ಕಾಂಗ್ರೆಸ್, ಬಿಜೆಪಿಯಿಂದ ಭೀತಿ ಎದುರಾಗಿದೆ: ಬಿದರಿ
ಬಾಗಲಕೋಟೆ, ಏಪ್ರಿಲ್ 11: ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳಿಗೆ ಖಡಕ್ ಸ್ಪರ್ಧೆ ನೀಡುತ್ತಿರುವ ಸರ್ವ ಜನ ಶಕ್ತಿ ಪಕ್ಷದ ಸಂಸ್ಥಾಪಕ, ಬಾಗಲಕೋಟೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶಂಕರ್ ಬಿದರಿ ಅವರು ಎರಡೂ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಪಕ್ಷದ ಚುನಾವಣಾ ಪ್ರಚಾರಕ್ಕೆ ಅಡ್ಡಿಯುಂಟುಮಾಡುತ್ತಿದ್ದಾರೆ ಎಂದು ಶಂಕರ್ ಬಿದರಿ ಅವರು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ
ಇಂದು
ಮಾತನಾಡಿದ
ಅವರು,
ಕಾಂಗ್ರೆಸ್
ಹಾಗೂ
ಬಿಜೆಪಿ
ಪಕ್ಷಗಳು
ರೌಡಿಗಳನ್ನು
ಬಿಟ್ಟು
ತಮ್ಮ
ಪಕ್ಷದ
ಕಾರ್ಯಕರ್ತರ
ಮೇಲೆ
ಹಲ್ಲೆ
ನಡೆಸಿ,
ಚುನಾವಣಾ
ಪ್ರಚಾರಕ್ಕೆ
ಅಡ್ಡಿ
ಪಡಿಸುತ್ತಿವೆ
ಎಂದು
ಅವರು
ತೀವ್ರ
ಅಸಮಾಧಾನ/
ಆತಂಕ
ವ್ಯಕ್ತಪಡಿಸಿದ್ದಾರೆ.
ಏ.
10ರಂದು
ಜಮಖಂಡಿಯ
ಹಿರೇಪಡಸಲಗಿ
ಗ್ರಾಮದಲ್ಲಿ
ನಡೆದ
ಬಹಿರಂಗ
ಸಮಾವೇಶದ
ವೇಳೆ
ಕಾಂಗ್ರೆಸ್
ಹಾಗೂ
ಬಿಜೆಪಿ
ಪಕ್ಷಗಳು
ರೌಡಿಗಳನ್ನು
ಕಳುಹಿಸಿ
ಕಾರ್ಯಕರ್ತರ
ಮೇಲೆ
ಹಲ್ಲೆ
ನಡೆಸಿವೆ.
ಘಟನೆಯಲ್ಲಿ
ನಾಲ್ವರು
ಕಾರ್ಯಕರ್ತರು
ಗಂಭೀರವಾಗಿ
ಗಾಯಗೊಂಡಿದ್ದು,
ಅವರು
ಕೆಎಲ್ಇ
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದಾರೆ.
ಉಭಯ
ಪಕ್ಷಗಳ
ಇಂತಹ
ವರ್ತನೆ
ಸರಿಯಲ್ಲ
ಎಂದು
ಅವರು
ತೀವ್ರ
ಆಕ್ರೋಶ
ವ್ಯಕ್ತಪಡಿಸಿದ್ದಾರೆ.