ಸಚಿವ ಮಹದೇವ ಪ್ರಸಾದ್ ವಿರುದ್ಧ ಚಾರ್ಚ್ಶೀಟ್
ಚಾಮರಾಜನಗರ, ಸೆ. 30 : ಕರ್ನಾಟಕ ಗೃಹ ಮಂಡಳಿಗೆ ಸುಳ್ಳು ಪ್ರಮಾಣ ಪತ್ರ ನೀಡಿ ನಿವೇಶನ ಪಡೆದಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ವಿರುದ್ಧ ಲೋಕಾಯುಕ್ತ ಪೊಲೀಸರು ಚಾರ್ಚ್ಶೀಟ್ ಸಲ್ಲಿಸಿದ್ದಾರೆ. ಮಂಗಳವಾರ ಚಾಮರಾಜನಗರ ಕೋರ್ಟ್ಗೆ ಚಾರ್ಚ್ಶೀಟ್ ಸಲ್ಲಿಕೆಯಾಗಿದೆ.
ಸುಳ್ಳು
ಪ್ರಮಾಣ
ಪತ್ರ
ನೀಡಿ
ನಿವೇಶನ
ಪಡೆದಿದ್ದಾರೆ
ಎಂಬ
ಆರೋಪಗಳಿಗೆ
ಸಂಬಂಧಿಸಿದಂತೆ
ಎಫ್ಐಆರ್
ದಾಖಲಿಸಿ,
ತನಿಖೆ
ನಡೆಸಲು
ಚಾಮರಾಜನಗರ
ಜಿಲ್ಲಾ
ಮತ್ತು
ಸೆಶನ್ಸ್
ನ್ಯಾಯಾಲಯ
ಲೋಕಾಯುಕ್ತ
ಪೊಲೀಸರಿಗೆ
ಆದೇಶ
ನೀಡಿತ್ತು,
ಇದರ
ಅನ್ವಯ
ತನಿಖೆ
ನಡೆಸಿರುವ
ಪೊಲೀಸರು
ಮಂಗಳವಾ
ಚಾರ್ಚ್ಶೀಟ್
ಅನ್ನು
ಕೋರ್ಟ್ಗೆ
ಸಲ್ಲಿಸಿದ್ದಾರೆ.
[ಭೂ
ಹಗರಣದ
ಸುಳಿಯಲ್ಲಿ
ಸಚಿವ
ಮಹದೇವ
ಪ್ರಸಾದ್]
ಹಿರೇಬೇಗೂರು ನಿವಾಸಿಯಾದ ನಂದೀಶ್ ಎಂಬುವವರು ಸಚಿವ ಮಹದೇವ ಪ್ರಸಾದ್ ಅವರು ಕರ್ನಾಟಕ ಗೃಹ ಮಂಡಳಿಗೆ ಸುಳ್ಳು ಪ್ರಮಾಣ ಪತ್ರ ನೀಡಿ ನಿವೇಶನ ಪಡೆದಿದ್ದಾರೆ ಎಂದು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಪ್ರರಕರಣ ಹೈಕೋರ್ಟ್ ಮೆಟ್ಟಿಲೇರಿ ನಂತರ ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. [ಮಹದೇವ ಪ್ರಸಾದ್ ವಿರುದ್ಧ ಲೋಕಾಯುಕ್ತ ತನಿಖೆ]
ಆರೋಪವೇನು : ಕರ್ನಾಟಕ ಗೃಹ ಮಂಡಳಿ ಬಡವರಿಗೆಂದು ಮೀಸಲಾಗಿಟ್ಟಿದ್ದ ನಿವೇಶವನ್ನು ಮಹದೇವ ಪ್ರಸಾದ್ ಅಕ್ರಮವಾಗಿ ಖರೀದಿಸಿದ್ದಾರೆ ಎಂಬುದು ಆರೋಪವಾಗಿದೆ. ನಿಯಮದಂತೆ ಗೃಹ ಮಂಡಳಿ ನಿವೇಶನ ಖರೀದಿ ಮಾಡಬೇಕಾದರೆ ಅರ್ಜಿದಾರರು ಬೇರೆಲ್ಲೂ ನಿವೇಶನ ಹೊಂದಿರಬಾರದು. ಆದರೆ, ಮಹದೇವ ಪ್ರಸಾದ್ ಮೈಸೂರು, ಗುಡ್ಲುಪೇಟೆ, ಹಾಲಹಳ್ಳಿ ಪ್ರದೇಶಗಳಲ್ಲಿ ನಿವೇಶನ ಹೊಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.