ರೈಲು ಯೋಜನೆಗಳಿಗೆ ಹಣ ನೀಡಲು ಸಿದ್ಧ : ಸಿಎಂ
ಬೆಂಗಳೂರು, ಜು. 18 : ಕರ್ನಾಟಕಕ್ಕೆ ಮಂಜೂರಾಗಿರುವ ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರದ ಪಾಲನ್ನು ಒದಗಿಸಲಾಗುತ್ತದೆ. 2014-15 ನೇ ಸಾಲಿನ ಆಯವ್ಯಯದಲ್ಲಿ 540 ಕೋಟಿ ರೂ. ಗಳನ್ನು ರೈಲ್ವೆ ಯೋಜನೆಗಳಿಗಾಗಿ ಹಂಚಿಕೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಪರಿಷತ್ತಿನಲ್ಲಿ ಹೇಳಿದ್ದಾರೆ.
ರೈಲ್ವೆ
ಯೋಜನೆಗಳಿಗೆ
ಹಣ
ಮತ್ತು
ಜಮೀನನ್ನು
ಕೊಡಲು
ಸಾಧ್ಯವಿಲ್ಲವೆಂದು
ಕೇಂದ್ರ
ರೈಲ್ವೆ
ಸಚಿವರಿಗೆ
ಮುಖ್ಯಮಂತ್ರಿಗಳು
ಪತ್ರ
ಬರೆದಿದ್ದಾರೆಂಬ
ಪ್ರಕರಣದ
ಬಗ್ಗೆ
ಚರ್ಚೆ
ನಡೆಸಬೇಕು
ಎಂದು
ವಿಧಾನಪರಿಷತ್ತಿನ
ವಿರೋಧ
ಪಕ್ಷದ
ನಾಯಕ
ಕೆ.ಎಸ್.ಈಶ್ವರಪ್ಪ
ಗುರುವಾರದ
ಕಲಾಪದ
ವೇಳೆ
ಆಗ್ರಹಿಸಿದರು.
ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್. ರೋಷನ್ ಬೇಗ್ ಅವರು ಈಶ್ವರಪ್ಪ ಪ್ರಶ್ನೆಗೆ ಉತ್ತರ ನೀಡಿದರು. ನಂತರ ಈ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮ ರಾಜ್ಯದವರೇ ಆದ ಸದಾನಂದ ಗೌಡರು ಕೇಂದ್ರ ರೈಲ್ವೆ ಸಚಿವರಾಗಿರುವುದು ನಮಗೆ ಸಂತೋಷ ತಂದಿದೆ. [ಸದನದಲ್ಲಿ ಸಹನೆ ಕಳೆದುಕೊಂಡ ಗೃಹ ಸಚಿವರು]
ಸದಾನಂದ ಗೌಡರು ಅವರು ರಾಜ್ಯಕ್ಕೆ ಹೊಸ ಯೋಜನೆಗಳನ್ನು ನೀಡಿರುವುದನ್ನು ಸರ್ಕಾರ ಸ್ವಾಗತಿಸುತ್ತದೆ. ಈಗಾಗಲೇ ಶಿವಮೊಗ್ಗ-ತಾಳಗುಪ್ಪ, ಸೋಲಾಪುರ-ಗದಗ್, ಕೊಟ್ಟೂರು-ಹರಿಹರ, ಕಡೂರು-ಚಿಕ್ಕಮಗಳೂರು, ಕೋಲಾರ-ಚಿಕ್ಕಬಳ್ಳಾಪುರ, ಮಾರ್ಗದ ಐದು ರೈಲು ಮಾರ್ಗಗಳನ್ನು ವೆಚ್ಚ ಹಂಚಿಕೆ ಆಧಾರದಡಿ ಪೂರ್ಣಗೊಳಿಸಲಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟಾರೆ 13 ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಳ್ಳಬೇಕಾಗಿರುವುದರಿಂದ 2013-14 ರ ಆಯ್ಯವ್ಯಯದಲ್ಲಿ ರೈಲ್ವೆ ಯೋಜನೆಗಳಿಗೆ 373 ಕೋಟಿ ರೂ.ಗಳೊಂದಿಗೆ ಹೆಚ್ಚುವರಿಯಾಗಿ 100 ಕೋಟಿ ರೂ. ಗಳನ್ನು ಪೂರಕ ಅಂದಾಜಿನಲ್ಲಿ ಬಿಡುಗಡೆಗೊಳಿಸಲಾಗಿತ್ತು. 2014-15 ನೇ ಸಾಲಿನ ಆಯವ್ಯಯದಲ್ಲಿ 540 ಕೋಟಿ ರೂ. ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. [ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]
ಕರ್ನಾಟಕ ರೈಲ್ವೆ ಯೋಜನೆಗಳಿಗೆ ಇಷ್ಟೊಂದು ಹಣ ವೆಚ್ಚ ಮಾಡುವುದರ ಜೊತೆಗೆ ರಾಜ್ಯದ ಹಲವಾರು ಜನೋಪಯೋಗಿ ಯೋಜನೆಗಳಿಗೆ ಅನುದಾನವನ್ನು ಒದಗಿಸಬೇಕಾಗಿದೆ. ಆದ್ದರಿಂದ ರಾಜ್ಯದ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಅನುಕೂಲ ಮಾಡಿಕೊಡುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಎಂದರು.
ಸದ್ಯದ ಒಪ್ಪಂದದಂತೆ ಕೇಂದ್ರ ಸರ್ಕಾರ ಶೇ 50 ರಷ್ಟು ಮತ್ತು ರಾಜ್ಯ ಸರ್ಕಾರ ಶೇ 50 ರ ಅನುಪಾತದಲ್ಲಿ ಯೋಜನೆಗಳಿಗೆ ಹಣವನ್ನು ಭರಿಸುವ ಜೊತೆಗೆ ಉಚಿತ ಭೂಮಿಯನ್ನು ರಾಜ್ಯ ಸರ್ಕಾರ ನೀಡಬೇಕಿದೆ. ಆದರೆ, ನೆರೆಯ ಆಂಧ್ರ ಪ್ರದೇಶದ ರಾಜ್ಯ ಕೆಲವು ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಶೇ 75 ಮತ್ತು ರಾಜ್ಯ ಸರ್ಕಾರ ಶೇ 25 ರ ಅನುಪಾತದಲ್ಲಿ ಅನುಮೋದನೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಆದ್ದರಿಂದ, ರಾಜ್ಯದ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಹೆಚ್ಚಿಸುವ ಮೂಲಕ ರಾಜ್ಯ ಸರ್ಕಾರಕ್ಕೆ ಅನುಕೂಲ ಮಾಡಿಕೊಡುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ ಹೊರತು, ಪತ್ರದಲ್ಲಿ ಯೋಜನೆಗಳಿಗೆ ಭೂಮಿ ಮತ್ತು ಹಣವನ್ನು ಕೊಡುವುದಿಲ್ಲ ಎಂದು ತಿಳಿಸಿಲ್ಲ ಎಂದು ಮುಖ್ಯಮಂತ್ರಿಗಳು ಸದನಕ್ಕೆ ಸ್ಪಷ್ಟನೆ ನೀಡಿದರು.