ಸತ್ತುಹೋದವ ಎದ್ದು ಬಂದು ಹೇಳಿದ ಕೊಲೆ ಕತೆ!
ಬೆಂಗಳೂರು, ಆ. 29 : ಪ್ರಿಯತಮೆಯೊಂದಿಗೆ ಕಾಲ ಕಳೆಯಲು ಹೆಂಡತಿಯನ್ನು ಹತ್ಯೆ ಮಾಡುವ ಹಲವಾರು ಪ್ರಕರಣಗಳು ಸಾಮಾನ್ಯ. ಆದರೆ ಇಲ್ಲೊಬ್ಬ 'ಪುಣ್ಯಾತ್ಮ' ತಾನೇ ಸತ್ತುಹೋಗಿದ್ದೇನೆ ಎಂದು ಹೆಂಡತಿ ಹಾಗೂ ಹೊರಪ್ರಪಂಚಕ್ಕೆ ನಂಬಿಸಿ ಆರಾಮವಾಗಿದ್ದ!
ಇಂಥ ಚಾಲಾಕಿ ಬುದ್ಧಿ ಉಪಯೋಗಿಸಿದ ಆರ್ಟಿಐ ಕಾರ್ಯಕರ್ತನೊಬ್ಬನ್ನು ಬೇರೆ ಮಹಿಳೆ ಜತೆ ಇದ್ದ ಸಂದರ್ಭ ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ನೊಯ್ಡಾ ನಿವಾಸಿ ಆರೋಪಿ ಚಂದರ್ ಮೋಹನ್ ಶರ್ಮಾನನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಪ್ರೀಂದರ್ ಸಿಂಗ್, ಬೆಂಗಳೂರು ನಿವಾಸಿ ಮಹಿಳೆಯ ಮೊಬೈಲ್ ಜಾಡು ಹಿಡಿದು ತನಿಖೆ ನಡೆಸಿ ಆರೋಪಿ ಚಂದರ್ ಮೋಹನ್ ಶರ್ಮಾನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಹಾಗಾದರೆ
ಕಾರಲ್ಲಿ
ಸಿಕ್ಕ
ದೇಹ
ಯಾರದ್ದು?
ನನ್ನ
ಹೆಂಡತಿ
ಸವಿತಾಳೊಂದಿಗಿನ
ಸಂಬಂಧ
ಹಳಸಿತ್ತು.
ಹಾಗಾಗಿ
ಒಬ್ಬ
ಮಾನಸಿಕ
ಅಸ್ವಸ್ಥನನ್ನು
ಕಿಡ್ನಾಪ್ಮಾಡಿ
ಕಾರಿನಲ್ಲಿಟ್ಟು
ಬೆಂಕಿ
ನೀಡಿದೆ.
ನನ್ನ
ಬಟ್ಟೆ
ಮತ್ತಿತರ
ಸಾಮಗ್ರಿಗಳನ್ನು
ಕಾರಿನಲ್ಲಿ
ಬಿಟ್ಟಿದ್ದೆ.
ದೇಹ
ಸಂಪೂರ್ಣ
ಸುಟ್ಟು
ಕರಕಲಾದ್ದರಿಂದ
ಯಾರಿಗೂ
ಅನುಮಾನ
ಬಂದಿರಲಿಲ್ಲ.
ನಾನೇ ಸತ್ತಿದ್ದೇನೆ ಎಂದುಕೊಂಡಿದ್ದರು. ಇದಾದ ನಂತರ ಬೆಂಗಳೂರಿಗೆ ಆಗಮಿಸಿ ನನ್ನ ಪ್ರಿಯತಮೆಯೊಂದಿಗೆ ಕಾಲ ಕಳೆಯುತ್ತಿದ್ದೆ ಎಂದು ಶರ್ಮಾ ಘಟನೆಯ ವಿವರಣೆ ನೀಡಿದ್ದಾನೆ.
ಹೆಂಡತಿಯ
ಅನುಮಾನ
ಹೊರತಂದ
ನಕಲಿ
ಸಾವಿನ
ನಾಟಕ
ಆದರೆ
ಚಂದ್ರಮೋಹನ್
ಹೆಂಡತಿಗೆ
ಮೊದಲಿನಿಂದಲೂ
ಗಂಡನ
ಮೇಲೆ
ಅನುಮಾನವಿತ್ತು.
ಗಂಡ
ಸತ್ತ
ಒಂದು
ತಿಂಗಳ
ನಂತರದಲ್ಲಿ
ಮನೆಯ
ಸಮೀಪವೇ
ವಾಸಿಸುತ್ತಿದ್ದ
ಮಹಿಳೆ
ಶಂಕಾಸ್ಪದ
ರೀತಿ
ನಾಪತ್ತೆಯಾಗಿದ್ದಳು.
ತಕ್ಷಣ
ಸವಿತಾ
ಪೊಲೀಸರಿಗೆ
ಈ
ಬಗ್ಗೆ
ಮಾಹಿತಿ
ನೀಡಿದ್ದಳು.
ಮಾಹಿತಿ ಆಧರಿಸಿ ಶಂಕಿತ ಮಹಿಳೆಯ ಮೊಬೈಲ್ ಟ್ಯಾಪ್ ಮಾಡಲಾಯಿತು. ಹಾಗಾಗಿ ಚಾಲಾಕಿ ಶರ್ಮಾ ಸಿಕ್ಕಿಬಿದ್ದ. ಕೊಲೆ ಆರೋಪ ಮತ್ತು ವಂಚನೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.