ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಸರತ್ತು ದೆಹಲಿಗೆ
ಬೆಂಗಳೂರು, ಜೂನ್ 3 : ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕಗ್ಗಂಟು ದೆಹಲಿ ತಲುಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬುಧವಾರ ದೆಹಲಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ಈ ಕುರಿತು ಮಾತುಕತೆ ನಡೆಸಲಿದ್ದಾರೆ.
ವಿಧಾನಪರಿಷತ್ತಿನ
9
ಮತ್ತು
ರಾಜ್ಯಸಭೆಯ
2
ಸ್ಥಾನಗಳಿಗೆ
ಅಭ್ಯರ್ಥಿಗಳನ್ನು
ಆಯ್ಕೆ
ಮಾಡಬೇಕಾಗಿದೆ.
ಕಳೆದ
ವಾರ
ಕರ್ನಾಟಕಕ್ಕೆ
ಆಗಮಿಸಿದ್ದ
ರಾಜ್ಯ
ಕಾಂಗ್ರೆಸ್
ಉಸ್ತುವಾರಿ
ದಿಗ್ವಜಯ್
ಸಿಂಗ್
ಅವರ
ನೇತೃತ್ವದಲ್ಲಿ
ಅಭ್ಯರ್ಥಿಗಳ
ಆಯ್ಕೆಗಾಗಿ
ನಡೆದ
ಸಭೆಯಲ್ಲಿ
ಅಂತಿಮ
ನಿರ್ಧಾರವನ್ನು
ತೆಗೆದುಕೊಳ್ಳಲು
ಸಾಧ್ಯವಾಗಿಲ್ಲ.
ಆದ್ದರಿಂದ
ಕಸರತ್ತು
ದೆಹಲಿ
ಅಂಗಳ
ತಲುಪಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಂಗಳವಾರ ಸಂಜೆ ದೆಹಲಿಗೆ ಪ್ರಯಾಣ ಬೆಳೆಸಲಿದ್ದು, ಬುಧವಾರ ಮಧ್ಯಾಹ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಅದಕ್ಕೂ ಮೊದಲು ದಿಗ್ವಿಜಯ್ ಸಿಂಗ್ ಜೊತೆ ಒಂದು ಸುತ್ತಿನ ಚರ್ಚೆ ನಡೆಸಲಿದ್ದಾರೆ. [ಚಿದಂಬರಂ ಆಯ್ಕೆ ಮಾಡಲು ಒಪ್ಪದ ಸಿಎಂ]
ಜೂನ್ 19ರಂದು ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆ ನಡೆಯಲಿದೆ. ವಿಧಾನಸಭೆಯಲ್ಲಿ 122 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ ಪಕ್ಷ ವಿಧಾನಪರಿಷತ್ತಿನ 4 ಮತ್ತು ರಾಜ್ಯಸಭೆಯ 2 ಸ್ಥಾನಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಲಿದೆ. ಈ ಸ್ಥಾನಗಳಿಗೆ ಪೈಪೋಟಿಯೂ ಅಧಿಕವಾಗಿದ್ದು, ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.
ಎಸ್.ಎಂ.ಕೃಷ್ಣ, ಬಿ.ಕೆ.ಹರಿಪ್ರಸಾದ್ ಅವರಿಂದ ತೆರವಾಗುವ ರಾಜ್ಯಸಭೆ ಸ್ಥಾನಕ್ಕೆ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಆಯ್ಕೆ ಮಾಡಲು ಬಗ್ಗೆ ಚಿಂತನೆ ನಡೆಸಿದೆ. ಆದರೆ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪರಮಾಪ್ತ ಸಿ.ಎಂ.ಇಬ್ರಾಹಿಂ ಹೆಸರು ಸೂಚಿಸಿರುವುದರಿಂದ ಆಯ್ಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ.
ನಾಮ ನಿರ್ದೇಶಿತರ ಆಯ್ಕೆ : ವಿಧಾನಪರಿಷತ್ತಿಗೆ ಆರೋಗ್ಯ, ಶಿಕ್ಷಣ, ಸಮಾಜಸೇವೆ, ಸಾಹಿತ್ಯ ಮತ್ತು ಚಲನಚಿತ್ರ ಸೇರಿದಂತೆ ಐದು ಕ್ಷೇತ್ರಗಳ ಸಾಧಕರನ್ನು ಸದಸ್ಯರಾಗಿ ನಾಮನಿರ್ದೇಶ ಮಾಡಬೇಕಾಗಿದೆ. ಈ ಹಿನ್ನಲೆಯಲ್ಲಿ ಹೈಕಮಾಂಡ್ ನಾಯಕರ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ.
ಬಿಜೆಪಿ ಸಭೆ ಮುಂದೂಡಿಕೆ : ವಿಧಾನ ಪರಿಷತ್ ಮತ್ತು ರಾಜ್ಯಸಭೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಸಭೆ ಕೇಂದ್ರ ಸಚಿವ ಗೋಪಿನಾಥ್ ಮುಂಡೆ ಅವರ ನಿಧನದಿಂದಾಗಿ ರದ್ದಾಗಿದೆ. ಸಭೆ ಸೇರಿದ್ದ ಬಿಜೆಪಿ ನಾಯಕರು ಮುಂಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಸಭೆಯನ್ನು ಮುಂದೂಡಿದ್ದಾರೆ. [ಮುಂಡೆ ನಿಧನಕ್ಕೆ ಟ್ವೀಟರ್ ನಲ್ಲಿ ಶ್ರದ್ಧಾಂಜಲಿ]