ಮೊಯ್ಲಿ ವಿರುದ್ಧ ತಿರುಗಿ ಬಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸಿಗರು
ಚಿಕ್ಕಬಳ್ಳಾಪುರ, ಜೂ. 17 : ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ವಿರುದ್ಧ ಜಿಲ್ಲಾ ಕಾಂಗ್ರೆಸ್ ನಾಯಕರು ತಿರುಗಿಬಿದ್ದಿದ್ದಾರೆ. ಮೊಯ್ಲಿ ಅವರಿಗೆ ಚುನಾವಣೆಯಲ್ಲಿ ಟಿಕೆಟ್ ಕೊಡಿಸಿದ್ದು, ರಿಲಯನ್ಸ್ ಕಂಪನಿಯ ಅನಿಲ್ ಅಂಬಾನಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ. ಆಂಜಿನಪ್ಪ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರದ
ಅಂಬೇಡ್ಕರ್
ಭವನದಲ್ಲಿ
ಸೋಮವಾರ
ಪತ್ರಿಕಾಗೋಷ್ಠಿ
ನಡೆಸಿದ
ಆಂಜಿನಪ್ಪ,
ಲೋಕಸಭಾ
ಕ್ಷೇತ್ರದ
ಚುನಾವಣೆಗೆ
ಪಕ್ಷದ
ಅಭ್ಯರ್ಥಿಗಳ
ಮೊದಲ
ಪಟ್ಟಿಯಲ್ಲಿ
ವೀರಪ್ಪ
ಮೊಯ್ಲಿ
ಹೆಸರು
ಇರಲಿಲ್ಲ.
ಅವರ
ವಿರುದ್ಧ
ಭ್ರಷ್ಟಾಚಾರದ
ಆರೋಪ
ಇದ್ದ
ಕಾರಣ
ಟಿಕೆಟ್
ನೀಡಲು
ಪಕ್ಷದ
ಹೈಕಮಾಂಡ್
ನಿರಾಕರಿಸಿತ್ತು
ಎಂದು
ಹೇಳಿದರು.
[ಚಿಕ್ಕಬಳ್ಳಾಪುರದಲ್ಲಿ
ಪುನಃ
ಗೆದ್ದ
ವೀರಪ್ಪ
ಮೊಯ್ಲಿ]
ರಿಲಿಯನ್ಸ್ ಕಂಪನಿಯ ಅನಿಲ್ ಅಂಬಾನಿ ಅವರು ಸೋನಿಯಾ ಗಾಂಧಿ ಅವರೊಂದಿಗೆ ಮಾತುಕತೆ ನಡೆಸಿ ಮೊಯ್ಲಿ ಅವರಿಗೆ ಟಿಕೆಟ್ ಕೊಡಿಸಿದ್ದಾರೆ. ಪೆಟ್ರೋಲಿಯಂ ಸಚಿವರಾಗಿದ್ದ ಮೊಯ್ಲಿ ಅವರು, ತರಾತುರಿಯಲ್ಲಿ ಅನೇಕ ಕಡತಗಳಿಗೆ ಸಹಿ ಮಾಡಿ, ಕೆಲವು ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟು ದೇಶಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿದರು. [ಪಿಎಂ ಯಾಮಾರಿಸಿದ ಮೊಯ್ಲಿಯಿಂದ ಭಾರಿ ಭ್ರಷ್ಟಾಚಾರ?]
ಸಿಬಿಐ ತನಿಖೆ ನಡೆಯಬೇಕು : ಕೇಂದ್ರ ಸಚಿವರಾಗಿದ್ದ ವೇಳೆಯಲ್ಲಿ ವೀರಪ್ಪ ಮೊಯ್ಲಿ ಅವರು ಮಾಡಿದ ಅವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರ ಭೇಟಿಗೆ ಅವಕಾಶ ಕೊಡಿಸುವಂತೆ ರೈಲ್ವೆ ಸಚಿವ ಸದಾನಂದ ಗೌಡರಿಗೆ ಮನವಿ ಮಾಡಿದ್ದೇನೆ ಸಿಬಿಐ ತನಿಖೆ ನಡೆಸುವಂತೆ ಅವರಿಗೆ ಮನವಿ ಮಾಡುತ್ತೇನೆ ಎಂದು ಆಂಜಿನಪ್ಪ ತಿಳಿಸಿದರು.
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ : ಚಿಕ್ಕಬಳ್ಳಾಪುರ ಜಲ್ಲಾ ಕಾಂಗ್ರೆಸ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ಸ್ವಾರ್ಥ ಲಾಭಕ್ಕಾಗಿ ಬೇರೆಯವರಿಗೆ ಸುಳ್ಳು ಭರವಸೆ ನೀಡುವ ಮೊಯ್ಲಿ ಅವರ ವರ್ತನೆಯಿಂದ ಬೇಸತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿರುವುದಾಗಿ ಎಂ. ಆಂಜಿನಪ್ಪ ಹೇಳಿದರು.