ಸದ್ಯದಲ್ಲೇ ಟ್ವಿಟ್ಟರ್ಗೆ ಸಿಎಂ ಸಿದ್ದರಾಮಯ್ಯ ಎಂಟ್ರಿ!
ಬೆಂಗಳೂರು, ಮೇ.22: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲು ಸೋಷಿಯಲ್ ಮೀಡಿಯಾ ಪ್ರಚಾರ ಕಾರಣ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವರಿಕೆಯಾಗಿದ್ದು ಸದ್ಯದಲ್ಲಿ ಟ್ವಿಟ್ಟರ್ಗೆ ಎಂಟ್ರಿ ಕೊಡಲಿದ್ದಾರೆ.
ಮೂಲಗಳ ಪ್ರಕಾರ ಸಿದ್ದರಾಮಯ್ಯನವರಿಗೆ ಸೋಷಿಯಲ್ ಮೀಡಿಯಾದಲ್ಲಿ ಖಾತೆ ತೆರೆಯಲು ಇಷ್ಟವಿಲ್ಲವಂತೆ. ಆದರೆ ಕಳೆದ ವಾರ ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ದಿಗ್ವಿಜಯ್ ಸಿಂಗ್ ಮುಖ್ಯಮಂತ್ರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಕ್ರೀಯವಾಗಿರುವಂತೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಟ್ವಿಟ್ಟರ್ ಖಾತೆ ತೆರೆಯಲು ಸಿದ್ದರಾಮಯ್ಯ ಮುಂದಾಗುತ್ತಿದ್ದಾರೆ.[ಫೇಸ್ಬುಕ್,ಟ್ವಿಟ್ಟರ್ ನಿಷೇಧಿಸಿ - ರಾಹುಲ್ ಗಾಂಧಿ]
ಲೋಕಸಭಾ ಚುನಾವಣೆಯ ಮುನ್ನಾ ಮುಖ್ಯಮಂತ್ರಿ ಹೆಸರಿನಲ್ಲಿ ವೆಬ್ಸೈಟ್ ತರೆಯಲು ಕಾಂಗ್ರೆಸ್ ಯೋಚಿಸಿತ್ತು. ಆದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ವೆಬ್ಸೈಟ್ ಇನ್ನೂ ತೆರೆಯಲು ಸಾಧ್ಯವಾಗಿಲ್ಲ. [ವಿವಾದದಲ್ಲಿ ಪ್ರಧಾನಿ ಕಚೇರಿ ಟ್ವಿಟ್ಟರ್ ಖಾತೆ]
ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಕೆಲ ಬೆರಳೆಣಿಕೆಯ ಮಂತ್ರಿಗಳು ಸೋಷಿಯಲ್ ಮೀಡಿಯಾದಲ್ಲಿ ಸಕ್ರೀಯರಾಗಿದ್ದಾರೆ. ಮುಂದಿನ ಪುಟದಲ್ಲಿ ಭಾರತದಲ್ಲಿ ಯಾವೆಲ್ಲ ರಾಜ್ಯದ ಮುಖ್ಯಮಂತ್ರಿಗಳು ಟ್ವಿಟ್ಟರ್ಲ್ಲಿ ಸಕ್ರೀಯರಾಗಿದ್ದಾರೆ ಎನ್ನುವುದಕ್ಕೆ ಮಾಹಿತಿ ನೀಡಲಾಗಿದೆ.
ಒಮರ್ ಅಬ್ದುಲ್ಲಾ
ಮುಖ್ಯಮಂತ್ರಿ ಜಮ್ಮುಕಾಶ್ಮೀರ, ಜಮ್ಮು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್
ಅಖಿಲೇಶ್ ಯಾದವ್
ಮುಖ್ಯಮಂತ್ರಿ ಉತ್ತರ ಪ್ರದೇಶ, ಎಸ್ಪಿ
ಮನೋಹರ್ ಪರಿಕ್ಕರ್
ಮುಖ್ಯಮಂತ್ರಿ ಗೋವಾ, ಬಿಜೆಪಿ
ಶಿವರಾಜ್ ಸಿಂಗ್ ಚೌಹಾಣ್
ಮುಖ್ಯಮಂತ್ರಿ ಮಧ್ಯಪ್ರದೇಶ, ಬಿಜೆಪಿ
ವಸುಂಧರಾ ರಾಜೇ
ಮುಖ್ಯಮಂತ್ರಿ ರಾಜಸ್ತಾನ, ಬಿಜೆಪಿ
ರಮಣ್ ಸಿಂಗ್
ಮುಖ್ಯಮಂತ್ರಿ ಛತ್ತೀಸಘಡ್, ಬಿಜೆಪಿ
ಆನಂದಿಬೆನ್ ಪಟೇಲ್
ಗುಜರಾತ್ ಮುಖ್ಯಮಂತ್ರಿ, ಬಿಜೆಪಿ