'ವಿಜಯ ಗೀತೆ' ಮೊಳಗಿಸಿದ ಮೋದಿ ಟೀಂ
ಬೆಂಗಳೂರು, ಮೇ.16: ನಿರೀಕ್ಷೆಗೂ ಮೀರಿ ದಾಖಲೆ ಪ್ರಮಾಣದ ಸೀಟುಗಳನ್ನು ಬಾಚಿಕೊಂಡಿರುವ ಬಿಜೆಪಿ ಶುಕ್ರವಾರದಂದು ಬಂದಿರುವ ಶುಭ ಜನಾದೇಶಕ್ಕೆ ತಲೆ ಬಾಗಿದೆ. ಇದೇ ಖುಷಿಯಲ್ಲಿ ವಿಜಯ ಗೀತೆಯನ್ನು ಲೋಕಾರ್ಪಣೆ ಮಾಡಿದೆ. 'ಒಳ್ಳೆ ದಿನಗಳು ಬರಲಿವೆ' ಎಂಬ ಸಾಲುಗಳನ್ನು ಹೊಂದಿರುವ ವಿಜಯ ಗೀತೆಯ ಸಾಲುಗಳು ನಿಜವಾಗುತ್ತದೆ ಎಂಬ ಆಶಯ ಹೊಂದಿದೆ.
ಹತ್ತು
ವರ್ಷಗಳ
ಯುಪಿಎ
ಸರ್ಕಾರದ
ಅಧಿಕಾರಕ್ಕೆ
ಬ್ರೇಕ್
ಹಾಕಿ
ಬಿಜೆಪಿ
ಭರ್ಜರಿ
ವಿಜಯ
ದಾಖಲಿಸಿದೆ.
25
ವರ್ಷಗಳ
ನಂತರ
ಸ್ವಂತ
ಬಲದಿಂದ
ಕೇಂದ್ರದಲ್ಲಿ
ಏಕೈಕ
ಪಕ್ಷವೊಂದು
ಅಧಿಕಾರಕ್ಕೆ
ಬಂದಿದೆ.
ಬಿಜೆಪಿ
ಪ್ರಧಾನಿ
ಅಭ್ಯರ್ಥಿ
ನರೇಂದ್ರ
ಮೋದಿ
ಅವರು
ವಡೋದರಾ
ಹಾಗೂ
ವಾರಣಾಸಿಯಲ್ಲಿ
ಭರ್ಜರಿ
ವಿಜಯ
ದಾಖಲಿಸಿದ್ದಾರೆ.
ಮುಸ್ಲಿಮರು ಅಧಿಕವಾಗಿರುವ ಪ್ರದೇಶಗಳಲ್ಲಿ ಬಿಜೆಪಿ ತನ್ನ ಪ್ರಾಬಲ್ಯ ಮೆರೆದಿದೆ. ಎನ್ ಡಿಟಿವಿ ವರದಿ ಪ್ರಕಾರ ಉತ್ತರಪ್ರದೇಶದ ಮುಸ್ಲಿಮರು ಅಧಿಕವಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆದುಕೊಂಡಿದೆ. ಈ ಪ್ರದೇಶಗಳಲ್ಲಿ ಬಿಜೆಪಿ ಶೇ 79ರಷ್ಟು ಮತಗಳನ್ನು ಪಡೆದುಕೊಂಡಿದ್ದರೆ, ಆಡಳಿತಾರೂಢ ಸಮಾಜವಾದಿ ಪಕ್ಷ ಶೇ 14ರಷ್ಟು ಮತಗಳು, ಕಾಂಗ್ರೆಸ್ ಶೇ 7 ರಷ್ಟು ಮತ ಹಾಗೂ ಬಹುಜನ ಸಮಾಜವಾದಿ ಪಕ್ಷ ಯಾವುದೇ ಪ್ರಭಾವ ಬೀರುವಲ್ಲಿ ವಿಫಲವಾಗಿರುವುದು ಕಂಡು ಬಂದಿದೆ. ಬಿಜೆಪಿಯ ವಿಜಯ ಗೀತೆಯ ತುಣುಕು ಇಲ್ಲಿದೆ ನೋಡಿ..