ಎಚ್ಡಿಕೆಯಿಂದ ಮತ್ತೊಮ್ಮೆ ದಾಖಲೆ ಬಿಡುಗಡೆಯ ಬೆದರಿಕೆ
ತಲಕಾವೇರಿ (ಕೊಡಗು), ಏ.1- ಮತ್ತೊಮ್ಮೆ ಸಂಸತ್ ಪ್ರವೇಶಿಲು ಇಚ್ಛಿಸಿರುವ ಮಾಜಿ ಸಂಸದ ಎಚ್ ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ (ಭಷ್ಟಾಚಾರದ ವಿರುದ್ಧ) ದಾಖಲೆಗಳನ್ನು ಬಿಡುಗಡೆ ಮಾಡುವ ಬೆದರಿಕೆಯೊಡ್ಡಿದ್ದಾರೆ.
ಬಿಎಸ್
ಯಡಿಯೂರಪ್ಪ
ಮುಖ್ಯಮಂತ್ರಿಯಾಗಿದ್ದಾಗ
ಆಗಾಗ
ದಾಖಲೆಗಳನ್ನು
ಬಿಡುಗಡೆ
ಮಾಡುವ
ಕಾರ್ಯಕ್ರಮಗಳನ್ನಿಟ್ಟುಕೊಂಡು
ಅವರನ್ನು
ಗೋಳುಹೊಯ್ದುಕೊಂಡಿದ್ದ
ಎಚ್ಡಿಕೆ
ಇದೀಗ
ಹಾಲಿ
ಮುಖ್ಯಮಂತ್ರಿ
ಸಿದ್ದರಾಮಯ್ಯ
ವಿರುದ್ಧ
ಗುಡುಗಿದ್ದಾರೆ.
[ಮೋದಿ
ಮಾತನ್ನು
ಕನ್ನಡದಲ್ಲಿ
ಕೇಳಿರಿ]
ರೇವಣ್ಣ ಹಾಸನದಲ್ಲಿ ಆಲೂಗಡ್ಡೆ ಮಾರಾಟ ಮಾಡ್ತಿದ್ದರಾ?
ಇಷ್ಟಕ್ಕೂ ಚುನಾವಣಾ ಪ್ರಚಾರ ಭರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಏನು ಹೇಳಿದ್ದರೆಂದರೆ ರೇವಣ್ಣ ಮತ್ತು ಕುಮಾರಣ್ಣ ಅವರೇನು ಹಾಸನದಲ್ಲಿ ಆಲೂಗಡ್ಡೆ ಮಾರಾಟ ಮಾಡಿ, ಕೋಟಿಗಳನ್ನು ಗಳಿಸಿದರಾ? ಮಾಜಿ ಪ್ರಧಾನಿ ಕೋಟ್ಯಂತರ ರೂಪಾಯಿ ಆಸ್ತಿ ಎಲ್ಲಿಂದ ಬಂತು ಎಂಬುದನ್ನು ಬಹಿರಂಗಪಡಿಸಲಿ ಎಂದು ಲೇವಡಿ ಮಾಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಸಿದ್ದರಾಮಯ್ಯ ಕುಮ್ಮಕ್ಕು:
ರಾಜ್ಯದಲ್ಲಿ
ನಡೆಯುತ್ತಿರುವ
ಅಕ್ರಮ
ಗಣಿಗಾರಿಕೆಗೆ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಒಳಗೊಳಗೆ
ಕುಮ್ಮಕ್ಕು
ನೀಡುತ್ತಿದ್ದಾರೆ
ಮತ್ತು
ಅಕ್ರಮ
ಗಣಿಗಾರಿಕೆ
ನಡೆಸುವವರನ್ನು
ರಕ್ಷಣೆ
ಮಾಡುತ್ತಿದ್ದಾರೆ
ಎಂದು
ಗಂಭೀರ
ಆರೋಪ
ಮಾಡಿರುವ
ಮಾಜಿ
ಮುಖ್ಯಮಂತ್ರಿ
ಹೆಚ್
ಡಿ
ಕುಮಾರಸ್ವಾಮಿ
ಈ
ಕುರಿತಂತೆ
ಸದ್ಯದಲ್ಲೇ
ದಾಖಲೆ
ಬಿಡುಗಡೆ
ಮಾಡುವೆ
ಎಂದು
ಹೇಳಿದ್ದಾರೆ.
ಮೊನ್ನೆ
ದೇವೇಗೌಡರೂ
ಸಹ
ಪಂಚೆ
ಎತ್ತಿ
ಕಟ್ಟಿ
ಬಳ್ಳಾರಿಗೆ
ಪಾದಯಾತ್ರೆ
ಬೆಳೆಸಿದ್ದ
ಸಿದ್ದರಾಮಯ್ಯ
ಈಗ್ಯಾಕೆ
ತಮ್ಮ
ಸಂಪುಟದಲ್ಲಿನ
ಕಳಂಕಿತರ
ಬಗ್ಗೆ
ಮೌನವಾಗಿದ್ದಾರೆ
ಎಂದು
ಕಿಡಿಕಾರಿದ್ದರು.
ಸಿದ್ದರಾಮಯ್ಯಗೆ ದಮ್ಮಿದ್ದರೆ ಸಿಬಿಐಗೆ ಒಪ್ಪಿಸಲಿ
ಕೊಡಗಿನ ತಲಕಾವೇರಿಯಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಮ್ಮಿದ್ದರೆ ನಮ್ಮ ಕುಟುಂಬದ ಆಸ್ತಿ ಬಗ್ಗೆ ಸಿಬಿಐ ತನಿಖೆ ನಡೆಸಲು ಆದೇಶಿಸಲಿ ಎಂದೂ ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಬಳ್ಳಾರಿಗೆ ಪಾದಯಾತ್ರೆ ಢೋಂಗಿತನದ್ದು
ಸಿದ್ದರಾಮಯ್ಯ ಅವರು ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿದ್ದು ಬರೀ ಪ್ರದರ್ಶನಕ್ಕೆ ಮಾತ್ರ ಅವರ ಪಾದಯಾತ್ರೆ ಢೋಂಗಿತನದ್ದು ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. ಸಿದ್ದರಾಮಯ್ಯ ಅವರಿಗೆ ಅಧಿಕಾರದ ಮದ ತಲೆಗೇರಿದೆ. ಆದ್ದರಿಂದ ಅವರು ಬಾಯಿಗೆ ಬಂದಂತೆ ದುರಹಂಕಾರದಿಂದ ಮಾತನಾಡುತ್ತಿದ್ದಾರೆ. ಅವರ ಈ ಮಾತುಗಳು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುವಂತಹುದಲ್ಲ. ಅವರು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡುವುದು ಒಳ್ಳೆಯದು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ನಾವು ಏನು ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ
ನಮ್ಮ ಕುಟುಂಬ ಹಲವು ದಶಕಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದು, ನಾವು ಏನು ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ಸಿದ್ದರಾಮಯ್ಯರವರು ಏನೇ ಮಾತನಾಡಿದರೂ ಜನ ಅವರ ಮಾತಿಗೆ ಬೆಲೆ ಕೊಡುವುದಿಲ್ಲ ಎಂದು ಹೇಳಿದರು.