ಲೋಕಸಭೆಯಲ್ಲಿ ಎಂಇಎಸ್ ಪುಂಡಾಟಿಕೆ ಬಗ್ಗೆ ಪ್ರಸ್ತಾಪ
ಬೆಂಗಳೂರು, ಜು. 30 : ಬೆಳಗಾವಿ ಜಿಲ್ಲೆಯ ಎಳ್ಳೂರಿನಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಡೆಸುತ್ತಿರುವ ಪುಂಡಾಟಿಕೆ ಕುರಿತು ಲೋಕಸಭೆಯಲ್ಲಿ ಬುಧವಾರ ವಿಷಯ ಪ್ರಸ್ತಾಪವಾಗಿದೆ. ಲೋಕಸಭೆ ಈ ವಿಚಾರದ ಕುರಿತಾಗಿ ವಿಷಯ ಪ್ರಸ್ತಾಪವಾದಾಗ ಕೋಲಾಹಲ ಉಂಟಾಯಿತು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಧಾರವಾಡದ ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಸದನದಲ್ಲಿ ಹೇಳಿದ್ದಾರೆ.
ಬುಧವಾರ
ಲೋಕಸಭೆಯ
ಕಲಾಪದಲ್ಲಿ
ವಿಷಯ
ಪ್ರಸ್ತಾವನೆ
ಮಾಡಿ
ಮಾತನಾಡಿದ
ಶಿವಸೇನೆ
ಸಂಸದ
ಅರವಿಂದ
ಸಾವಂತ್,
ಬೆಳಗಾವಿಯಲ್ಲಿ
ಮರಾಠಿಗರ
ಮೇಲೆ
ದೌರ್ಜನ್ಯ
ನಡೆಯುತ್ತಿದೆ,
ಪೊಲೀಸರು
ಮರಾಠಿಗರನ್ನು
ಶೋಷಿಸುತ್ತಿದ್ದಾರೆ,
ಇದನ್ನು
ತಡೆಯಬೇಕು
ಎಂದು
ಮನವಿ
ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. ಆದರೆ ಕೆಲವು ದುಷ್ಕರ್ಮಿಗಳು ಮರಾಠಿ ನಾಮಫಲಕದ ಹೆಸರಿನಲ್ಲಿ ಗೊಂದಲ ಸೃಷ್ಟಿಸಿ ವಿವಾದ ಹುಟ್ಟು ಹಾಕಿದ್ದಾರೆ ಎಂದರು. [ಎಂಇಎಸ್ ನಿಷೇಧಕ್ಕೆ ನಡೆದಿದೆ ಚಿಂತನೆ]
ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿದೆ. ಸೂರ್ಯ ಚಂದ್ರರಿರುವ ತನಕ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಜೋಶಿ ಹೇಳಿದರು. ಅಂತರ್ ರಾಜ್ಯಗಳ ಗಡಿ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ಲೋಕಸಭೆಗೆ ಮಾಹಿತಿ ನೀಡಿದರು. [ಬೆಳಗಾವಿಯಲ್ಲಿ ಏನಾಗುತ್ತಿದೆ?]
ಪ್ರಹ್ಲಾದ್ ಜೋಷಿ ಮಾತನಾಡುತ್ತಿದ್ದ ವೇಳೆ ಮಹಾರಾಷ್ಟ್ರದ ಶಿವಸೇನೆಯ ಸಂಸದರು ತೀವ್ರ ಗದ್ದಲ ಏರ್ಪಡಿಸಿದರು. ಸಂಸದರ ಗದ್ದಲದಿಂದ ಸದನದಲ್ಲಿ ತೀವ್ರ ಕೋಲಾಹಲ ಉಂಟಾಯಿತು. ಕಲಾಪದಲ್ಲಿ ಗದ್ದಲ ಮುಂದುವರೆದಿದ್ದರಿಂದ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.