ಜೂ.15: ದೇಶ, ವಿದೇಶಗಳ ಹೆಡ್ ಲೈನ್ ನ್ಯೂಸ್
ಬೆಂಗಳೂರು, ಜೂ.15: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
12.05
:
ನಟಿ,
ಕಿಂಗ್ಸ್
XI
ಪಂಜಾಬ್
ಸಹ
ಮಾಲೀಕತ್ವ
ಹೊಂದಿರುವ
ಪ್ರೀತಿ
ಜಿಂಟಾ
ಅವರ
ಕಿರುಕುಳ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಮುಂಬೈ
ಪೊಲೀಸರು
ಐಪಿಎಲ್
ಸಿಇಒ
ಸುನಿಲ್
ಗವಾಸ್ಕರ್
ಅವರ
ಹೇಳಿಕೆ
ಪಡೆದುಕೊಳ್ಳಲಿದ್ದು,
ಮೈದಾನದ
ಸಿಬ್ಬಂದಿ
ವಿಚಾರಣೆ
ನಡೆಸಲಿದ್ದಾರೆ.
11.45:
ಪ್ರೀತಿ
ಜಿಂಟಾ-
ನೆಸ್
ವಾಡಿಯಾ
ಪ್ರಕರಣದಲ್ಲಿ
ಘಟನೆ
ನಡೆದ
ದಿನದ
ಸಿಸಿಟಿವಿ
ಕೆಮರಾದ
ವಿಡಿಯೋ
ಕ್ಲಿಪ್ಪಿಂಗ್
ಲಭ್ಯವಾಗಿಲ್ಲ.
ಲಭ್ಯವಾದರೂ
ಹೆಚ್ಚು
ಪ್ರೇಕ್ಷಕರಿರುವುದರಿಂದ
ಸ್ಪಷ್ಟವಾಗಿ
ತಿಳಿಯಲು
ಆಗುತ್ತಿಲ್ಲ
ಎಂದು
ತನಿಖಾಧಿಕಾರಿಗಳು
ಹೇಳಿದ್ದಾರೆ.
11.20: ದೆಹಲಿಯ ಶಾಸ್ತಿ ಭವನದ ಆರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. 7ಕ್ಕೂ ಅಧಿಕ ಅಗ್ನಿ ಶಾಮಕದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುತ್ತಿದ್ದಾರೆ.
11.00 : ರಕ್ಷಣಾ ಸಚಿವ ಅರುಣ್ ಜೇಟ್ಲಿ ಅವರು ಎಲ್ ಒ ಸಿಗೆ ಭೇಟಿ ನೀಡಲಿದ್ದು, ಸೇನಾ ಅಧಿಕಾರಿಗಳು, ಸೈನಿಕರ ಜತೆ ಮಾತುಕತೆ ನಡೆಸಲಿದ್ದಾರೆ.
10.45: ಫೀಫಾ ವಿಶ್ವಕಪ್ ಅಪ್ದೇಟ್: ಐವರಿ ಕೋಸ್ಟ್ ವಿರುದ್ಧ ಜಪಾನ್ ತಂಡಕ್ಕೆ 2-1 ಅಂತರದ ಸೋಲು. ಇಂಗ್ಲೆಂಡ್ ವಿರುದ್ಧ ಇಟಲಿಗೆ ಜಯ
10.30: ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಪ್ರಥಮ ವಿದೇಶಿ ಪ್ರವಾಸವನ್ನು ಭಾನುವಾರದಿಂದ ಕೈಗೊಳ್ಳಲಿದ್ದಾರೆ. ಭೂತನ್ ರಾಜಧಾನಿ ಥಿಂಪುಗೆ ಮೋದಿ ಅವರು ತೆರಳುತ್ತಿದ್ದಾರೆ.
10.15 : ಬ್ರಿಟನ್ನ ರಾಣಿ ಎರಡನೆ ಎಲಿಝಬೆತ್ ನೀಡುವ ನೈಟ್ಹುಡ್ ಗೌರವ ಪ್ರಶಸ್ತಿಯು ಭಾರತೀಯ ಮೂಲದ ಭೌತ ವಿಜ್ಞಾನಿ ಪ್ರೊಫೆಸರ್ ತೇಜಿಂದರ್ ವರ್ಡಿಯವರಿಗೆ ನೀಡಲಾಗಿದೆ.
10.00 : ಆಸ್ಟ್ರೇಲಿಯದಲ್ಲಿ ಏರ್ಪಡಿಸಲಾಗಿದ್ದ ಛಾಯಾಚಿತ್ರ ಸ್ಪರ್ಧೆಯೊಂದರಲ್ಲಿ ಭಾರತೀಯ ಮೂಲದ ವಿಜ್ಞಾನಿ ವಿಜಯ್ ಕೌಲ್ ಅವರಿಗೆ ಪ್ರಥಮ ಬಹುಮಾನ ಲಭಿಸಿದೆ.