ಬಿಜಾಪುರ ಗಲಭೆ : ಯತ್ನಾಳ್ ಗೆ ಬಂಧನ ಭೀತಿ
ಬಿಜಾಪುರ, ಮೇ 27 : ಬಿಜಾಪುರ ನಗರದಲ್ಲಿ ಬಿಜೆಪಿ ವಿಜಯೋತ್ಸವದ ವೇಳೆ ನಡೆದ ಗುಂಪು ಘರ್ಷಣೆಗೆ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಕಾರಣ ಎಂದು ಪೊಲೀಸರು ಹೇಳಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸೋಮವಾರ ನಡೆದ ಗಲಭೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದರು.
ಬಿಜಾಪುರಲ್ಲಿ
ಮಂಗಳವಾರ
ಮಾತನಾಡಿದ
ಉತ್ತರ
ವಲಯ
ಐಜಿಪಿ
ಭಾಸ್ಕರ್
ರಾವ್,
ಸೋಮವಾರ
ಬಿಜೆಪಿ
ಸಂಭ್ರಮಾಚರಣೆ
ವೇಳೆ
ನಡೆದ
ಗಲಭೆಗೆ
ಬಿಜೆಪಿ
ಮುಖಂಡ
ಬಸನಗೌಡ
ಪಾಟೀಲ್
ಯತ್ನಾಳ್
ಕಾರಣ
ಎಂದು
ಹೇಳಿದ್ದಾರೆ.
ಘಟನೆ
ನಡೆದ
ಬಳಿಕ
ಅವರು
ತಲೆ
ಮರಿಸಿಕೊಂಡಿದ್ದು,
ಅವರಿಗಾಗಿ
ಪೊಲೀಸರು
ಹುಡುಕಾಟ
ನಡೆಸುತ್ತಿದ್ದಾರೆ
ಎಂದರು.
ಸೋಮವಾರ ನಡೆದ ಗಲಭೆಯಲ್ಲಿ ಯತ್ನಾಳ್ ಅವರ ಕೈವಾಡವಿರುವುದು ವಿಡಿಯೋ ದೃಶ್ಯಾವಳಿಗಳಿಂದ ಸಾಬೀತಾಗಿದೆ. ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾಗಿದೆ. ಆದರೆ, ಅವರು ತಲೆ ಮರಿಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ತಿಳಿಸಿದರು. ಯತ್ನಾಳ್ ಸಿಕ್ಕ ತಕ್ಷಣ ಬಂಧಿಸಲಾಗುವುದು ಎಂದು ಹೇಳಿದ್ದಾರೆ. [ಬಿಜಾಪುರದಲ್ಲಿ ಮೂರು ದಿನ ನಿಷೇಧಾಜ್ಞೆ]
ಸೋಮವಾರ ಸಂಜೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್ ನೇತೃತ್ವದಲ್ಲಿ ಬಿಜಾಪುರ ನಗರದಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಈ ಮೆರವಣಿಗೆ ಗಾಂಧಿ ಚೌಕ್ ಸಮೀಪ ಬಂದಾಗ ಗಲಭೆ ಉಂಟಾಯಿತು. ಪೊಲೀಸರು ಲಾಠಿ ಪ್ರಹಾರ ನಡೆಸಿ ಎರಡೂ ಗುಂಪಿನವರನ್ನು ಚದುರಿಸಿದರು.
ಈ ಗಲಭೆಯಲ್ಲಿ ಪೊಲೀಸರು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಬಿಜಾಪುರ ನಗರದಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.