ರೇಪ್ ಮಾಡಿದ್ದಕ್ಕೆ ಯುವತಿ ಏನು ಮಾಡಿದಳು ಗೊತ್ತಾ?
ಮಾದೇಪುರ(ಬಿಹಾರ),ಆ.1: ಸಮಸ್ಯೆ ನಿವಾರಣೆಗಾಗಿ ಜ್ಯೋತಿಷಿ ಮನೆಗೆ ಹೋಗಿ ಅತ್ಯಾಚಾರಕ್ಕೆ ಒಳಗಾದ ಯುವತಿ ಸಿಟ್ಟಾಗಿ ಜ್ಯೋತಿಷಿಯ ಶಿಶ್ನವನ್ನೇ ಕತ್ತರಿಸಿ ಹಾಕಿದ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ಮಾದೇಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಅತ್ಯಾಚಾರ ಆರೋಪದ ಹಿನ್ನಲೆಯಲ್ಲಿ ಜ್ಯೋತಿಷಿ ಮಹೇಂದ್ರ(35) ಎಂಬಾತನನ್ನು ಮಾದೇಪುರ ಪೊಲೀಸರು ಬಂಧಿಸಿದ್ದಾರೆ.
ಘಟನೆ ಹಿನ್ನಲೆ: ಜುಲೈ 1 ರಂದು ಯುವತಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಯುವತಿಯ ತಾಯಿ ಈ ಅನಾರೋಗ್ಯಕ್ಕೆ ಯಾರೋ ಮಾಟ ಮಾಡಿದ್ದಾರೆ ಎಂದು ಭಾವಿಸಿ ಆಕೆಯನ್ನು ಜ್ಯೋತಿಷಿ ಬಳಿ ತೆರಳಲು ಹೇಳಿದ್ದಾರೆ. ಈ ಜ್ಯೋತಿಷಿ ಯುವತಿಯ ತಾಯಿಯ ಸಹೋದರಿಯ ಗಂಡನಾಗಿದ್ದು ಮಾಟ, ಪವಾಡಗಳನ್ನು ಮಾಡುತ್ತಿದ್ದ ಎನ್ನಲಾಗಿದೆ.
ಇದರಂತೆ ಯುವತಿ ಜ್ಯೋತಿಷಿಯ ಮನೆಗೆ ಜು.1ರಂದು ಬಂದಿದ್ದಾಳೆ. ಈ ಸಂದರ್ಭದಲ್ಲಿ ಜ್ಯೋತಿಷಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆಕೆ ವಿರೋಧಿಸಿದಾಗ ಆಕೆಯ ಮೇಲೆ ರೇಪ್ ಮಾಡಿದ್ದಾನೆ.
ರೇಪ್ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವತಿ ಮರುದಿನ ರಾತ್ರಿ ಜ್ಯೋತಿಷಿಯ ಮನೆಗೆ ಮೊಬೈಲ್ ಮತ್ತು ಹರಿತವಾದ ಚಾಕುವಿನೊಂದಿಗೆ ತೆರಳಿದ್ದು, ಜ್ಯೋತಿಷಿಯ ಶಿಶ್ನವನ್ನೇ ಚಾಕುವಿನಿಂದ ಕತ್ತರಿಸಿ ಹಾಕಿದ್ದಾಳೆ. ಈ ಸಂದರ್ಭದ ಮಾತುಕತೆಯನ್ನು ಮೊಬೈಲ್ಲ್ಲಿ ರೆಕಾರ್ಡ್ ಮಾಡಿದ್ದಾಳೆ.
ನಡೆದ ಘಟನೆಯನ್ನು ಆಕೆ ಪೋಷಕರಲ್ಲಿ ಹೇಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರು ಸ್ವೀಕರಿಸದ ಪೊಲೀಸರು ಸಂಧಾನ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೂರು ನೀಡಿದರೆ ಕೊಲೆ ಮಾಡುವುದಾಗಿ ಜ್ಯೋತಿಷಿ ಕಡೆಯವರು ಯುವತಿಗೆ ಬೆದರಿಕೆ ಹಾಕಿದ್ದಾರೆ. ಕೊನೆಗೆ ರಾಜಕೀಯ ನಾಯಕರು ಪ್ರವೇಶವಾಗಿ ಪೊಲೀಸ್ ಠಾಣೆಯಲ್ಲಿ ಜು.30ರಂದು ಪ್ರಕರಣ ದಾಖಲಾಗಿದೆ.
ಪೊಲೀಸರು ಹೆಚ್ಚಿನ ತನಿಖೆ ಮಾಡುತ್ತಿದ್ದು, ಯುವತಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಕೊಡಲಾಗಿದೆ.