ಭೂ ಹಗರಣ : ಶೆಟ್ಟರ್ ವಿರುದ್ಧ ಬಿಎಂಟಿಎಫ್ ಎಫ್ಐಆರ್
ಬೆಂಗಳೂರು, ಆ.1 : ಶ್ರೀಗಂಧದಕಾವಲ್ ನಲ್ಲಿನ ನಾಲ್ಕು ಎಕರೆ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ಬಿಎಂಟಿಎಫ್ ಎಫ್ಐಆರ್ ದಾಖಲಿಸಿದೆ.
ರಾಜ್ಯ
ಒಕ್ಕಲಿಗರ
ಸಂಘದ
ನಿರ್ದೇಶಕ
ಎ.ಪ್ರಸಾದ್
ಅವರು
ಬೆಂಗಳೂರು
ಮಹಾನಗರ
ಕಾರ್ಯಪಡೆ(ಬಿಎಂಟಿಎಫ್)
ಗೆ
ಗುರುವಾರ
ನೀಡಿದ
ದೂರಿನ
ಅನ್ವಯ
ಜಗದೀಶ್
ಶೆಟ್ಟರ್
ಅವರ
ವಿರುದ್ಧ
ಎಫ್ಐಆರ್
ದಾಖಲಿಸಲಾಗಿದೆ.
ಶೆಟ್ಟರ್
ಮುಖ್ಯಮಂತ್ರಿಯಾಗಿದ್ದಾಗ
ಅವಧಿಯಲ್ಲಿ
ಕೋಟ್ಯಂತರ
ರೂ.
ಬೆಲೆಯ
ಭೂಪರಿವರ್ತಿತ
ಭೂಮಿಯನ್ನು
ಕೃಷಿ
ಉದ್ದೇಶಕ್ಕೆ
ಎಸ್.ಸುಂದರೇಶ್
ಎಂಬುವರಿಗೆ
ಪರಭಾರೆ
ಮಾಡಿ
ಅಕ್ರಮವೆಸಗಿದ್ದಾರೆ
ಎಂದು
ಪ್ರಸಾದ್
ದೂರು
ನೀಡಿದ್ದರು.
ದೂರು ಸ್ವೀಕರಿಸಿದ ಬಿಎಂಟಿಎಫ್ ಪೊಲೀಸರು ಐಪಿಸಿ ಸೆಕ್ಷನ್ 420, 218, 166, 192 (ಎ) ಮತ್ತು (ಬಿ) ಅಡಿಯಲ್ಲಿ ಜಗದೀಶ್ ಶೆಟ್ಟರ್, ಎಸ್.ಸುಂದರೇಶ್ ಮತ್ತು ಇತರೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ 4 ಎಕರೆ ಭೂ ಪರಿವರ್ತಿತ ಭೂಮಿಯನ್ನು ಸ್ವಾತಂತ್ರ್ಯ ಹೋರಾಟಗಾರ ಸೂರ್ಯನಾರಾಯಣ ರಾವ್ ಅವರ ಪುತ್ರ ಸುಂದರೇಶ್ ಅವರಿಗೆ ಕಾನೂನುಬಾಹಿರವಾಗಿ ಪರಭಾರೆ ಮಾಡಿ ಅಕ್ರಮವೆಸಗಿದ್ದಾರೆ ಎಂಬುದು ಆರೋಪ.[ಏನಿದು ಆರೋಪ ಇಲ್ಲಿದೆ ಮಾಹಿತಿ]
ವಿಧಾನಸಭಾ ಚುನಾವಣೆಗೆ 13 ದಿನ ಬಾಕಿ ಇರುವಾಗ 80 ಕೋಟಿ ರೂ. ಮೌಲ್ಯದ ಜಮೀನನ್ನು ಕೇವಲ 6 ಕೋಟಿ ರೂ.ಗಳಿಗೆ ಮಂಜೂರು ಮಾಡಲಾಗಿದೆ. ಈ ಕುರಿತ ವಿಚಾರಣೆ ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲವೇ ಭೂಮಿ ಮಂಜೂರು ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಶೆಟ್ಟರ್ ಪ್ರತಿಕ್ರಿಯೆ : ಎಫ್ಐಆರ್ ದಾಖಲಾಗಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಜಗದೀಶ್ ಶೆಟ್ಟರ್ ಇಂತಹ ನೂರು ಎಫ್ಐಆರ್ ಹಾಕಿದರೂ ಎದುರಿಸಲು ಸಿದ್ಧನಾಗಿದ್ದೇನೆ. ಇದು ನನ್ನ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನವಾಗಿದೆ. ಇದೊಂದು ಕಾಂಗ್ರೆಸ್ ಪ್ರಾಯೋಜಿತವಾದ ದೂರು. ನನ್ನ ವಿರುದ್ಧ ನಡೆಯುತ್ತಿರುವ ಸೇಡಿನ ಹೋರಾಟವನ್ನು ಕಾನೂನಿನ ಮೂಲಕವೇ ಎದುರಿಸುತ್ತೇನೆ ಎಂದು ಶೆಟ್ಟರ್ ಹೇಳಿದ್ದಾರೆ.