ಬೆಂ-ಮೈಸೂರು ಜೋಡಿ ಮಾರ್ಗ ಮಾರ್ಚ್ಗೆ ಪೂರ್ಣ
ಮಂಡ್ಯ, ಜು. 14 : ಬೆಂಗಳೂರು-ಮೈಸೂರು ರೈಲ್ವೆ ಹಳಿ ದ್ವಿಗುಣ ಕಾಮಗಾರಿ ಮಾರ್ಚ್ 2015ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ವಿವಿಧ ಕಾರಣಗಳಿಂದಾಗಿ ಈ ಕಾಮಗಾರಿ ವಿಳಂಬವಾಗುತ್ತಿದ್ದು, ಮಾರ್ಚ್ ನಲ್ಲಿ ಪೂರ್ಣಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
ಭಾನುವಾರ
ಮಂಡ್ಯ
ರೈಲ್ವೆ
ನಿಲ್ದಾಣಕ್ಕೆ
ಭೇಟಿ
ನೀಡಿ
ಪ್ರಯಾಣಿಕರೊಂದಿಗೆ
ಮಾತುಕತೆ
ನಡೆಸಿದ
ಸದಾನಂದ
ಗೌಡರು,
ಬೆಂಗಳೂರು-ಮೈಸೂರು
ಹಳಿ
ದ್ವಿಗುಣ
ಕಾರ್ಯ
ಮುಕ್ತಾಯಗೊಂಡ
ನಂತರ
ಬೆಂಗಳೂರು
ಮತ್ತು
ಮೈಸೂರಿಗೆ
ಸಂಚರಿಸುವ
ಸಮಯವ
ಉಳಿತಾಯವಾಗಲಿದೆ.
ಇಲಾಖೆಯ
ಅಧಿಕಾರಿಗಳಿಗೆ
ಕಾಮಗಾರಿಯನ್ನು
ತ್ವರಿತವಾಗಿ
ಪೂರ್ಣಗೊಳಿಸಲು
ನಿರ್ದೇಶನ
ನೀಡಲಾಗಿದೆ
ಎಂದು
ತಿಳಿಸಿದರು.
ವಿವಿಧ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ. 2015ರ ಮಾರ್ಚ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪ್ರಯಾಣಿಕರಿಗೆ ಭರವಸೆ ನೀಡಿದ ಸಚಿವರು, ರೈಲ್ವೆ ಬಜೆಟ್ ನಲ್ಲಿ ಬೆಂಗಳೂರು-ಮೈಸೂರು-ಚೆನ್ನೈ ಹೈಸ್ಪೀಡ್ ರೈಲನ್ನು ಘೋಷಣೆ ಮಾಡಿರುವುದರಿಂದ ಈ ಮಾರ್ಗದ ವ್ಯಾಪ್ತಿಯಲ್ಲಿ ಬರುವ ನಗರಗಳು ಅಭಿವೃದ್ಧಿಯಾಗಲಿವೆ ಎಂದು ಹೇಳಿದರು. [ರೈಲು ನಿಲ್ದಾಣಗಳಿಗೆ ಭೇಟಿ ನೀಡಿದ ಸದಾನಂದ ಗೌಡರು]
ಮಂಡ್ಯ ರೈಲು ನಿಲ್ದಾಣದ ಸ್ವಚ್ಛತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಶೌಚಾಲಯದ ಶುಚಿತ್ವ, ಫ್ಲಾಟ್ ಫಾರಂಗಳ ಸ್ವಚ್ಛತೆ ಬಗ್ಗೆ ನಿಲ್ದಾಣದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಿಲ್ದಾಣದಲ್ಲಿನ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವಂತೆ ಸೂಚಿಸಿದರು. [ರೈಲ್ವೆ ಬಜೆಟ್ 2014 : ಕರ್ನಾಟಕಕ್ಕೆ ಸಿಕ್ಕಿದ್ದೇನು?]
ದ್ವಿತೀಯ ದರ್ಜೆ ಬೋಗಿಯಲ್ಲಿ ಪ್ರಯಾಣ : ಮಂಡ್ಯ ರೈಲು ನಿಲ್ದಾಣದಲ್ಲಿ ಗೋಲ್ಗುಂಬಜ್ ಎಕ್ಸ್ಪ್ರೆಸ್ ರೈಲು ಏರಿದ ಸಚಿವರು ಮೈಸೂರಿಗೆ ಪ್ರಯಾಣ ಬೆಳೆಸಿದರು. ದ್ವಿತೀಯ ದರ್ಜೆ ಬೋಗಿಯಲ್ಲಿ ಪ್ರಯಾಣ ಆರಂಭಿಸಿದ ಅವರು ಮಧ್ಯಾಹ್ನ 12.15ಕ್ಕೆ ಮೈಸೂರು ತಲುಪಿದರು.