ಸೋನಿಯಾ ಗಾಂಧಿ ಮಂಡ್ಯ ಸಮಾವೇಶ : ಚಿತ್ರ ವರದಿ
ಮಂಡ್ಯ, ಸೆ.30: ಸಕ್ಕರೆ ನಾಡು ಮಂಡ್ಯಕ್ಕೆ ಆಗಮಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಪ್ಪು ಬಾವುಟದ ಸ್ವಾಗತ ಸಿಕ್ಕಿದೆ. ರಾಜ್ಯ ವಿಧಾನಸಭೆ ಮತ್ತು ಲೋಕಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಿದ ಮತದಾರರಿಗೆ ಸೋನಿಯಾ ಅವರು ಕೃತಜ್ಞತೆ ಅರ್ಪಿಸಿದರು.
ಆದರೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಭಾಷಣದ ವೇಳೆ ನೆರೆದಿದ್ದ ಜನರ ಪೈಕಿಯೊಬ್ಬ ಕಪ್ಪು ಬಾವುಟ ಪ್ರದರ್ಶಿಸಿದ್ದು ಕೆಪಿಸಿಸಿಗೆ ಮುಜುಗರ ತಂದಿತು. ನಂತರ ಸಾಕಷ್ಟು ಪೆಟ್ಟು ತಿಂದ ಹಾಗೆ ಕಾಣುತ್ತಿದ್ದ ವ್ಯಕ್ತಿಯನ್ನು ಕಾಂಗ್ರೆಸ್ ಸದಸ್ಯರು ಪಕ್ಕಕ್ಕೆ ಕರೆದೊಯ್ದರು. ಇದು ಬಿಟ್ಟರೆ ಲಡ್ಡು ಹಂಚಿಕೆ ಕಾರ್ಯಕ್ರಮದಲ್ಲಿ ಭಾರಿ ಗೊಂದಲವುಂಟಾಗಿತ್ತು. ಉಳಿದಂತೆ ಕಾರ್ಯಕ್ರಮ ಬಿಗಿ ಬಂದೋಬಸ್ತ್ ನಡುವೆ ಸಾಂಗವಾಗಿ ಸಾಗಿತು.
ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಕೃತಜ್ಞತಾ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಕರ್ನಾಟಕ ಮೇಲುಸ್ತುವಾರಿ ದಿಗ್ವಿಜಯ ಸಿಂಗ್ ಅವರು ಸೇರಿದಂತೆ ರಾಜ್ಯದ ಪ್ರಮುಖ ನಾಯಕರುಗಳಾದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಂಡ್ಯ ಸಂಸದೆ ರಮ್ಯಾ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಾದ ಡಿ.ಕೆ ಸುರೇಶ್, ಶಾಸಕ ಡಿಕೆ ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ಜಿಪರಮೇಶ್ವರ ಅವರು ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಸಂಸದೆ ರಮ್ಯಾ, ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಭಾಷಣ ಮುಖ್ಯಾಂಶಗಳ ವಿವರ ಮುಂದೆ ಓದಿ..
ಸಂಸದೆ ರಮ್ಯಾ ಚುಟುಕು ಭಾಷಣ
ಸಮಾವೇಶದ ಆರಂಭದಲ್ಲಿ ಮಾತನಾಡಿದ ಸಂಸದೆ ರಮ್ಯಾ ಅವರು ತಮ್ಮನ್ನು ಸಂಸದರಾಗಿ ಆಯ್ಕೆ ಮಾಡಿದ ಮಂಡ್ಯ ಜನತೆಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. 'ತಾವು ಓರ್ವ ಹೆಣ್ಣಾಗಿದ್ದು ಮತ್ತೊಂದು ಹೆಣ್ಣಿನ ಮನಸ್ಸನ್ನು ಅರಿಯಬಲ್ಲೆ.
ಚುನಾವಣೆ ವೇಳೆ ನನ್ನ ತಂದೆ ಸಾವಿಗೀಡಾಗಿದ್ದರು. ಆಗ ನಾನು ಪ್ರಚಾರದಿಂದ ದೂರವುಳಿದಿದ್ದೆ. ಆದರೂ ಕೂಡ ಮಂಡ್ಯ ಜನತೆ ನನ್ನ ಮೇಲೆ ಭರವಸೆ ಇಟ್ಟು, ನನ್ನ ಸಂಸದೆಯಾಗಿ ಆರಿಸಿದ್ದಾರೆ. ಇದಕ್ಕಾಗಿ ನಾನು ಚಿರಋಣಿ ಎಂದು ಹೇಳಿದರು.ಚಿತ್ರಕೃಪೆ: ದಿವ್ಯ ಸ್ಪಂದನ ಟ್ವೀಟ್ ಖಾತೆ
|
ಸಂಸದೆ ರಮ್ಯಾ ಟ್ವೀಟ್
ಮಂಡ್ಯದಲ್ಲಿ ನಡೆದ ಕೃತಜ್ಞತಾ ಸಮಾವೇಶದ ಬಗ್ಗೆ ರಮ್ಯಾ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದರು. ಜತೆಗೆ ವೇದಿಕೆ ಹತ್ತಿದ ಮೇಲೂ ಮೊಬೈಲ್ ನಿಂದ ವಿಡಿಯೋ ಮಾಡಿ ಎಲ್ಲರ ಹುಬ್ಭೇರಿಸಿದರು.
ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ
ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರು ಮಾತನಾಡಿ, ಚುನಾವಣಾ ಪೂರ್ವದಲ್ಲಿ ಸೋನಿಯಾ ಗಾಂಧಿ ಅವರು ಹೇಳಿದ್ದಂತೆ ನಾವು ಒಗ್ಗಟ್ಟಿನಿಂದಾಗಿ ಕೆಲಸ ಮಾಡಿದ್ದೇವೆ. ಚುನಾವಣೆ ಗೆಲುವಿಗೆ ಸೋನಿಯಾ ಗಾಂಧಿ ಅವರು ನೀಡಿದ್ದ ಮಾರ್ಗದರ್ಶನ ಬಹಳ ಸಹಕಾರಿಯಾಗಿತ್ತು.
ಜನತೆ ಕಾಂಗ್ರೆಸ್ ಮೇಲೆ ಭರವಸೆ ಇಟ್ಟು, ನಮ್ಮ ಅಭ್ಯರ್ಥಿಗಳನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಇದಕ್ಕಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
|
ಬಿಜೆಪಿ ಟ್ವೀಟ್
ಮಂಡ್ಯ ಸಮಾವೇಶದಲ್ಲಿ ಲಡ್ಡು ವಿತರಣೆ ಮಾಡಿದ ಕಾಂಗ್ರೆಸ್ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿ ಮತದಾರರೇ ಅಥವಾ ಭಿಕ್ಷುಕರೇ ಲಡ್ಡೂ ಎಸೆಯಲು ಎಂದು ಪ್ರಶ್ನಿಸಿತು.
ಟ್ರಾಫಿಕ್ ಜಾಮ್ ಪರದಾಟ
ಮಂಡ್ಯದ ಕಾರ್ಯಕ್ರಮಕ್ಕೆ ಬರೋಬ್ಬರಿ 2 ಸಾವಿರ ಕೆಎಸ್ ಆರ್ ಟಿಸಿ ಬಸ್ ಗಳನ್ನು ಒಪ್ಪಂದದ ಮೇಲೆ ಪಡೆದುಕೊಳ್ಳಲಾಗಿದೆ. ಸುಮಾರು 500 ರಿಂದ 600 ಖಾಸಗಿ ಬಸ್ ಗಳನ್ನು ಬಳಸಿಕೊಳ್ಳಲಾಗಿದೆ. ಹೀಗಾಗಿ ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ ಜಿಲ್ಲೆಗಳ ಪ್ರಯಾಣಿಕರು ಬಸ್ ಗಳಿಲ್ಲದೆ ಪರದಾಡುವಂತಾಯಿತು.
ಮಂಡ್ಯ, ಮದ್ದೂರು, ಮಳವಳ್ಳಿ, ಚನ್ನಪಟ್ಟಣ, ರಾಮನಗರ ಸೇರಿದಂತೆ ಬೆಂಗಳೂರು-ಮೈಸೂರು ರಸ್ತೆ ನಡುವೆ ಬರುವ ಪ್ರಯಾಣಿಕರು, ವಿದ್ಯಾರ್ಥಿಗಳು ಆಕ್ರೋಶ ಭರಿತರಾಗಿದ್ದರು.
ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ನಮ್ಮನ್ನು ತೊಂದರೆಗೆ ಸಿಲುಕಿಸಲಾಗಿದೆ ಎಂಬ ಆಕ್ರೋಶ ವ್ಯಕ್ತಪಡಿಸಿ ದಿಢೀರ್ ಪ್ರತಿಭಟನೆ ನಡೆಸಿದರು.ಸೋನಿಯಾ ನಿರೀಕ್ಷೆಯಲ್ಲಿ
ಸಂಸದೆ ರಮ್ಯಾ, ಶಾಸಕ ಅಂಬರೀಷ್, ಗೃಹ ಸಚಿವ ಕೆಜೆ ಚಾರ್ಜ್ ಜತೆ ಸ್ಥಳೀಯ ಕಾಂಗ್ರೆಸ್ ಮುಖಂಡರು
ಸಿದ್ದರಾಮಯ್ಯ ಹೊಗಳಿದ ಸೋನಿಯಾ
ಸೋನಿಯಾ ಅವರು ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯ ಅವರ ಆಡಳಿತವನ್ನು ಹಾಡಿ ಹೊಗಳಿದರು. ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆ, ರೈತರಿಗೆ ಕಡಿಮೆ ದರದಲ್ಲಿ ಸಾಲ ನೀಡಿಕೆ ಬಗ್ಗೆ ರಾಷ್ಟ್ರಮಟ್ಟದ ಪ್ರಶಂಸೆ ಸಿಕ್ಕಿದೆ.
ಚುನಾವಣೆ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ. ಮಹಾತ್ಮ ಗಾಂಧೀಜಿ, ಜವಹಾರ್ ಲಾಲ್ ನೆಹರೂ, ಇಂದಿರಾಗಾಂಧಿ ಅವರ ಆದರ್ಶದಂತೆ ಕಾಂಗ್ರೆಸ್ ರಾಜ್ಯಭಾರ ಮಾಡುತ್ತಿದೆ.
ಮನಮೋಹನ್ ಸಿಂಗ್ ಸರ್ಕಾರದ ಆಹಾರ ಭದ್ರತಾ ಮಸೂದೆ, ಭೂ ಸ್ವಾದೀನ ಕಾಯ್ದೆ ಬಗ್ಗೆ ಪ್ರಸ್ತಾಪಿಸಿದರು. ಎಸ್ಸೆಂ ಕೃಷ್ಣ ಕಾಲದಲ್ಲಿ ಬೆಂಗಳೂರು ಐಟಿ ಅಭಿವೃದ್ಧಿ ಬಗ್ಗೆ ಆಯ್ತು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 21 ರಿಂದ 25 ಸೀಟುಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸೋನಿಯಾ ಭಾಷಣದ ತುಣುಕು
ಸಕ್ಕರೆ ನಾಡಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಭಾಷಣದ ತುಣುಕು
|
ಸೋನಿಯಾಗೆ ಕಪ್ಪು ಬಾವುಟ
ಕಾಂಗ್ರೆಸ್ ದಲಿತರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಸೋನಿಯಾ ಅವರ ಭಾಷಣದ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದ ದಲಿತ ಸಂಘರ್ಷ ಸಮಿತಿ ಸದಸ್ಯ