ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೆ.12: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್
ಬೆಂಗಳೂರು, ಸೆ.12: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
12.25:
ನಿಥಾರಿ
ಸರಣಿ
ಕೊಲೆ
ಪಾತಕಿ
ಸುರಿಂದರ್
ಕೋಲಿ
ಪುನರ್
ಪರಿಶೀಲನೆ
ಮನವಿಯನ್ನು
ಪುರಸ್ಕರಿಸಿರುವ
ಸುಪ್ರೀಂಕೋರ್ಟ್
ಅಕ್ಟೋಬರ್
29ರ
ತನಕ
ಆತನ
ಗಲ್ಲುಶಿಕ್ಷೆ
ಜಾರಿಗೊಳಿಸದಂತೆ
ತಡೆಯಾಜ್ಞೆ
ನೀಡಿದೆ.
12.20:
ಮನಮೋಹನ್
ಸಿಂಗ್
ಅವರಿಗೆ
2ಜಿ
ಹಗರಣದ
ಬಗ್ಗೆ
ನಾನು
ಮೊದಲೆ
ಎಚ್ಚರಿಕೆ
ನೀಡಿದ್ದೆ
ಎಂದು
ಮಾಜಿ
ಕೇಂದ್ರ
ಸಚಿವ
ಕಮಲ್
ನಾಥ್
ಹೇಳಿದ್ದಾರೆ.
12.10: ಉತ್ತರಪ್ರದೇಶ ಚುನಾವಣಾ ಆಯೋಗ ವಿಧಿಸಿದ್ದ ಎಚ್ಚರಿಕೆ ಉಲ್ಲಂಘಿಸಿದ ಆರೋಪದ ಮೇಲೆ ಬಿಜೆಪಿ ಸಂಸದ ಯೋಗಿ ಆದಿತ್ಯಾನಾಥ್ ಮೇಲೆ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.
11.50: ಮಾಜಿ ಸಿಎಜಿ ವಿನೋದ್ ರೈ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ಆಪಾದನೆ ಮಾಡಿ, ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಹಗರಣಗಳ ಬಗ್ಗೆ ಅವರಿಗೆ ಮೊದಲೇ ಗೊತ್ತಿದ್ದರೂ ಕ್ರಮ ಜರುಗಿಸಿಲ್ಲ ಎಂದಿದ್ದಾರೆ.
11.40: ನಟ ಸಲ್ಮಾನ್ ಖಾನ್ ವಿರುದ್ಧ ಧಾರ್ಮಿಅಕ್ ಭಾವನೆ ಉಲ್ಲಂಘನೆ ಮಾಡಿದ ಆರೋಪ ಹೊರೆಸಿ ಪ್ರಕರಣ ದಾಖಲಿಸಲಾಗಿದೆ.[ವಿವರ ಇಲ್ಲಿ ಓದಿ]
11.15: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಮ್ಮೆ ಮೇಘ ಸ್ಫೋಟ ಸಂಭವಿಸಿದ್ದು, ಅಲ್ಲಲ್ಲಿ ಭೂಕುಸಿತದಿಂದ 40 ಮಂದಿ ಮೃತಪಟ್ಟಿದ್ದಾರೆ.
Comments
English summary
Top news in brief for the day: Nithari killings: SC agrees to hear Koli's review petition, stay on his execution extended till Oct 29 and many more news from across the globe.
Story first published: Friday, September 12, 2014, 12:34 [IST]