ಯತ್ನಾಳ್ ಬಂಧನ ಖಂಡಿಸಿ ಬಿಜಾಪುರದಲ್ಲಿ ಪ್ರತಿಭಟನೆ
ಬಿಜಾಪುರ, ಮೇ 28 : ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಬಂಧನ ವಿರೋಧಿಸಿ ಬಿಜಾಪುರ ಮತ್ತು ಬಸವನ ಬಾಗೇವಾಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬುಧವಾರ ಬೆಳಗ್ಗೆ ಯತ್ನಾಳ್ ಅವರನ್ನು ಪೊಲೀಸರು ಕೊಲ್ಲಾಪುರದಲ್ಲಿ ಬಂಧಿಸಿದ್ದಾರೆ.
ಬಿಜಾಪುರದಲ್ಲಿ
ಸೋಮವಾರ
ನಡೆದ
ಎರಡು
ಗಂಪುಗಳ
ನಡುವಿನ
ಘರ್ಷಣೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಮಾಜಿ
ಕೇಂದ್ರ
ಸಚಿವ
ಬಸನಗೌಡ
ಪಾಟೀಲ್
ಯತ್ನಾಳ್
ಅವರನ್ನು
ಬುಧವಾರ
ಬೆಳಗ್ಗೆ
ಪೊಲೀಸರು
ಬಂಧಿಸಿ,
ಬಿಜಾಪುರಕ್ಕೆ
ಕರೆತಂದಿದ್ದಾರೆ.
ಬಂಧನ
ವಿರೋಧಿಸಿ
ಬಿಜೆಪಿ
ಕಾರ್ಯಕರ್ತರು
ಪ್ರತಿಭಟನೆ
ನಡೆಸುತ್ತಿದ್ದಾರೆ.
ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ಬಸವನ ಬಾಗೇವಾಡಿ ತಾಲೂಕು ಮತ್ತು ಬಿಜಾಪುರದಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಆರಂಭಿಸಿದರು. ಇದರಿಂದಾಗಿ ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದು, ಸ್ವಯಂ ಘೋಷಿತ ಬಂದ್ ವಾತಾವರಣ ನಿರ್ಮಾಣಗೊಂಡಿದೆ.
ಆಗಿರುವುದೇನು : ಸೋಮವಾರ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಿಜಾಪುರ ಪಟ್ಟಣದಲ್ಲಿ ಯತ್ನಾಳ್ ನೇತೃತ್ವದಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಭೆ ಉಂಟಾಗಿತ್ತು. [ಬಿಜಾಪುರದಲ್ಲಿ ಗುಂಪು ಘರ್ಷಣೆ]
ಗಲಭೆಗೆ ಬಸನಗೌಡ ಪಾಟೀಲ್ ಯತ್ನಾಳ್ ಕಾರಣ ಎಂದು ಪೊಲೀಸರು ಹೇಳಿದ್ದರು. ಗಲಭೆ ನಡೆದ ನಂತರ ತಲೆ ಮರಿಸಿಕೊಂಡಿದ್ದ ಯತ್ನಾಳ್ ಅವರನ್ನು ಉತ್ತರ ವಲಯ ಐಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಬುಧವಾರ ಬೆಳಗ್ಗೆ ಬಂಧಿಸಲಾಗಿತ್ತು.
ಕೊಲ್ಲಾಪುರದಲ್ಲಿ ಬಂಧಿಸಿದ ಯತ್ನಾಳ್ ಅವರನ್ನು ಪೊಲೀಸರು ಬಿಜಾಪುರಕ್ಕೆ ಕರೆತಂದಿದ್ದಾರೆ. ಯತ್ನಾಳ್ ಬಂಧನ ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಪೊಲೀಸರು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.