ವರ್ತೂರು ಸಹವಾಸ ಬೇಡವೆಂದ ಕೋಲಾರ ಮುಸ್ಲಿಮರು
ಕೋಲಾರ, ಏ.9- ಚುನಾವಣೆ ಕಾಲದಲ್ಲಿ ಸಣ್ಣಮಟ್ಟದಲ್ಲಿ 'ಆಪರೇಶನ್ ಹಸ್ತ' ಆರಂಭಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕೋಲಾರದಲ್ಲಿ ಒಂದಷ್ಟು ಹಿನ್ನಡೆಯಾಗಿದೆ. ಕೋಲಾರ ಅಹಿಂದದ ಅಧಿಪತಿ, ಶಾಸಕ ವರ್ತೂರು ಪ್ರಕಾಶ್ ಅವರನ್ನು ತಮ್ಮಡೆಗೆ ಸೆಳೆದುಕೊಳ್ಳುವಲ್ಲಿ ಸಿಎಂ ಸಿದ್ದು ಯಶಸ್ವಿಯಾಗಿದ್ದಾರೆ, ಆದರೆ ...
ಶಾಸಕ ವರ್ತೂರು ಪ್ರಕಾಶ್ ಕೋಲಾರದ ಪುರಾತನ ಅಭ್ಯರ್ಥಿ ಕೆಎಚ್ ಮುನಿಯಪ್ಪ ಅವರಿಗೆ ಬೆಂಬಲ ಘೋಷಿಸಿರುವುದು ಬ್ಯಾಕ್ ಫೈರ್ ಆಗುವ ಲಕ್ಷಣಗಳು ಗೋಚರವಾಗಿವೆ. ಕೋಲಾರದ ಸಮಸ್ತ ಮುಸ್ಲಿಮರು ಒಂದಂಶದ ನಿರ್ಣಯ ತೆಗೆದುಕೊಂಡಿದ್ದು, ಸ್ವತಂತ್ರ ಶಾಸಕ ವರ್ತೂರು ಪ್ರಕಾಶ್ ಅವರನ್ನು ಕಾಂಗ್ರೆಸ್ ಅಪ್ಪಿಕೊಂಡಿದ್ದೇ ಆದಲ್ಲಿ ತಾವು ಕಾಂಗ್ರೆಸ್ಸಿನಿಂದ ದೂರವಾಗುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.
ಏನಿದರ
ಅಸಲೀಯತ್ತು!?
(13
ಕ್ಷೇತ್ರಗಳತ್ತ
ಮಾತ್ರವೇ
ಜೆಡಿಎಸ್
ಗೌಡರ
ಚಿತ್ತ)
ಇಷ್ಟಕ್ಕೂ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಏನಾಗಿತ್ತೆಂದರೆ ಮೇಲ್ಮನೆ ಸದಸ್ಯ, ಕಾಂಗ್ರೆಸ್ಸಿನ ನಜೀರ್ ಅಹಮದ್ ಅವರನ್ನು ಸೋಲಿಸಿ, ವರ್ತೂರು ಶಾಸಕರಾಗಿದ್ದರು. ಇದಕ್ಕೆ ನೇರವಾಗಿ ಸಂಸದ ಕೆಎಚ್ ಮುನಿಯಪ್ಪ ನೆರವಾಗಿದ್ದರು. ಇದರಿಂದ ಕುಪಿತರಾಗಿರುವ ಕೋಲಾರ ಮುಸ್ಲಿಂ ಮತದಾರರು ನಜೀರ್ ಸೋಲಿಗೆ ಕಾರಣವಾದ ವರ್ತೂರು ಜತೆ ಮುನಿಯಪ್ಪ ಅವರು ಮತ್ತೆ ಕೈಜೋಡಿಸುವುದು ಬೇಡ ಎಂಬ ನಿರ್ಣಯ ಕೈಗೊಂಡಿದ್ದಾರೆ.