ಕಾಸರಗೋಡಿನಲ್ಲಿ ಮೋದಿ ಭಾಷಣದ ಕಲರವ
ಕಾಸರಗೋಡು, ಏ.8 : ದೇವರ ನಾಡು ಕೇರಳದಲ್ಲಿ ಇಂಥ ಜನ ಸಾಗರ ಕಂಡು ನನ್ನ ಹೃದಯ ತುಂಬಿ ಬಂದಿದೆ. ಕಾಸರಗೋಡಿನ ಸೋದರ, ಸೋದರಿಯರೇ ನಿಮಗೆ ನನ್ನ ನಮಸ್ಕಾರಗಳು ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳುತ್ತಿದ್ದಂತೆ ನೆರೆದಿದ್ದ ಜನಸ್ತೋಮದಿಂದ ಕರತಾಡನ, ಜಯಘೋಷಗಳು ಕೇಳಿ ಬಂದಿತು.
ಯುಪಿಎ ಸರ್ಕಾರ ಭ್ರಷ್ಟಾಚಾರದ ಸರ್ಕಾರದ ಜತೆ ಎಡಪಕ್ಷಗಳು ಕೈ ಜೋಡಿಸುವ ಮೂಲಕ ಕೇರಳದ ಅಭಿವೃದ್ಧಿ ಕುಂಠಿತವಾಗುವಂತೆ ಮಾಡಿವೆ. ಬಿಜೆಪಿ ಅಭಿವೃದ್ಧಿಗಾಗಿ ಶ್ರಮಿಸಲಿದೆ ಎಂದು ಮೋದಿ ಹೇಳಿದರು. ಕಾಸರಗೋಡಿನ ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಪರ ಮೋದಿ ಅವರು ಮತಯಾಚನೆ ಮಾಡುತ್ತಿದ್ದಾರೆ. ನಂತರ ಕರ್ನಾಟಕದ ಕೊಪ್ಪಳ, ಬಾಗಲಕೋಟೆ, ಮೈಸೂರು, ಬೆಂಗಳೂರಿಗೆ ಮೋದಿ ಆಗಮಿಸಲಿದ್ದಾರೆ.
ಮೋದಿ ಸೇಫ್ ಲ್ಯಾಂಡಿಂಗ್: ಮೋದಿ ಅವರ ಆಗಮನಕ್ಕಾಗಿ ಕಾಸರಗೋಡಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ನಿರ್ಮಾಣಗೊಂಡಿದ್ದ ತಾತ್ಕಾಲಿಕ ಹೆಲಿಪ್ಯಾಡ್ ಅನ್ನು ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ರಾತ್ರಿ ಧ್ವಂಸಗೊಳಿಸಿದ್ದರು. ಇದ್ದ ಅಲ್ಪ ಅವಧಿಯಲ್ಲೇ ಬಿಜೆಪಿ ಕಾರ್ಯಕರ್ತರು ಮಂಗಳವಾರ ಬೆಳಗ್ಗೆಯೊಳಗೆ ಹೊಸ ಹೆಲಿ ಪ್ಯಾಡ್ ನಿರ್ಮಿಸಿ ಮೋದಿ ಅವರು ಸೇಫ್ ಆಗಿ ಲ್ಯಾಂಡ್ ಆಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. (ಇನ್ನಷ್ಟು ಚಿತ್ರಗಳಿಗೆ ಗ್ಯಾಲರಿ ನೋಡಿ)
ಕರ್ನಾಟಕದ ಗಡಿಯಾಚೆಯಲ್ಲಿರುವ ಕಾಸರಗೋಡು ಭಾವನಾತ್ಮಕವಾಗಿ ಕನ್ನಡತವನ್ನು ಉಳಿಸಿ, ಬೆಳೆಸಿಕೊಂಡು ಬಂದಿದೆ. ಹೀಗಾಗಿ ಮೋದಿ ಅವರು ತಮ್ಮ ಭಾಷಣದಲ್ಲಿ ನೆರೆದಿದ್ದ ಜನಸ್ತೋಮಕ್ಕೆ ಮಲೆಯಾಳಂ ಹಾಗೂ ಕನ್ನಡದಲ್ಲಿ ಶುಭ ಹಾರೈಸಿದರು.
ಮತ್ತೊಂದು
ವಿಶೇಷವೆಂದರೆ,
ಮೋದಿ
ಅವರ
ಭಾಷಣವನ್ನು
ನೇರವಾಗಿ
ಮಲೆಯಾಳಂನಲ್ಲಿ
ಸ್ಥಳೀಯರೊಬ್ಬರು
ಅನುವಾದಿಸಿದ್ದು
ಜನರಿಗೆ
ಅನುಕೂಲಕರವಾಗಿತ್ತು.
ಈ
ರೀತಿ
ವ್ಯವಸ್ಥೆ
ಕರ್ನಾಟಕದಲ್ಲಿ
ಕಂಡು
ಬರದಿರುವುದು
ದುರಂತವೇ
ಸರಿ.
ಭಾರತ್
ವಿಜಯ್
ಸಮಾವೇಶದ
ವಿಡಿಯೋ
ಇಲ್ಲಿದೆ
ನೋಡಿ
ಭಾಷಣದಲ್ಲಿ ಕಂಡು ಬಂದ ಪ್ರಮುಖ ಅಂಶಗಳು
ಭಯೋತ್ಪಾದನೆ, ಎಂಡೋಸಲ್ಫಾನ್ ಪೀಡಿತರು, ಬುದ್ಧಿವಂತರ ವಲಸೆ, ನಿರುದ್ಯೋಗ, ಎಕೆ ಅಂಟನಿ, ಎಲ್ ಡಿಎಫ್-ಯುಡಿಎಫ್..ಮೀನುಗಾರಿಕೆ,ರೈತರು, ಪ್ರವಾಸೋದ್ಯಮ ಇದು ಮೋದಿ ಅವರ ಭಾಷಣದಲ್ಲಿ ಕಂಡು ಬಂದ ಪ್ರಮುಖ ಅಂಶಗಳು
* ಕೇರಳದ ಯುವಕರು
ಉದ್ಯೋಗ ಅರಸಿ ಬೇರೆ ರಾಜ್ಯ, ವಿದೇಶಕ್ಕೆ ವಲಸೆ ಹೋಗುತ್ತಿದಾರೆ. ಇಲ್ಲಿನ ಸರ್ಕಾರ ಉದ್ಯೋಗ ಒದಗಿಸಲು ವಿಫಲವಾಗಿದೆ.
ಭಾರತ್ ವಿಜಯ್ ಸಮಾವೇಶದಲ್ಲಿ ಮೋದಿ
* ಎಂಡೋಸಲ್ಫಾನ್ ಪೀಡಿತರಿಗೆ ಪರಿಹಾರ ನೀಡಿದರೆ ಸಾಲದು, ಬದುಕಿಗೆ ಆಸರೆಯಾಗಿ ನಿಲ್ಲಬೇಕು. ಇದನ್ನು ಪಕ್ಕದ ರಾಜ್ಯದವರು ಹೇಳಿಕೊಡಬೇಕೆ?
ಭಾರತ್ ವಿಜಯ್ ಸಮಾವೇಶದಲ್ಲಿ ಮೋದಿ
*ಯುಡಿಎಫ್+ಎಲ್ ಡಿಎಫ್ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಹಿಂಸಾಚಾರ ಅಧಿಕಗೊಂಡಿದೆ.
ಭಾರತ್ ವಿಜಯ್ ಸಮಾವೇಶದಲ್ಲಿ ಮೋದಿ
* ವಿಜ್ಞಾನ ಹಾಗೂ ತಂತ್ರಜ್ಞಾನ ರೈತರು, ಮೀನುಗಾರರಿಗೆ ಸಹಾಯಕವಾಗಲಿದೆ ಇದನ್ನು ಗುಜರಾತಿನಲ್ಲಿ ಸಾಧಿಸಿದ್ದೇವೆ. ಇಲ್ಲಿ ಏಕೆ ಸಾಧ್ಯವಿಲ್ಲ. ಸಂಪನ್ಮೂಲ ದುರ್ಬಳಕೆ ಅಧಿಕವಾಗಿದೆ ಏಕೆ?
ಭಾರತ್ ವಿಜಯ್ ಸಮಾವೇಶದಲ್ಲಿ ಮೋದಿ
* ಕೇರಳ ಹೆಲ್ತ್ ಟೂರಿಸಂ ಕೇಂದ್ರವಾಗಿತ್ತು. ಆದರೆ ಈಗ ಭಯೋತ್ಪಾದನೆಯ ನರ್ಸರಿ ಆಗಿರುವುದು ದುರಂತ.
ಭಾರತ್ ವಿಜಯ್ ಸಮಾವೇಶದಲ್ಲಿ ಮೋದಿ
* ಯುಡಿಎಫ್ ಕಲ್ಲಂಗಡಿ ಹಣ್ಣಿನ ಹಾಗೆ ಮೇಲ್ಗಡೆ ಹಸಿರು ಒಳಗಡೆ ಕೆಂಪು.
ಭಾರತ್ ವಿಜಯ್ ಸಮಾವೇಶದಲ್ಲಿ ಮೋದಿ
* ಐಎಎಸ್ ಅಧಿಕಾರಿ ಅಲ್ಫಾನ್ಸೋ ಕನ್ನಂಥಾರಾಮನ್ ಅವರು ನರೇಂದ್ರ ಮೋದಿ ಕೋರ್ ಟೀಂ ನಲ್ಲಿರುವುದನ್ನು ಸ್ಥಳೀಯರು ಸ್ವಾಗತಿಸಿದ್ದಾರೆ.
ಭಾರತ್ ವಿಜಯ್ ಸಮಾವೇಶದಲ್ಲಿ ಮೋದಿ
* ಇಲ್ಲಿನ ಮೀನುಗಾರರನ್ನು ಇಟಲಿಯಿಂದ ಬಂದವರು ಕೊಂದು ಹಾಕಿದರು ಇಲ್ಲಿನ ಸರ್ಕರ ಕಣ್ಮುಚ್ಚಿ ಕುಳಿತ್ತಿರುತ್ತದೆ.
ಭಾರತ್ ವಿಜಯ್ ಸಮಾವೇಶದಲ್ಲಿ ಮೋದಿ
ಮೋದಿ
ಅವರಿಗೆ
ಕಾಸರಗೋಡಿನಲ್ಲಿ
ಸನ್ಮಾನ
ಮೋದಿ
ಅವರಿಗೆ
ಕೇರಳದ
ಸಾಂಪ್ರದಾಯಿಕ
ಕಥಕ್ಕಳಿ
ಪುತ್ಥಳಿ
ನೀಡಲಾಯಿತು.
ಶಾಲು
ಹೊದೆಸಿ,
ಪೇಟ
ಇಟ್ಟು
ಸನ್ಮಾನಿಸಲಾಯಿತು.
ಮೋದಿ
ಅವರ
ಭಾವಚಿತ್ರವನ್ನು
ನೀಡಲಾಯಿತು.
ಭಾರತ್ ವಿಜಯ್ ಸಮಾವೇಶದಲ್ಲಿ ಮೋದಿ
ಭಾರತ್ ವಿಜಯ್ ಸಮಾವೇಶದಲ್ಲಿ ಮೋದಿ