ಮಹಾರಾಷ್ಟ್ರದಲ್ಲಿ ಮಳೆ: ಡ್ಯಾಂನಲ್ಲಿ ಎಷ್ಟು ನೀರಿದೆ?
ಬೆಂಗಳೂರು,ಜು.20: ಕೃಷ್ಣೆಯ ಉಗಮ ಸ್ಥಾನ ಮಹಾಬಳೇಶ್ವರ ಸೇರಿದಂತೆ ಕೊಂಕಣ ಪ್ರದೇಶದಲ್ಲಿ ಮಳೆ ಮತ್ತೆ ಹೆಚ್ಚಾಗಿದೆ.ಮಹಾರಾಷ್ಟ್ರದ ಜಲಾಶಯಗಳಿಂದ ಹೊರ ಬಿಡುವ ನೀರಿನ ಪ್ರಮಾಣ ಹೆಚ್ಚಾಗಿದೆ.
ಆಲಮಟ್ಟಿ ಜಲಾಶಯಕ್ಕೆ ಮಂಗಳವಾರ 1,14,500 ಕ್ಯೂಸೆಕ್ ನೀರು ಹರಿದು ಬರುತ್ತಿದೆ. 26 ಕ್ರೆಸ್ಟ್ಗೇಟ್ ಪೈಕಿ, 16 ಕ್ರೆಸ್ಟ್ಗೇಟ್ಗಳನ್ನು ತೆರೆದು 1,10,00 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ 42,000 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. 123 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 106 ಟಿಎಂಸಿ ನೀರು ಸಂಗ್ರಹವಾಗಿದೆ.
ನಾರಾಯಣಪುರದ ಬಸವಸಾಗರ ಜಲಾಶಯ ಮಂಗಳವಾರ ಬಹುತೇಕ ಭರ್ತಿಯಾಗಿದೆ. ಜಲಾಶಯದ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಜಲಾಶಯಕ್ಕೆ 1.10 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು. 25 ಗೇಟ್ಗಳ ಮೂಲಕ 1.06 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಚಿಕ್ಕೋಡಿ ತಾಲೂಕಿನಲ್ಲಿ ತಾಲ್ಲೂಕಿನ ಕಲ್ಲೋಳ-ಯಡೂರ ಮತ್ತು ಜತ್ರಾಟ ಭೀವಶಿ ನಡುವಿನ ಸೇತುವೆಗಳು ಮುಳುಗಡೆಯಾಗಿವೆ. ಕೃಷ್ಣಾ ನದಿ ಸೇರಿದಂತೆ ಉಪನದಿಗಳಾದ ದೂಧಗಂಗಾ, ವೇಧಗಂಗಾ, ಪಂಚಗಂಗಾ ನದಿಗಳು ಉಕ್ಕಿ ಹರಿಯಲಾರಂಭಿಸಿವೆ.
ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದರೂ ಮಲೆನಾಡು,ಕರಾವಳಿಯಲ್ಲಿ ಮಳೆ ಕ್ಷೀಣಿಸಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಮಂಗಳವಾರವೂ ಮಳೆ ಕ್ಷೀಣಿಸಿದ್ದು, ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದೆ.
ಹುಬ್ಬಳ್ಳಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ, ಶಾಂತಳ್ಳಿ ಮಳೆಯಾಗಿದ್ದು,ಇತರ ಭಾಗಗಳಲ್ಲಿ ಮಳೆ ಕಡಿಮೆಯಾಗಿದೆ.
ಭಾರೀ ಮಳೆ: ಯಾವ ಜಲಾಶಯದಲ್ಲಿ ಎಷ್ಟು ನೀರಿದೆ? | ||||
ಜಲಾಶಯ | ಗರಿಷ್ಠ ಮಟ್ಟ | ಇಂದಿನ ನೀರಿನ ಮಟ್ಟ | ಒಳ ಹರಿವು | ಹೊರ ಹರಿವು |
ಲಿಂಗನಮಕ್ಕಿ | 1819 | 1788.85 | 22,472 | ----- |
ನಾರಾಯಣಪುರ | 492.252 ಮೀ. | 491.00 ಮೀ. | 1,10,250 | 1,06,300 |
ತುಂಗಾಭದ್ರಾ | 1633 | 1627.52 | 60,133 | 4237 |
ಕೆಆರ್ಎಸ್ | 124.80 | 113.85 | 14,413 | 7970 |
ಆಲಮಟ್ಟಿ | 519 .60 ಮೀ. | 518.80 ಮೀ. | 1,14,500 | 1,10,00 |
*ನೀರಿನ
ಮಟ್ಟ
ಅಡಿಗಳಲ್ಲಿ
*ಒಳ
ಹರಿವು
,ಹೊರಹರಿವು
ಕ್ಯೂಸೆಕ್
ಲೆಕ್ಕದಲ್ಲಿ
ಕ್ಯೂಸೆಕ್
ಮತ್ತು
ಟಿಎಂಸಿ
ಎಂದರೆ
ಎಷ್ಟು?
ಕ್ಯೂಸೆಕ್
ಎಂಬುದು
Cubic
feet
per
Secondನ
ಹ್ರಸ್ವರೂಪ.
ಪ್ರತಿ
ಸೆಕೆಂಡಿಗೆ
ಒಂದು
ಘನ
ಅಡಿ
ನೀರು
ಹರಿದರೆ
ಅದು
ಒಂದು
ಕ್ಯೂಸೆಕ್
ನೀರು
ಎಂದು
ಕರೆಯಲ್ಪಡುತ್ತದೆ.
ಒಂದು
ಘನ
ಅಡಿ
ನೀರನ್ನು
ಲೀಟರುಗಳಿಗೆ
ಪರಿವರ್ತಿಸಿದರೆ
ಸುಮಾರು
28.317
ಲೀಟರುಗಳಾಗುತ್ತವೆ.
11,524
ಕ್ಯೂಸೆಕ್
ನೀರು
24
ಗಂಟೆಯ
ಕಾಲ
ನಿರಂತರ
ಹರಿದರೆ
ಒಂದು
ಟಿಎಂಸಿ
ಆಗಲಿದೆ.