ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಏಕನಾಥೇಶ್ವರಿ ದೇವಾಲಯದಲ್ಲಿ ಬೆಂಕಿ :1.5ಲಕ್ಷ ನಷ್ಟ
ಚಿತ್ರದುರ್ಗ, ಜು. 9: ಏಳು ಸುತ್ತಿನ ಕೋಟೆಯ ಅಧಿದೇವತೆ ಚಿತ್ರದುರ್ಗದ ಏಕನಾಥೇಶ್ವರಿ ದೇವಾಲಯದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ದೇವಿಗೆ ಭಕ್ತರು ಸಲ್ಲಿಸಿದ್ದ ಹರಕೆಯ ಸೀರೆಗಳು, ಉತ್ಸವ ಮಂಟಪ, ಪೂಜೆ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ.
ಸೋಮವಾರ ಬೆಳಗ್ಗೆ ಬೆಟ್ಟಕ್ಕೆ ವಾಯುವಿಹಾರಕ್ಕಾಗಿ ಹೋದವರಿಗೆ ಬೆಂಕಿ ಕಾಣಿಸಿದ್ದು, ಅವರು ಅರ್ಚಕರಿಗೆ ತಿಳಿಸಿದ್ದಾರೆ. ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ಹೋಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ, ಸಾರ್ವಜನಿಕರ ಸಹಕಾರದಿಂದ ಬೆಂಕಿಯನ್ನು ಆರಿಸಿದ್ದಾರೆ.[ಶಾಪ ವಿಮೋಚನೆಗೆ ಕಾದಿರುವ ದುರ್ಗದ ಬಂಡೆಗಳು]
ಏಳುಸುತ್ತಿನ ಕೋಟೆಯಲ್ಲಿರುವ ದೇವಾಲಯ ಮುಜರಾಯಿ ಇಲಾಖೆಯ ವಶದಲ್ಲಿದೆ. ದುರ್ಗವನ್ನು ಆಳಿದ ವೀರ ಮದಕರಿನಾಯಕನ ಕುಲದೇವತೆ ಏಕನಾಥೇಶ್ವರಿ. 16ನೇ ಶತಮಾನದಲ್ಲಿ ಕದಂಬ ರಾಜವಂಶಸ್ಥ ಮಯೂರವರ್ಮ ಈ ದೇವಾಲಯವನ್ನು ನಿರ್ಮಿಸಿದ್ದು, ಬೆಂಗಳೂರಿನಿಂದ ವಾಯುವ್ಯಕ್ಕೆ 200 ಕಿ.ಮೀ ದೂರದಲ್ಲಿದೆ.
Comments
English summary
A fire broke out on July 8 at the historic Ekanatheshwari temple in the south Indian state of Karnataka. An electric short-circuit caused the fire.