ರಾಷ್ಟ್ರಪತಿ ಭವನ ತಲುಪಿದ ಎಚ್ಡಿಕೆ ಸಿಡಿ ವಿವಾದ
ಬೆಂಗಳೂರು, ಜು. 9 : ಮೇಲ್ಮನೆ ಸದಸ್ಯತ್ವಕ್ಕೆ ಕೋಟಿ ಕೋಟಿ ಹಣ ನೀಡಬೇಕಾಗುತ್ತದೆ ಎಂಬ ಮಾಜಿ ಸಿಎಂ ಮತ್ತು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ಸಿಡಿ ವಿವಾದ ಈಗ ರಾಷ್ಟ್ರಪತಿ ಭವನ ತಲುಪಿದೆ. ಮಂಡ್ಯ ಜಿಲ್ಲಾ ಕಾಂಗ್ರೆಸ್ ಮುಖಂಡ ಸತ್ಯಾನಂದ ಅವರು ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಮಂಗಳವಾರ
ಟಿ.ಎಸ್.ಸತ್ಯಾನಂದ
ಅವರು
ರಾಷ್ಟ್ರಪತಿ
ಪ್ರಣಬ್
ಮುಖರ್ಜಿ
ಅವರಿಗೆ
ಸಿಡಿ
ವಿವಾದದ
ಬಗ್ಗೆ
ಪತ್ರ
ಬರೆದಿದ್ದು,
ರಾಜಕೀಯ
ಪಕ್ಷದೊಂದು
ಶಾಸಕರನ್ನು
ಖರೀದಿ
ಮಾಡುವ
ಮೂಲಕ
ಸಂವಿಧಾನಕ್ಕೆ
ಅಪಚಾರ
ಮಾಡಿದೆ.
ಈ
ಕುರಿತು
ಸೂಕ್ತ
ತನಿಖೆ
ನಡೆಸಿ
ಪಕ್ಷದ
ವಿರುದ್ಧ
ಕ್ರಮ
ಕೈಗೊಳ್ಳಬೇಕು
ಎಂದು
ಮನವಿ
ಮಾಡಿದ್ದಾರೆ.
[ಎಚ್ಡಿಕೆ
ಸಿಡಿ
ವಿವಾದ
:
ಯಾರು,
ಏನು
ಹೇಳಿದರು?]
ರಾಜಕೀಯ ಪಕ್ಷವೊಂದರ ನಾಯಕರು ಶಾಸಕರ ಖರೀದಿ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಸಿಡಿಯಲ್ಲಿ ಮಾಹಿತಿ ಇದೆ. ಆದ್ದರಿಂದ ಈ ಕುರಿತು ತನಿಖೆಯಾಗಬೇಕು ಎಂದು ಸತ್ಯಾನಂದ ಅವರು ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ. ಆರೋಪ ಸಾಬೀತಾದರೆ, ಪಕ್ಷದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. [ಮೇಲ್ಮನೆ ಚುನಾವಣೆ: ಜೆಡಿಎಸ್ನಿಂದ ಕೋಟಿ ಕೋಟಿ ಡೀಲ್?]
ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ ಟಿ.ಎ.ಶರವಣ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾದ ಡಿ.ಯು.ಮಲ್ಲಿಕಾರ್ಜುನ್ ವಿರುದ್ಧವೂ ತನಿಖೆ ನಡೆಸಬೇಕು ಎಂದು ಸತ್ಯಾನಂದ ಅವರು ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಹಾಕಲು ಪಕ್ಷದ ಶಾಸಕರು ಕೋಟಿ ಕೋಟಿ ಹಣ ಕೇಳುತ್ತಿದ್ದಾರೆ ಎಂದು ಪಕ್ಷದ ನಾಯಕರ ಜೊತೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿಕೊಳ್ಳುತ್ತಿರುವ ಧ್ವನಿಮುದ್ರಿತ ಸಿಡಿ ಶನಿವಾರ ಬಹಿರಂಗವಾಗಿತ್ತು. ವಿಜಾಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ಪರಾಜಿತ ಜೆಡಿಎಸ್ ಅಭ್ಯರ್ಥಿ ವಿಜುಗೌಡ ಪಾಟೀಲ್ ಅವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡಬೇಕೆಂದು ಅವರ ಬೆಂಬಲಿಗರು ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಈ ಮಾತುಕತೆ ನಡೆದಿತ್ತು.
'ವಿಜುಗೌಡ ಪಾಟೀಲ ಅಭಿಮಾನಿ ಬಳಗ' ಎಂಬ ಹೆಸರಿನಲ್ಲಿ ಮಾತುಕತೆಯ ವಿವರಗಳುಳ್ಳ ಸಿಡಿಯನ್ನು ಮಾಧ್ಯಮ ಕಚೇರಿಗಳಿಗೆ ತಲುಪಿಸಲಾಗಿದ್ದು, ಪ್ರಸ್ತುತ ವಿಧಾನಸಭೆಯಲ್ಲಿ 40 ಜೆಡಿಎಸ್ ಶಾಸಕರಿದ್ದು, ಅಭ್ಯರ್ಥಿಗಳಿಂದ ಶಾಸಕರು ಒಂದು ಕೋಟಿ ನೀಡುವಂತೆ ನನ್ನಲ್ಲಿ ಬೇಡಿಕೆ ಇಟ್ಟಿದ್ದಾರೆ ಎಂದು ಎಚ್ಡಿಕೆ ಹೇಳುವ ಮಾತು ಸಿಡಿಯಲ್ಲಿದೆ.