ಅಬ್ದುಲ್ ಜಬ್ಬಾರ್ ಪರಿಷತ್ ಅವಧಿ 42 ದಿನಗಳು ಮಾತ್ರ
ಬೆಂಗಳೂರು, ಮೇ 9 : ಮಾಜಿ ಸಚಿವ ಮುಮ್ತಾಜ್ ಅಲಿ ಖಾನ್ ಅವರಿಂದ ತೆರವಾಗಿದ್ದ ವಿಧಾನಪರಿಷತ್ ಸ್ಥಾನಕ್ಕೆ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರನ್ನು ನೇಮಕಮಾಡಲಾಗಿದೆ. ಗುರುವಾರ ಸಂಜೆ ಪರಿಷತ್ ಸದದ್ಯರಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಪರಿಷತ್ ಅವಧಿ ಜೂನ್ 20ಕ್ಕೆ ಕೊನೆಗೊಳ್ಳಲಿದೆ.
ಬಿಜೆಪಿಯಿಂದ
ವಿಧಾನಪರಿಷತ್ತಿಗೆ
ನಾಮನಿರ್ದೇಶನಗೊಂಡಿದ್ದ
ಮಾಜಿ
ಸಚಿವ
ಮುಮ್ತಾಜ್
ಅಲಿಖಾನ್
ಸೆಪ್ಟೆಂಬರ್
ನಲ್ಲಿ
ತಮ್ಮ
ಸ್ಥಾನಕ್ಕೆ
ರಾಜೀನಾಮೆ
ನೀಡಿದ್ದರು
ಮತ್ತು
ಬಿಜೆಪಿ
ತೊರೆದು
ಕಾಂಗ್ರೆಸ್
ಸೇರ್ಪಡೆಗೊಂಡಿದ್ದರು.
ಖಾನ್
ರಾಜೀನಾಮೆಯಿಂದ
ತೆರವಾದ
ಸ್ಥಾನಕ್ಕೆ
ಅಬ್ದುಲ್
ಜಬ್ಬಾರ್
ಅವರನ್ನು
ನೇಮಕ
ಮಾಡಲಾಗಿದ್ದು,
ಅವರು
ಸದಸ್ಯರಾಗಿ
ಪ್ರಮಾಣ
ವಚನ
ಸ್ವೀಕರಿಸಿದ್ದಾರೆ.
[ಮುಮ್ತಾಜ್
ಅಲಿಖಾನ್
ರಾಜೀನಾಮೆ]
ಹಲವು ತಿಂಗಳಿನಿಂದ ಖಾಲಿ ಇದ್ದ ಹುದ್ದೆಗೆ ಸರ್ಕಾರ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಅವರನ್ನು ನೇಮಕಗೊಳಿಸಿ ರಾಜ್ಯಪಾಲರಿಗೆ ಪ್ರಸ್ತಾವನೆ ಕಳಿಸಿತ್ತು. ಗುರುವಾರ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದು, ಸಂಜೆ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಬ್ದುಲ್ ಜಬ್ಬಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು. [ಜೂನ್ ನಲ್ಲಿ ಪರಿಷತ್ ಚುನಾವಣೆ]
ಮೇ 8ರಂದು ಜಬ್ಬಾರ್ ಅವರು ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಅವರ ಸದಸ್ಯತ್ವದ ಅವಧಿ ಜೂನ್ 20ರಂದು ಕೊನೆಗೊಳ್ಳಲಿದೆ. ಕಾಂಗ್ರೆಸ್ ಪಕ್ಷ ಮತ್ತೂಂದು ಅವಧಿಗೆ ಅವರ ಸದಸ್ಯತ್ವವನ್ನು ಮುಂದುವರೆಸುವ ಭರವಸೆಯನ್ನು ನೀಡಿದೆ ಎಂದು ತಿಳಿದುಬಂದಿದೆ.
ಮುಮ್ತಾಜ್ ಅಲಿಖಾನ್ ಅವರಿಂದ ತೆರವಾದ ಸ್ಥಾನಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ನೇಮಕ ಮಾಡಿ, ಅವರನ್ನು ಸಿಎಂ ಸಿದ್ದರಾಮಯ್ಯ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಮಾತು ಕೇಳಿಬಂದಿತ್ತು. ಸದ್ಯ ಜಬ್ಬಾರ್ ನೇಮಕದಿಂದ ಈ ಕುರಿತ ಸುದ್ದಿಗಳಿಗೆ ಕಾಂಗ್ರೆಸ್ ಪಕ್ಷ ತೆರೆ ಎಳೆದಿದೆ.