ಧಾರವಾಡ-ಬೆಂಗಳೂರು ರೈಲಿಗೆ ಬಾಂಬ್ ಬೆದರಿಕೆ ಕರೆ
ಹಾಸನ, ಜೂ. 11 : ಧಾರವಾಡದಿಂದ ಬೆಂಗಳೂರಿಗೆ ಬರುವ ಇಂಟರ್ ಸಿಟಿ ರೈಲಿನಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆ ಹಾಸನ ರೈಲ್ವೆ ನಿಲ್ದಾಣಕ್ಕೆ ಬಂದಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನದಳದ ಸಿಬ್ಬಂದಿ ಅರಸೀಕೆರೆ ರೈಲು ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಾರೆ.
ಬುಧವಾರ
ಮಧ್ಯಾಹ್ನ
12
ಗಂಟೆಯ
ಸುಮಾರಿಗೆ
ಹಾಸನ
ರೈಲು
ನಿಲ್ದಾಣಕ್ಕೆ
ಅಪರಿಚಿತನೊಬ್ಬ
ಕರೆ
ಮಾಡಿ
ಧಾರವಾಡ-ಬೆಂಗಳೂರು
ರೈಲಿನಲ್ಲಿ
ಬಾಂಬ್
ಇಡಲಾಗಿದೆ
ಎಂದು
ಮಾಹಿತಿ
ನೀಡಿದ್ದಾರೆ.
ಆಗ
ರೈಲು
ಅರಸೀಕೆರೆ
ನಿಲ್ದಾಣದ
ಸಮೀಪದಲ್ಲಿತ್ತು.
ಕರೆಯನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ನಿಲ್ದಾಣದವರು ಅರಸೀಕೆರೆ ನಿಲ್ದಾಣಕ್ಕೆ ತಕ್ಷಣ ಮಾಹಿತಿ ನೀಡಿದ್ದಾರೆ. ಆದ್ದರಿಂದ ಇಂಟರ್ ಸಿಟಿ ರೈಲನ್ನು ಅರಸೀಕೆರೆ ನಿಲ್ದಾಣದಲ್ಲಿ ನಿಲ್ಲಿಸಿ, ಪ್ರಯಾಣಿಕರನ್ನು ಕೆಳಗಿಸಿಳಿಸಿ ತಪಾಸಣೆ ನಡೆಸಲಾಗುತ್ತಿದೆ. [ಚೆನ್ನೈ ರೈಲು ಸ್ಫೋಟದ ಚಿತ್ರಗಳು]
ರೈಲು ನಿಲ್ದಾಣಕ್ಕೆ ಬಾಂಬ್ ನಿಷ್ಕ್ರಿಯದಳ ಮತ್ತು ಶ್ವಾನದಳದ ಸಿಬ್ಬಂದಿ ನಿಲ್ದಾಣಕ್ಕೆ ಆಗಮಿಸಿದ್ದು, ಬಾಂಬ್ ಪತ್ತೆ ಕಾರ್ಯ ಆರಂಭಿಸಿದ್ದಾರೆ. ರೈಲಿನ ಬೋಗಿಗಳಲ್ಲಿರುವ ಪ್ರಯಾಣಿಕರ ಲಗೇಜ್ ಗಳನ್ನು ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದು, ತಪಾಪಣೆ ನಂತರ ರೈಲು ಮತ್ತೆ ಹೊರಡಲಿದೆ.