ಸೋಮವಾರದಿಂದ ವಿಧಾನಸಭೆ ಅಧಿವೇಶನ ಆರಂಭ
ಬೆಂಗಳೂರು, ಜೂ. 23 : ಲೋಕಸಭಾ ಚುನಾವಣೆ ನಂತರ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನ ಜೂ.23ರ ಸೋಮವಾರಿಂದ ಆರಂಭಗೊಳ್ಳಲಿದ್ದು, ಜುಲೈ 30ರವರೆಗೆ ನಡೆಯಲಿದೆ. ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳ ಸದಸ್ಯರು ಸಜ್ಜಾಗಿದ್ದು, ಆಡಳಿತ ಪಕ್ಷದವರು ಸುಧೀರ್ಘ ಅಧಿವೇಶನಕ್ಕೆ ಸಿದ್ಧರಾಗಿದ್ದಾರೆ.
ಮುಖ್ಯಮಂತ್ರಿ
ಸಿದ್ದರಾಮಯ್ಯ
ನೇತೃತ್ವದ
ಸರ್ಕಾರ
ಒಂದು
ವರ್ಷ
ಪೂರ್ಣಗೊಳಿಸಿದ
ನಂತರ
ನಡೆಯುತ್ತಿರುವ
ಮೊದಲ
ಅಧಿವೇಶನ
ಇದಾಗಿದೆ.
ಆದ್ದರಿಂದ
ಬಿಜೆಪಿ
ಮತ್ತು
ಜೆಡಿಎಸ್
ಪಕ್ಷಗಳು
ಸರ್ಕಾರವನ್ನು
ಇಕ್ಕಟ್ಟಿಗೆ
ಸಿಲುಕಿಸಲು
ತಂತ್ರ
ರೂಪಿಸಿವೆ.
ಇತ್ತೀಚಿನ
ವರ್ಷಗಳಲ್ಲಿ
ಇಷ್ಟೊಂದು
ಸುದೀರ್ಘವಾಗಿ
ಅಧಿವೇಶನ
ನಡೆಯುತ್ತಿರುವುದರಿಂದ
ಇಲಾಖಾವಾರು
ಚರ್ಚೆಗೆ
ಅವಕಾಶ
ಕಲ್ಪಿಸಲು
ಉಭಯ
ಸದನಗಳ
ಸ್ಪೀಕರ್
ಗಳು
ತೀರ್ಮಾನಿಸಿದ್ದಾರೆ.
ಒಟ್ಟು 27 ದಿನಗಳ ಕಾಲ ಅಧಿವೇಶನ ನಡೆಯುತ್ತಿದ್ದು, ಹಲವಾರು ಮಹತ್ವದ ವಿಧೇಯಕಗಳನ್ನೂ ಮಂಡಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಬಗೆಹರಿಯದ ಕಬ್ಬು ಬೆಳೆಗಾರರ ಸಮಸ್ಯೆ, ಕಾನೂನು ಮತ್ತು ಸುವ್ಯವಸ್ಥೆ, ಬಿಪಿಎಲ್ ಕಾರ್ಡ್ಗಳ ವಿತರಣೆಯಲ್ಲಿನ ಗೊಂದಲ, ಕುಡಿಯುವ ನೀರಿನ ಸಮಸ್ಯೆ ಮುಂತಾದ ವಿಚಾರಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ತೀರ್ಮಾನಿಸಿವೆ. [ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ ರೈತರು]
ಇಂದು ಮಧ್ಯಾಹ್ನ 12ಕ್ಕೆ ಉಭಯ ಸದನಗಳ ಕಲಾಪ ಆರಂಭವಾಗಲಿದ್ದು, ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ನಿರ್ಣಯ ಮಂಡಿಸಲಾಗುತ್ತದೆ. ನಂತರ ಕಲಾಪವನ್ನು ಮುಂದೂಡದೆ ಮುಂದುವರೆಸಲಾಗುತ್ತದೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಯಡಿಯೂರಪ್ಪ, ಗೌಡರು ಇಲ್ಲ : ವಿಧಾನಸಭೆ ಮತ್ತು ಪರಿಷತ್ತಿನ ಪ್ರತಿಪಕ್ಷಗಳ ಸಾಲಿನಲ್ಲಿ ಮಾಜಿ ಸಿಎಂಗಳು ಇದ್ದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದರು. ಆದರೆ, ಇಂದಿನಿಂದ ಆರಂಭವಾಗುವ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ವಿ.ಸದಾನಂದ ಗೌಡರು ಇರುವುದಿಲ್ಲ.
ಹಿಂದಿನ ಅಧಿವೇಶನದಲ್ಲಿ ರೈತರ ವಿಷಯ ಬಂದಾಗ ಸದನದಲ್ಲಿ ಸರ್ಕಾರದ ವಿರುದ್ಧ ಗುಡುಗಿದ್ದ ಬಿ.ಎಸ್.ಯಡಿಯೂರಪ್ಪ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿ ಸಂಸತ್ ಪವೇಶಿಸಿರುವುದರಿಂದ ಅಧಿವೇಶನದಲ್ಲಿ ಅವರ ಅನುಪಸ್ಥಿತಿ ಎದ್ದು ಕಾಣಲಿದೆ. ಇನ್ನು ವಿಧಾನಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಡಿ.ವಿ.ಸದಾನಂದ ಗೌಡರು ಕೇಂದ್ರ ಸಚಿವರಾಗಿರುವುದಿಂದ ಕೆ.ಎಸ್.ಈಶ್ವರಪ್ಪ ಪರಿಷತ್ತಿನಲ್ಲಿ ಬಿಜೆಪಿಯ ಸಭಾನಾಯಕರಾಗಲಿದ್ದಾರೆ.