ಸ್ವಿಸ್ ಬ್ಯಾಂಕಿನ ದಾಖಲೆ ಹಂಚಿಕೊಂಡಿಲ್ಲ: ಜೇಟ್ಲಿ
ನವದೆಹಲಿ, ಜು.9: 'ತನ್ನ ದೇಶದ ಬ್ಯಾಂಕ್ ಗಳಲ್ಲಿ ಕಪ್ಪು ಹಣ ಹೊಂದಿರುವ ಭಾರತೀಯರ ವಿವರ ನೀಡಲು ಸ್ವಿಟ್ಜರ್ಲೆಂಡ್ ಸರ್ಕಾರ ಒಪ್ಪಿಗೆ ಸೂಚಿಸಿದೆ' ಎಂಬ ಸುದ್ದಿಗೆ ತದ್ವಿರುದ್ಧವಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ರಾಜ್ಯಸಭೆಯಲ್ಲಿ ಬುಧವಾರ ಹೇಳಿಕೆ ನೀಡಿದ್ದಾರೆ.
ಭಾರತ ಸರ್ಕಾರ ಕೋರಿಕೆ ಮೇರೆಗೆ ಸ್ವಿಸ್ ಸರ್ಕಾರ ತನ್ನ ದೇಶದಲ್ಲಿರುವ ಬ್ಯಾಂಕುಗಳಲ್ಲಿನ ಖಾತೆದಾರರ ವಿವರ ಹಂಚಿಕೊಳ್ಳುವ ಬಗ್ಗೆ ಯಾವುದೇ ಪ್ರತಿಕ್ರಿಯೆ ಈವರೆಗೂ ನೀಡಿಲ್ಲ.
ಸ್ವಿಸ್
ಬ್ಯಾಂಕ್ನಲ್ಲಿ
ಭಾರತೀಯರ
ಅಕೌಂಟೇ
ಇಲ್ಲ.
ಕಪ್ಪು
ಹಣದ
ಬಗ್ಗೆ
ಮಾಹಿತಿ
ಕೇಳಿ,
ನಮ್ಮ
ಸರ್ಕಾರ
ಸ್ವಿಸ್
ಬ್ಯಾಂಕ್
ಅಧಿಕಾರಿಗಳಿಗೆ
ಪತ್ರ
ಬರೆದಿತ್ತು.
ಈ
ಬಗ್ಗೆ
ಜುಲೈ
4,
2014
ರಂದು
ಸ್ವಿಸ್
ಬ್ಯಾಂಕ್ನಿಂದ
ಉತ್ತರ
ಕೂಡ
ಬಂದಿದ್ದು,
ಸ್ವಿಸ್
ಬ್ಯಾಂಕ್ನಲ್ಲಿ
ಸ್ವಂತ
ಹೆಸರಿನಲ್ಲಿ
ಹಣ
ಹೂಡಿಕೆ
ಮಾಡಿರುವ
ಭಾರತದ
ನಿವಾಸಿಗಳು
ಯಾರೂ
ಇಲ್ಲ
ಎಂದು
ತಿಳಿದು
ಬಂದಿದೆ
ಎಂದು
ಪ್ರಶ್ನೋತ್ತರ
ವೇಳೆಯಲ್ಲಿ
ಅರುಣ್
ಜೇಟ್ಲಿ
ಹೇಳಿದ್ದಾರೆ.
ಸ್ವಿಸ್ ಬ್ಯಾಂಕ್ನಲ್ಲಿ ಭಾರತೀಯರ ಅಕೌಂಟೇ ಇಲ್ಲಎಂದು ಹೇಳಲಾಗುವುದಿಲ್ಲ.ಕಪ್ಪು ಹಣದ ಬಗ್ಗೆ ಮಾಹಿತಿ ಕೇಳಿ, ನಮ್ಮ ಸರ್ಕಾರ ಸ್ವಿಸ್ ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದಿತ್ತು. ಈ ಬಗ್ಗೆ ಜುಲೈ 4, 2014 ರಂದು ಸ್ವಿಸ್ ಬ್ಯಾಂಕ್ನಿಂದ ಉತ್ತರ ಕೂಡ ಬಂದಿದ್ದು, ಸ್ವಿಸ್ ಬ್ಯಾಂಕ್ನಲ್ಲಿ ಸ್ವಂತ ಹೆಸರಿನಲ್ಲಿ ಹಣ ಹೂಡಿಕೆ ಮಾಡಿರುವ ಭಾರತದ ನಿವಾಸಿಗಳು ಯಾರೂ ಇಲ್ಲ ಎಂದು ಹೇಳಿರುವುದಾಗಿ ಜೇಟ್ಲಿ ಹೇಳಿದ್ದಾರೆ.
ಆದರೆ, 2013 ರಲ್ಲಿ 14,100 ಕೋಟಿ ಭಾರತೀಯರ ಹಣ ಇರುವುದಾಗಿ ಸ್ವತಃ ಸ್ವಿಸ್ ಬ್ಯಾಂಕೇ ತನ್ನ ವೆಬ್ಸೈಟ್ನಲ್ಲಿ ಪ್ರಕಟಸಿತ್ತು. ಆದರೆ, ಸ್ವಿಸ್ ಬ್ಯಾಂಕ್ ಈಗ ಯಾವುದೇ ಮಾಹಿತಿ ಹೊರಹಾಕಿಲ್ಲ ಎಂದಿದೆ.
ಕಪ್ಪುಹಣದ ವಾಪಸಾತಿಗಾಗಿ ಕಠಿಣ ಕ್ರಮ ಕೈಗೊಂಡಿದ್ದ ಎನ್ಡಿಎ ಸರ್ಕಾರ, ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ರಚನೆ ಮಾಡಿತ್ತು. ಕಪ್ಪುಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ್ದ ಸೂಚನೆಯ ಮೇರೆಗೆ ಕೇಂದ್ರ ಸರ್ಕಾರ ಎಸ್ಐಟಿ ರಚನೆ ಮಾಡಲಾಗಿತ್ತು. ವಿಶೇಷ ತನಿಖಾ ತಂಡದ ಸತತ ಪ್ರಯತ್ನದಿಂದಾಗಿ ಸ್ವಿಸ್ ಸರ್ಕಾರ ಕಪ್ಪುಹಣ ಹೊಂದಿರುವ ಭಾರತೀಯರ ವಿವರ ನೀಡಲು ಮುಂದಾಗಿದೆ ಎಂಬ ಸುದ್ದಿ ಕಳೆದ ತಿಂಗಳು ಸಿಕ್ಕಿತ್ತು. [ಇಲ್ಲಿ ಓದಿರುತ್ತೀರಿ]
ಸ್ವಿಸ್ ಬ್ಯಾಂಕ್ ಗಳಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಪ್ಪುಹಣ ಇರಿಸಿರುವವರ ಪಟ್ಟಿಯಲ್ಲಿ ಭಾರತ 58ನೇ ಸ್ಥಾನದಲ್ಲಿದ್ದು, ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಹೊಂದಿರುವ ಕಪ್ಪುಹಣದ ಪ್ರಮಾಣ 14 ಸಾವಿರ ಕೋಟಿ ರು,(2.03 ಬಿಲಿಯನ್ ಸ್ವಿಸ್ ಫ್ರಾಂಕ್)ಗಳಿಗೂ ಅಧಿಕ ಎಂದು ಪ್ರಕಟಣೆಯಲ್ಲಿ ಹೇಳಲಾಗಿತ್ತು.
ಆದರೆ, ಈಗ ರಾಜ್ಯಸಭೆಯಲ್ಲಿ ಶಾಂತರಾಮ್ ನಾಯ್ಕ್ ಅವರ ಪ್ರಶ್ನೆಗೆ ಉತ್ತರಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಭಾರತ ಅನೇಕ ಬಾರಿ ಮನವಿ ಸಲ್ಲಿಸಿದೆ. ಕೆಲವು ವಿಷಯದಲ್ಲಿ ಸ್ವಿಸ್ ಸರ್ಕಾರ ಉತ್ತರ ನೀಡಿದ್ದರೂ ಬ್ಯಾಂಕ್ ಖಾತೆ ಹೊಂದಿರುವ ಭಾರತೀಯರ ವಿವರ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.