ಮನೆ ಮನೆಗೆ ಬಂದ ವಿಘ್ನ ನಿವಾರಕ ಗಣೇಶನ ಚಿತ್ರಾವಳಿ
ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹಿ ತನ್ನೋ ದಂತಿ: ಪ್ರಚೋದಯಾತ್ ಎಂದು ವಿಘ್ನ ನಿವಾರಕ ಗಣೇಶನನ್ನು ಅಹ್ವಾನಿಸಿ ಪೂಜೆ ಸಲ್ಲಿಸುವ ಶುಭ ದಿನವೇ ಭಾದ್ರಪದ ಮಾಸದ ಚೌತಿ ದಿನ. ಜಯ ಗಣೇಶ..ಜಯ ಗಣೇಶ..ಜಯ ಗಣೇಶ ರಕ್ಷಿಸು ಎಂದು ಆಸ್ತಿಕರು ಭಕ್ತಿಯಿಂದ ಪೂಜಿಸಿ ಧನ್ಯತೆ ಅನುಭವಿಸುವ ದಿನ.
ಅಂದು ಸ್ವಾತಂತ್ರ್ಯ ಸಂಗ್ರಾಮದ ಸಮತದಲ್ಲಿ ಸಾರ್ವಜನಿಕ ಗಣೇಶೋತ್ಸವ ಹುಟ್ಟು ಹಾಕಿದ ಬಾಲಗಂಗಾಧರ ತಿಲಕ್ ಅವರ ಉದ್ದೇಶಕ್ಕೂ ಮತ್ತು ಇಂದಿನ ಸಾರ್ವಜನಿಕ ಗಣೇಶೋತ್ಸವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. [ಮುಂಬೈನ ಜಿಎಸ್ ಬಿ ಸಮಾಜದ 'ರಿಚ್' ಗಣೇಶ]
ಅದರೆ, ಮುಂಬೈನಲ್ಲಿ ಮಾತ್ರ ಐಷಾರಾಮಿ ಆಚರಣೆ ಹಾಗೂ ವಿಸರ್ಜನೆ ಗಣೇಶನಿಗೆ ತಪ್ಪದೇ ಸಲ್ಲುತ್ತದೆ. ಮುಂಬೈನಲ್ಲಿ ಕನಿಷ್ಠವೆಂದರೂ 10 ರಿಂದ 12 ದಿನಗಳ ಕಾಲ ಗಣೇಶ ಮಹೋತ್ಸವ ನಡೆಯುತ್ತದೆ. ಗಣೇಶ ಹಬ್ಬ ಆಚರಣೆ, ಗಣೇಶನ ಬೀಳ್ಕೊಡುಗೆ ಎಲ್ಲವೂ ಸಂಭ್ರಮವನ್ನು ಮುಗಿಲು ಮುಟ್ಟುವಂತೆ ಮಾಡುವ ಕ್ರಿಯೆಗಳಾಗಿವೆ. ಗಣೇಶ ಚತುರ್ಥಿ ದಿನದ ದೇಶದ ವಿವಿಧೆಡೆ ಜನರಲ್ಲಿರುವ ಭಕ್ತಿ ಭಾವ ಹಾಗೂ ವೈವಿಧ್ಯಮಯ ಗಣಪತಿ ಮೂರ್ತಿಯ ಚಿತ್ರವಾಳಿ ಇಲ್ಲಿದೆ ಕಣ್ತುಂಬಿಸಿಕೊಳ್ಳಿ...[ವರ್ಮಾ ಅಣುಕು ಟ್ವೀಟ್ ರಾದ್ಧಾಂತ]
ಮುಂಬೈನ ಜಿಎಸ್ ಬಿ ಸಮಾಜದ ಗಣಪ
ಮುಂಬೈನ ಜಿಎಸ್ ಬಿ ಸಮಾಜದ ಅತ್ಯಂತ ಶ್ರೀಮಂತ ಗಣೇಶ
ಅಹಮದಾಬಾದಿನಲ್ಲಿ ಗಣೇಶನ ಆಗಮನ
ಅಹಮದಾಬಾದಿನಲ್ಲಿ ಗಣೇಶನನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದು ಹೀಗೆ
ಕೋಲ್ಕತ್ತಾದಲ್ಲಿ ನಟಿ ಕೈಲಿ ಗಣಪ
ಕೋಲ್ಕತ್ತಾದಲ್ಲಿ ನಟಿ ರಿತುಪರ್ಣಾ ಸೇನ್ ಗುಪ್ತಾ ಕೈಲಿ ಗಣಪ ಮೂರ್ತಿ. ಗಣೇಶ ಉತ್ಸವ ಪ್ರದರ್ಶನದ ಆರಂಭವಾಗಿದ್ದು ಹೀಗೆ
ಪಟಿಯಾಲದಲ್ಲಿ ಯೋಧರ ಆಪ್ತ ಗಣಪ
ಪಟಿಯಾಲದಲ್ಲಿ ಯೋಧರ ಆಪ್ತ ಗಣಪನ ಸವಾರಿ
ಗುವಾಹಟಿಯಲ್ಲಿ ಗಣೇಶನ ಪೂಜೆ
ಗುವಾಹಟಿಯ ಲತಾಸಿಲ್ ಗಣೇಶ್ ಮಂದಿರದಲ್ಲಿ ಗಣೇಶನಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ ಮಹಿಳೆಯರು
ಮುಂಬೈನಲ್ಲಿ ಸಿಎಂ ದಂಪತಿಯಿಂದ ಪೂಜೆ
ಮುಂಬೈನಲ್ಲಿ ಸಿಎಂ ಪೃಥ್ವಿರಾಜ್ ಚೌಹಾಣ್ ಹಾಗೂ ಅವರ ಪತ್ನಿ ಸತ್ವಶೀಲ ಚೌಹಾಣ್ ರಿಂದ ವರ್ಷಾ ಬಂಗಲೆಯಲ್ಲಿ ಗಣೇಶನಿಗೆ ಪೂಜೆ
ಸೂರತ್ ನ ಮರಳು ಶಿಲ್ಪದಲ್ಲಿ ಮೋದಿ-ಗಣೇಶ
ಸೂರತ್ :ಗಣೇಶನ ಅನುಗ್ರಹ ಪಡೆದು ಮೋದಿ ಸತ್ಕಾರ್ಯವನ್ನು ಮಾಡಲು ಎಂದು ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ರಚಿಸಿದ ಕಲಾಕೃತಿ
ನವಿ ಮುಂಬೈನಲ್ಲಿ ನವನವೀನ ಗಣೇಶ
ನವಿ ಮುಂಬೈನಲ್ಲಿ ನವನವೀನ ಗಣೇಶ ಬ್ರೆಜಿಲ್ಲಿಯನ್ ಫುಟ್ಬಾಲರ್ ಉಡುಗೆಯಲ್ಲಿ
ಅಹಮದಾಬಾದಿನ ಮೆರವಣಿಗೆಯಲ್ಲಿ ಗಣೇಶ
ಅಹಮದಾಬಾದಿನ ಗಣೇಶನನ್ನು ಮೆರವಣಿಗೆಯಲ್ಲಿ ಕರೆತರಲಾಯಿತು.
ಮಂಗಳೂರಿನಲ್ಲಿ ಗಣೇಶ ಪೂಜೆ
ಕರ್ನಾಟಕದ ಮಂಗಳೂರಿನಲ್ಲಿ ಗಣೇಶ ಪೂಜೆ
ಸಾಂಗ್ಲಿಯಲ್ಲಿ ಮಕ್ಕಳ ಗಣಪ
ಮಹಾರಾಷ್ಟ್ರ ಸಾಂಗ್ಲಿಯಲ್ಲಿ ಮಕ್ಕಳು ಸಾಂಪ್ರದಾಯಿಕ ಮೆರವಣಿಗೆಯಲ್ಲಿ ಗಣೇಶನನ್ನು ಕರೆ ತಂದಿದ್ದು ಹೀಗೆ
ಮಹಾರಾಷ್ಟ್ರದಲ್ಲಿ ಗಣೇಶ ಮೆರವಣಿಗೆ
ಮಹಾರಾಷ್ಟ್ರದಲ್ಲಿ ಗಣೇಶನನ್ನು ಮೆರವಣಿಗೆ ಮೂಲಕ ಪೆಂಡಾಲ್ ಗೆ ಕರೆತರಲಾಯಿತು. ಚಿತ್ರಗಳು: ಪಿಟಿಐ