ಕರ್ನಾಟಕದ ಮತ್ತೊಬ್ಬ ಉದ್ಯಮಿ ಆಮ್ ಆದ್ಮಿ ಆದ್ರು!
ಇದನ್ನು ಕೇಳಿಸಿಕೊಂಡ ಮತದಾರ ಪ್ರಭು ಮುಂದೆ ಚುನಾವಣೆ ಎದುರಾದಾಗ 'ಕಾಂಗ್ರೆಸ್ ಆದರೇನು ಎಎಪಿ ಆದರೇನು... it doesn't make difference' ಎಂದು ಒಂದು ನಿರ್ಧಾರಕ್ಕೆ ಬಂದರೆ ಆಗ ಲೆಕ್ಕ ಚುಕ್ತಾ ಆದೀತು.
ಅದೆಲ್ಲಾ ಒತ್ತಟ್ಟಿಗಿರಲಿ... ಅಧಿಕಾರದ ಕುರ್ಚಿ ಏರಿದ ಮೇಲೆ ಎಲ್ಲರೂ ಒಂದೇ ಊಸುರವಳ್ಳಿ ರಾಜಕಾರಣಿಗಳೇ. ವಿಷಯ ಅದಲ್ಲ. ರಾಷ್ಟ್ರ ರಾಜಕಾರಣದಲ್ಲಿ ನಿಜಕ್ಕೂ ಒಂದಷ್ಟು ಹೊಸ ಹವಾ ಎಬ್ಬಿಸಿರುವ Aam Aadmi Partyಗೆ ಮತ್ತೊಬ್ಬ ವರ್ಚಸ್ವೀ ಉದ್ಯಮಿ ಕ್ಯಾಪ್ಟನ್ ಗೋಪಿನಾಥ್ ಅವರು ಸೇರ್ಪಡೆಯಾಗಿದ್ದಾರೆ.
ವಾರದ ಆರಂಭದದಂದು ಮಾಜಿ ಇನ್ಫೋಸಿಸ್ ವಿ ಬಾಲಕೃಷ್ಣನ್ ಅವರು AAP ಸೇರ್ಪಡೆಯಾಗಿದ್ದರು ಎಂಬುದು ಗಮನಾರ್ಹ.'ಹೌದು, ನಾನು ಆಮ್ ಆದ್ಮಿ ಪಾರ್ಟಿ ಸೇರಿದ್ದೇನೆ. ನಾನೀಗ ಅಧಿಕೃತವಾಗಿ ಎಎಪಿ ಸದಸ್ಯ' ಎಂದು ಗೋಪಿನಾಥ್ ಹೇಳಿದ್ದಾರೆ.
'ನಾನು ಸದಾ ಅಣ್ಣಾ ಚಳುವಳಿ ಬಗ್ಗೆ ಅನುಕಂಪ ಹೊಂದಿದ್ದವನು. ಭ್ರಷ್ಟಾಚಾರ ವಿರುದ್ಧದ ಆ ಹೋರಾಟದಲ್ಲಿ ಅರವಿಂದ ಕೇಜ್ರಿವಾಲಾರು ಸಕ್ರಿಯರಾಗಿದ್ದವರು' ಎಂದು ಕ್ಯಾಪ್ಟನ್ ಗೋಪಿನಾಥ್ ಪ್ರತಿಕ್ರಿಯಿಸಿದ್ದಾರೆ. 'ಕ್ಯಾಪ್ಟನ್ ಗೋಪಿನಾಥ್ ಅವರು ಅಧಿಕೃತವಾಗಿ ಪಕ್ಷದ ಸದಸ್ಯರಾಗಿದ್ದಾರೆ' ಎಂದು ಕರ್ನಾಟಕದ Aam Aadmi Party ಮೂಲಗಳೂ ಖಚಿತಪಡಿಸಿವೆ.
ಚುನಾವಣೆ ಸಂದರ್ಭದಲ್ಲಿ ಹೊಸದಾಗಿ ಪಕ್ಷ ಸೇರುತ್ತಿದ್ದಂತೆ ಚುನಾವಣೆಗೆ ಸ್ಪರ್ಧಿಸಬಯದುತ್ತೇನೆ ಎಂದೇ ಬಹುತೇಕರು ಹೇಳುವುದು. ಆದರೆ ಕ್ಯಾಪ್ಟನ್ ಗೋಪಿನಾಥ್ ಅವರು ಸ್ಪರ್ಧೆಯ ಬಗ್ಗೆ ಹೇಳದೆ ಭ್ರಷ್ಟಾಚಾರ ಅನ್ನುವುದು ದೇಶವನ್ನು ತಿಂದುಹಾಕುತ್ತಿದೆ. ಈ ಭ್ರಷ್ಟ ವ್ಯವಸ್ಥೆಗೆ ಬದಲಾವಣೆ ತರುವ ನಿಟ್ಟಿನಲ್ಲಿ ಅಣ್ಣಾ ಆಶಾದಾಯಕ ಕೆಲಸ ಮಾಡಿದರು. ಮತ್ತು ಇದೀಗ ಕೇಜ್ರಿವಾಲಾರ ಎಎಪಿ ಅದನ್ನು ಸಾಕಾರಗೊಳಿಸುತ್ತಿದೆ. ಹಾಗಾಗಿ, ಮೊದಲು ಪಕ್ಷದಲ್ಲಿ ಸಕ್ರಿಯನಾಗಿ ತೊಡಗಿಸಿಕೊಳ್ಳುತ್ತೇನೆ. ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದ್ದಾರೆ.
ಅಂದಹಾಗೆ Air Deccan, Deccan Charters ಮತ್ತು Deccan 360 ಕಂಪನಿಗಳನ್ನು ಹುಟ್ಟುಹಾಕಿದ ಕ್ಯಾಪ್ಟನ್ ಗೋಪಿನಾಥ್ ಅವರಿಗೆ ರಾಜಕೀಯ ಸ್ಪರ್ಧೆ ಹೊಸದೇನೂ ಅಲ್ಲ ಈ ಹಿಂದೆ 2009ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ (ಬಹುಶಃ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ) ಸ್ಪರ್ಧಿಸಿದ್ದರು.