು
ಬಂದಿದ್ದವು.
ರಾಜ್ಯಸಭೆ ಚುನಾವಣೆಯಲ್ಲಿ ಐವರು ಶಾಸಕರ ಕೊರತೆ ಇರುವುದರಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ಪಕ್ಷದ 15-20 ಶಾಸಕರು ಮುಖ್ಯಮಂತ್ರಿಗಳ ಜೊತೆ ನೇರ ಸಂಪರ್ಕದಲ್ಲಿದ್ದಾರೆ ಎಂಬ ಭಾವನೆ ಮೂಡಿಸುವ ಪ್ರಯತ್ನ ನಡೆಯತ್ತಿದೆ. ಆದ್ದರಿಂದ ಶಾಸಕರ ಆತ್ಮಸ್ಥೈರ್ಯ ಹೆಚ್ಚಿಸಲು ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು. [ವಿದೇಶ ಪ್ರವಾಸಕ್ಕೆ ಹೊರಟ ಜೆಡಿಎಸ್ ಶಾಸಕರು]
ಜೂ.15 ರಿಂದ 19 ರವರೆಗೆ ಶ್ರೀಲಂಕಾ ಪ್ರವಾಸಕ್ಕೆ ತೆರಳುತ್ತಿದ್ದು, ಶಾಸಕರು, ಮೇಲ್ಮನೆ ಸದಸ್ಯರು, ಮಾಜಿ ಶಾಸಕರು, ಪಕ್ಷದ ಹಿರಿಯ ನಾಯಕರನ್ನು ಆಹ್ವಾನಿಸಿದ್ದೇನೆ. 60-70 ಸದಸ್ಯರು ಒಟ್ಟಿಗೆ ತೆರಳುತ್ತಿದ್ದೇವೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು. ಜೂ.23ರಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರವನ್ನು ಎದುರಿಸುವ ಬಗ್ಗೆಯೂ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು.
ಶ್ರೀಲಂಕಾದಲ್ಲಿ ಸಭೆ ಏಕೆ : ಬೆಂಗಳೂರಿನಲ್ಲಿ ಪಕ್ಷದ ನಾಯಕರ ಸಭೆ ನಡೆಸಿದರೆ ಊರಿಗೆ ಹೋಗಿ ಬರುತ್ತೇವೆ ಎಂದು ಹೇಳಿಕೊಂಡು ಶಾಸಕರು ಹೋಗುವವರಿದ್ದಾರೆ. ಶ್ರೀಲಂಕಾ ಹೋದರೆ ನಾಲ್ಕು ದಿನ ಎಲ್ಲರೂ ಒಟ್ಟಾಗಿ, ಮುಕ್ತವಾಗಿ ಚರ್ಚಿಸಿ ಸಂಘಟನೆ ಬಲಿಷ್ಠ ಪಡಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಅಲ್ಲಿ ಸಭೆ ನಡೆಸಲಾಗುತ್ತಿದ್ದು, ಇದು ಮನೋರಂಜನಾ ಪ್ರವಾಸವಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. [ಕೊಲಂಬೋದಲ್ಲಿ ಜೆಡಿಎಸ್ ಸಭೆ: ಖರ್ಚು ಯಾರದ್ದು?]
ಕುಪೇಂದ್ರ ರೆಡ್ಡಿ ಪ್ರಾಯೋಜಕತ್ವವಲ್ಲ : ಜೆಡಿಎಸ್ ನಾಯಕರ ಶ್ರೀಲಂಕಾ ಪ್ರವಾಸವನ್ನು ಪಕ್ಷದ ಅಭ್ಯರ್ಥಿಯಾಗಿ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿರುವ ಕುಪೇಂದ್ರ ರೆಡ್ಡಿ ಅವರು ಪ್ರಾಯೋಜಿಸುತ್ತಿದ್ದಾರೆಂಬ ಆರೋಪಗಳಿವೆ. ಹೊಸ ವಿಧಾನಪರಿಷತ್ತಿನ ಸದಸ್ಯರಾಗಲಿ ಅಥವ ಕುಪೇಂದ್ರ ರೆಡ್ಡಿ ಅವರಾಗಲಿ ಪ್ರವಾಸಕ್ಕೆ ಪ್ರಾಯೋಜಕತ್ವ ನೀಡುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.