ಶೀಘ್ರದಲ್ಲೇ 11,500 ಶಿಕ್ಷಕರ ನೇಮಕಾತಿ
ಬೆಂಗಳೂರು, ಆ.22 : ರಾಜ್ಯದಲ್ಲಿ 11,500 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆಯ ಒಪ್ಪಿಗೆ ದೊರಕಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಶಾಲೆ, ಕಾಲೇಜು ಸೇರಿದಂತೆ 28 ಸಾವಿರ ಹುದ್ದೆಗಳು ಖಾಲಿ ಇವೆ ಎಂದು ಸಚಿವರು ತಿಳಿಸಿದರು.
ಶುಕ್ರವಾರ
ಕನ್ನಡ
ಸಾಹಿತ್ಯ
ಪರಿಷತ್ತಿನ
ಕಾರ್ಯಕ್ರಮದಲ್ಲಿ
ಪಾಲ್ಗೊಂಡ
ನಂತರ
ಮಾತನಾಡಿದ
ಸಚಿವ
ಕಿಮ್ಮನೆ
ರತ್ನಾಕರ್,
ಈಗಾಗಲೇ
11,500
ಶಿಕ್ಷಕರ
ನೇಮಕಕ್ಕೆ
ಆರ್ಥಿಕ
ಇಲಾಖೆಯ
ಅನುಮೋದನೆ
ಸಿಕ್ಕಿದೆ.
ಹೈದರಾಬಾದ್-ಕರ್ನಾಟಕ
ಭಾಗದ
ಮೀಸಲು
ನಿಗದಿಪಡಿಸುವ
ವಿಚಾರ
ವಿಳಂಬವಾದ್ದರಿಂದ
ನೇಮಕಾತಿಯೂ
ವಿಳಂಬವಾಯಿತು
ಎಂದು
ಹೇಳಿದರು.
ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ 22ಸಾವಿರಕ್ಕೂ ಹೆಚ್ಚು ಮಂದಿ ತೇರ್ಗಡೆಯಾಗಿದ್ದಾರೆ. ಅವರಿಗೆ ಮತ್ತೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಮೂಲಕ ನೇಮಕ ಮಾಡಿಕೊಳ್ಳಲಾಗುವುದು ಈ ಪ್ರಕ್ರಿಯೆನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು. [ಸಿಬ್ಬಂದಿಗಳು ನನ್ನ ಮಾತೇ ಕೇಳುತ್ತಿಲ್ಲ]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹೆಚ್ಚುವರಿಯಾಗಿ 5 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ. ಇವರಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಕರು ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಚಿಂತನೆ ನಡೆಸಲಾಗುತ್ತಿದ್ದು, ಈ ಬಗ್ಗೆ ಶೀಘ್ರವೇ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ನಿಘಂಟುಗಳನ್ನು ಮರುಮುದ್ರಣ ಮಾಡಲಾಗಿದ್ದು, ರಾಜ್ಯದ 4,400 ಪದವಿ ಪೂರ್ವ ಕಾಲೇಜುಗಳಿಗೆ ವಿತರಣೆ ಮಾಡುವ ಮೂಲಕ ನಿಘಂಟಿಗೆ ಪ್ರಚಾರ ನೀಡಲಾಗುತ್ತಿದೆ. ಮನುಕುಲದ ಕಥೆ ಎಂಬ ನೈತಿಕ ಶಿಕ್ಷಣ ಬೋಧಿಸುವ ಪುಸ್ತಕ ಮಾಲಿಕೆಯನ್ನು ಕೂಡ ಮರು ಮುದ್ರಣ ಮಾಡಿ, ಶಾಲೆಗಳಿಗೆ ವಿತರಣೆ ಮಾಡಲಾಗುತ್ತದೆ ಎಂದು ಕಿಮ್ಮನೆ ರತ್ನಾಕರ್ ಹೇಳಿದರು.