ಸಿದ್ದು ಚಿಕಿತ್ಸೆಗೆ ಬಿಜೆಪಿ ದುಡ್ಡು : ಸಿಟಿ ರವಿ ವಂಗ್ಯ
ಬೆಂಗಳೂರು, ಆ, 21 : ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಎಂದು ಕರೆದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನಸಿಕ ಸ್ಥಿತಿ ಸರಿಯಿಲ್ಲದಂತೆ ಕಾಣುತ್ತಿದೆ. ಒಂದು ವೇಳೆ ಕಾಂಗ್ರೆಸ್ ಅವರಿಗೆ ಚಿಕಿತ್ಸೆ ನೀಡುವುದೇ ಆದರೆ ಅದರ ವೆಚ್ಚವನ್ನು ಬಿಜೆಪಿ ಕಾರ್ಯಕರ್ತರೇ ಭರಿಸಲಿದ್ದಾರೆ ಎಂದು ಶಾಸಕ ಸಿ.ಟಿ.ರವಿ ವ್ಯಂಗವಾಡಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ರಾಜ್ಯದ ಆಡಳಿತದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಬದಲಾಗಿ ನಿಂತಲ್ಲಿ, ಕುತಲ್ಲಿ ನಿದ್ರೆ ಮಾಡುತ್ತ ದಿನ ದೂಡುತ್ತಿದ್ದಾರೆ. ನಾಲಿಗೆ ಮೇಲೆ ಹಿಡಿತ ಕಳೆದುಕೊಂಡು ಅರ್ಥವಿಲ್ಲದ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯಾವ
ಆಧಾರದ
ಮೇಲೆ
ಪ್ರಧಾನಿ
ನರೇಂದ್ರ
ಮೋದಿ
ಅವರನ್ನು
ಹಿಟ್ಲರ್ಗೆ
ಹೋಲಿಸಿದ್ದಾರೆ.
ಈ
ಬಗ್ಗೆ
ಸ್ಪಷ್ಟನೆ
ನೀಡಬೇಕು
ಎಂದು
ಒತ್ತಾಯಿಸಿದರು.
ಕಾಂಗ್ರೆಸ್ನಲ್ಲಿ
ನಾಯಕತ್ವ
ಕೊರತೆ
ಎದುರಾಗಿದೆ.
ಸ್ವತಃ
ಸ್ಪೀಕರ್
ಕಾಗೋಡು
ತಿಮ್ಮಪ್ಪನವರೇ
ಸರ್ಕಾರದ
ಮೇಲೆ
ಪ್ರತಿದಿನ
ಚಾಟಿ
ಬೀಸುತ್ತಿದ್ದಾರೆ.
ಲೋಕಸಭಾ
ಸೋಲಿನಿಂದ
ಹತಾಶರಾಗಿರುವ
ಮುಖಂಡರು
ಸಲ್ಲದ
ಹೇಳಿಕೆ
ನೀಡುತ್ತಿದ್ದಾರೆ
ಎಂದು
ಆರೋಪಿಸಿದರು.
ಬಿಜೆಪಿ 'ಕಾಂಗ್ರೆಸ್ ಮುಕ್ತ ಭಾರತ' ಎಂಬ ಕಲ್ಪನೆ ಮುಂದಿಟ್ಟುಕೊಂಡು ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಮುನ್ನಡೆಯುತ್ತಿದೆ. ದೇಶದ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ ಎಂದು ಹೇಳಿದರು.