ಕಳಂಕಿತರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಡಿ
ನವದೆಹಲಿ, ಆ.27 : ಕಳಂಕಿತ ಸಚಿವರನ್ನು ತಮ್ಮ ಸಂಪುಟದಿಂದ ಕೈಬಿಡುವ ಕುರಿತು ಪ್ರಧಾನಮಂತ್ರಿ ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿರುವ ಸುಪ್ರೀಂಕೋರ್ಟ್, ಕಳಂಕಿತರನ್ನು ಸಂಪುಟದಿಂದ ವಜಾಗೊಳಿಸುವಂತೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಕಳಂಕಿತರು
ಪ್ರಧಾನಮಂತ್ರಿ
ಅವರ
ಸಚಿವ
ಸಂಪುಟದಲ್ಲಿದ್ದು
ಅವರನ್ನು
ಸಂಪುಟದಿಂದ
ವಜಾಗೊಳಿಸುವಂತೆ
ಆದೇಶ
ನೀಡಬೇಕು
ಎಂದು
ಮನೋಜ್
ನರುಲಾ
ಎಂಬುವವರು
ಸಲ್ಲಿಸಿದ್ದ
ಸಾರ್ವಜನಿಕ
ಹಿತಾಸಕ್ತಿ
ಅರ್ಜಿಯ
ವಿಚಾರಣೆ
ನಡೆಸಿದ
ಸುಪ್ರೀಂಕೋರ್ಟ್
ಮುಖ್ಯ
ನಾಯಮೂರ್ತಿ
ಆರ್.ಎಂ.
ಲೋಧಾ
ನೇತೃತ್ವದ
ಪೀಠ
ಬುಧವಾರ
ಈ
ಆದೇಶ
ನೀಡಿದೆ.
ಪ್ರಧಾನಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ತಮ್ಮ ಸಂಪುಟಕ್ಕೆ ಸಚಿವರನ್ನು ಸೇರಿಸಿಕೊಳ್ಳುವಾಗ ಅವರು ಅಪರಾಧ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಕಳಂಕಿತರಿಗೆ ಸಚಿವ ಸ್ಥಾನ ನೀಡಬಾರದು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳ ಹುದ್ದೆಗಳು ಸಂವಿಧಾನಿಕವಾಗಿದ್ದು, ಈ ಹುದ್ದೆಗಳ ಮೇಲೆ ಜನರು ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಆದ್ದರಿಂದ ಆ ಹುದ್ದೆಯಲ್ಲಿರುವವರು ಭಾರತೀಯ ಸಂವಿಧಾನದ ನೈತಿಕತೆಯನ್ನು ಎತ್ತಿ ಹಿಡಿಯಬೇಕು. ಕಳಂಕಿತರನ್ನು ಸಚಿವಸಂಪುಟಕ್ಕೆ ಸೇರಿಸಿಕೊಳ್ಳಬಾರದು ಸುಪ್ರೀಂಕೋರ್ಟ್ ಹೇಳಿದೆ.