ವಿಜಾಪುರದಲ್ಲಿ ಘರ್ಷಣೆ, ಮೂರು ದಿನ ನಿಷೇಧಾಜ್ಞೆ
ಬಿಜಾಪುರ, ಮೇ 27 : ವಿಜಾಪುರ ನಗರದಲ್ಲಿ ಬಿಜೆಪಿ ವಿಜಯೋತ್ಸವದ ವೇಳೆ ನಡೆದ ಗುಂಪು ಘರ್ಷಣೆಯಲ್ಲಿ ಪೊಲೀಸರು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸೋಮವಾರ
ಸಂಜೆ
ಪ್ರಧಾನಿಯಾಗಿ
ನರೇಂದ್ರ
ಮೋದಿ
ಪ್ರಮಾಣ
ವಚನ
ಸ್ವೀಕರಿಸಿದ
ನಂತರ
ಬಿಜೆಪಿ
ಮುಖಂಡ
ಬಸನಗೌಡ
ಪಾಟೀಲ
ಯತ್ನಾಳ್
ನಗರದಲ್ಲಿ
ವಿಜಯೋತ್ಸವ
ಹಮ್ಮಿಕೊಳ್ಳಲಾಗಿತ್ತು.
ಸಿದ್ಧೇಶ್ವರ
ದೇವಸ್ಥಾನದಿಂದ
ಆರಂಭಗೊಂಡ
ಈ
ಮೆರವಣಿಗೆ
ಗಾಂಧಿ
ಚೌಕ್
ಸಮೀಪ
ಬಂದಾಗ
ಗಲಭೆ
ಉಂಟಾಯಿತು.
ಪೊಲೀಸರು
ಲಾಠಿ
ಪ್ರಹಾರ
ನಡೆಸಿ
ಎರಡೂ
ಗುಂಪಿನವರನ್ನು
ಚದುರಿಸಿದರು.
ಗಲಭೆ ಸುದ್ದಿ ತಿಳಿಯುತ್ತಿದ್ದಂತೆ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆರಂಭಿಸಿದರು. ಆದರೆ, ಅಂಗಡಿಗಳ ಮೇಲೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದರಿಂದ, ಹಲವು ಅಂಗಡಿ ಮತ್ತು ವಾಹನಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಪೊಲೀಸರು ಸೇರಿದಂತೆ ಎಂಟಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. [ನರೇಂದ್ರ ಮೋದಿ ಸಂಪುಟ ಹೀಗಿದೆ ನೋಡಿ]
ಘಟನೆಗೆ ಕಾರಣವೇನು : ವಿಜಯೋತ್ಸವದ ಮೆರಮಣಿಗೆಯಲ್ಲಿ ಬಂದವರು ಬಣ್ಣ ಎರಚುತ್ತಿದ್ದರು. ಕೆಲವರು ಗಾಂಧಿಚೌಕ್ ಬಳಿ ತರಕಾರಿ ಮಾರುತ್ತಿದ್ದ ಮಹಿಳೆಯರ ಮೇಲೂ ಬಣ್ಣ ತೂರಿದರು. ನಂತರ ತರಕಾರಿ ಮಾರುಕಟ್ಟೆಗೆ ನುಗ್ಗಿ ಹಣ್ಣು-ತರಕಾರಿಗಳನ್ನು ಚೆಲ್ಲಾಪಿಲ್ಲಿ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಗುಂಪಿನವರು ಆರೋಪಿಸುತ್ತಿದ್ದಾರೆ.
ವಿಜಯೋತ್ಸವದ ಮೆರವಣಿಗೆ ಮೇಲೆ ಕಲ್ಲು ತೂರಲಾಯಿತು. ನಮ್ಮ ಮುಖಂಡರ ವಾಹನಗಳನ್ನು ಜಖಂಗೊಳಿಸಲಾಯಿತು. ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂದು ಮತ್ತೊಂದು ಗುಂಪಿನವರು ಪ್ರತ್ಯಾರೋಪ ಮಾಡಿದ್ದಾರೆ. ಆದರೆ, ಘಟನೆಗೆ ನಿಖರವಾದ ಕಾರಣ ಏನು ಎಂದು ತಿಳಿದುಬಂದಿಲ್ಲ.
ಸ್ಥಳಕ್ಕೆ ಆಗಮಿಸಿದ ಶಾಸಕ ಡಾ.ಮಕ್ಬೂಲ್ ಬಾಗವಾನ "ಘಟನೆಗೆ ಯಾರು ಕಾರಣ ಎಂಬ ಬಗ್ಗೆ ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಜನರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ".