4 ರಾಜ್ಯಗಳ 18 ಅಸೆಂಬ್ಲಿ ಕ್ಷೇತ್ರಗಳ ಫಲಿತಾಂಶ
ಬೆಂಗಳೂರು, ಆ.25 : ನಾಲ್ಕು ರಾಜ್ಯಗಳ ಒಟ್ಟು 18 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿದ್ದು, ಫಲಿತಾಂಶ ಸೋಮವಾರ ಹೊರಬೀಳಲಿದೆ. ಬಿಹಾರ, ಕರ್ನಾಟಕ, ಪಂಜಾಬ್ ಹಾಗೂ ಮಧ್ಯಪ್ರದೇಶದಲ್ಲಿ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದ್ದು, ಕಾಂಗ್ರೆಸ್ ಎಲ್ಲೆಡೆ ಆರಂಭಿಕ ಮುನ್ನಡೆ ಪಡೆದುಕೊಂಡಿದೆ.
ಕರ್ನಾಟಕದ
3
ಕ್ಷೇತ್ರ
:
ಚಿಕ್ಕೋಡಿ-ಸದಲಗಾ,
ಬಳ್ಳಾರಿ,
ಶಿಕಾರಿಪುರಗಳ
ಪೈಕಿ
ಬಳ್ಳಾರಿ
ಫಲಿತಾಂಶ
ಬಂದಿದೆ.
ಬಳ್ಳಾರಿಯಲ್ಲಿ
ಆಡಳಿತಾರೂಢ
ಕಾಂಗ್ರೆಸ್
ಭರ್ಜರಿ
ಗೆಲುವು
ಸಾಧಿಸಿದೆ.
ಬಿಜೆಪಿ
ಸಂಸದ
ಶ್ರೀರಾಮುಲು
ಬೆಂಬಲಿತ
ಓಬಳೇಶ್
ಗೆ
ಮುಖಭಂಗವಾಗಿದೆ.
ಕಾಂಗ್ರೆಸ್ಸಿನ
ಗೋಪಾಲಕೃಷ್ಣ
33,144
ಮತಗಳ
ಅಂತರದಿಂದ
ಜಯ
ಸಾಧಿಸಿದ್ದಾರೆ.
[ವಿವರ
ಇಲ್ಲಿ
ಓದಿ]
*
ಶಿಕಾರಿಪುರದಲ್ಲಿ
ಸಂಸದ
ಬಿಎಸ್
ಯಡಿಯೂರಪ್ಪ
ಅವರ
ಪುತ್ರ
ಬಿವೈ
ರಾಘವೇಂದ್ರ
ಅವರು
ಕಾಂಗ್ರೆಸ್ಸಿನ
ಶಾಂತವೀರಪ್ಪ
ಗೌಡ
ವಿರುದ್ಧ
ಜಯ
ಸಾಧಿಸಿದ್ದಾರೆ.[ಪೂರ್ಣ
ಮಾಹಿತಿ
ಇಲ್ಲಿ
ಓದಿ]
*
ಚಿಕ್ಕೋಡಿ
ಸದಲಗಾ
ಕ್ಷೇತ್ರದಲ್ಲಿ
ಸಂಸದ
ಪ್ರಕಾಶ್
ಹುಕ್ಕೇರಿ
ಮಗ
ಗಣೇಶ್
ಹುಕ್ಕೇರಿ
ಜಯಭೇರಿ
ಬಾರಿಸಿದ್ದರು.
[ವರದಿ
ಇಲ್ಲಿದೆ]
ಬಿಹಾರದಲ್ಲಿ 10 ಕ್ಷೇತ್ರ : ನರ್ಕಾತಿಯಾಗಂಜ್, ರಾಜ್ ನಗರ್, ಜಾಲೆ, ಛಾಪ್ರಾ, ಹಾಜಿಪುರ್, ಮೊಯಿದ್ದೀನ್ ನಗರ್, ಪರ್ಬಟ್ಟಾ, ಭಗಲ್ ಪುರ್, ಬಾಂಕ, ಮೊಹಾನಿಯಾ ಕ್ಷೇತ್ರದಲ್ಲಿ ಚುನಾವಣೆ ನಡೆದಿತ್ತು.ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿ ಬಿಹಾರದಲ್ಲಿ ಸಂಪೂರ್ಣ ನೆಲಕಚ್ಚಿದೆ. ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ಉಳಿದಂತೆ ಲಾಲೂ-ನಿತೀಶ್ ಬಣ ತಲಾ ನಾಲ್ಕು ಸೀಟು ಗೆದ್ದು ವಿಜಯೋತ್ಸವ ಆಚರಿಸಿದೆ.
* ಮೊಯಿದ್ದೀನ್ ನಗರ್ ನಲ್ಲಿ ಆರ್ ಜೆಡಿ ಜಯಭೇರಿ ಬಾರಿಸಿದೆ.
* ನರ್ಕಾತಿಯಾ ಗಂಜ್ ಕ್ಷೇತ್ರದಲ್ಲಿ ಬಿಜೆಪಿಯ ರಶ್ಮಿ ವರ್ಮ ಗೆಲುವು ಸಾಧಿಸಿದ್ದಾರೆ.
* ಬಿಹಾರದ ಜೆಡಿಯು ಅಭ್ಯರ್ಥಿ ರಾಮನಂದ್ ಪ್ರಸಾದ್ ಸಿಂಗ್ ಪರ್ಬಟ್ಟಾ ಅಸೆಂಬ್ಲಿ ಸ್ಥಾನ ಗೆದ್ದಿದ್ದಾರೆ.
* ಭಗಲ್ ಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ.
* ಮೊಹಾನಿಯಾ, ಬಂಕಾ, ಹಾಜಿಪುರ್ ಅಸೆಂಬ್ಲಿ ಕ್ಷೇತ್ರ ಬಿಜೆಪಿ ವಶವಾಗಿದೆ.
* ಛಾಪ್ರಾ ಕ್ಷೇತ್ರದಲ್ಲಿ ಆರ್ ಜೆಡಿ ಅಭ್ಯರ್ಥಿ ರಣಧೀರ್ ಸಿಂಗ್ ಗೆದ್ದಿದ್ದಾರೆ.
* ಜಾಲೆಯಲ್ಲಿ ಜೆಡಿಯು ಅಭ್ಯರ್ಥಿ ರಿಷಿ ಮಿಶ್ರಾ ಗೆಲುವು ಸಾಧಿಸಿದ್ದಾರೆ.
* ರಾಜ್ ನಗರದಲ್ಲಿ ಲಾಲೂ ಅವರ ಆರ್ ಜೆಡಿ ಅಭ್ಯರ್ಥಿಗೆ ಗೆಲುವು.
* ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿ ಬಿಹಾರದಲ್ಲಿ ಸಂಪೂರ್ಣ ನೆಲಕಚ್ಚಿದೆ. ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆಲುವು ಸಾಧಿಸಿದೆ. ಉಳಿದಂತೆ ಲಾಲೂ-ನಿತೀಶ್ ಬಣ ತಲಾ ನಾಲ್ಕು ಸೀಟು ಗೆದ್ದು ವಿಜಯೋತ್ಸವ ಆಚರಿಸಿದೆ.
* 10 ಕ್ಷೇತ್ರಗಳ ಪೈಕಿ ಲಾಲೂ ನಿತೀಶ್ ಬಣ 7 ರಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಬಿಜೆಪಿ ಆರಂಭಿಕ ಮುನ್ನಡೆ ಪಡೆದರೂ 3 ಕ್ಷೇತ್ರದಲ್ಲಿ ಮಾತ್ರ ಮುಂದಿತ್ತು.
* ಛಾತ್ರಾ, ಬಾಂಕದಲ್ಲಿ ಆರ್ ಜೆಡಿ, ಜಾಲೆ, ಹಾಜಿಪುರ, ಪರ್ಬಟ್ಟಾದಲ್ಲಿ ಜೆಡಿಯು ಮುನ್ನಡೆ ಪಡೆದಿದ್ದರೆ, ಭಗಲ್ ಪುರದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದಿದೆ.
ಪಂಜಾಬ್
2
ಕ್ಷೇತ್ರ:
ತಲ್
ವಾಂಡಿ
ಸಾಬೋ
ಹಾಗೂ
ಪಟಿಯಾಲ.
ಈ
ಪೈಕಿ
ಪಟಿಯಾಲಾ
ಕಾಂಗ್ರೆಸ್
ವಶವಾಗಿದೆ.
ಪ್ರಣೀತ್
ಕೌರ್
ಅವರು
23,836
ಮತಗಳ
ಅಂತರದಿಂದ
ಗೆಲುವು
ಸಾಧಿಸಿದ್ದಾರೆ.
[ಲೈವ್
ಫಲಿತಾಂಶ
ವಿವರಗಳು
:
ಕರ್ನಾಟಕ
|
ಇತರೆ
ರಾಜ್ಯಗಳು]
*
ಮತ್ತೊಂದು
ಕ್ಷೇತ್ರ
ಶಿರೋಮಣಿ
ಅಕಾಲಿ
ದಳದ
ಅಭ್ಯರ್ಥಿ
ಜೀತ್
ಮೊಹೀಂದರ್
ಅವರು
ತಲ್
ವಾಂಡಿ
ಸಾಬೋ
ಕ್ಷೇತ್ರವನ್ನು
ವಶಪಡಿಸಿಕೊಂಡಿದ್ದಾರೆ.
ಜೀತ್
ಅವರು
46,642
ಮತಗಳನ್ನು
ಪಡೆದುಕೊಂಡು
ಗೆಲುವು
ಸಾಧಿಸಿದ್ದಾರೆ.
ಮಧ್ಯಪ್ರದೇಶ
ಫಲಿತಾಂಶ:
*ಅಗರ್(ಮಾಳ್ವ)
ಕ್ಷೇತ್ರದಲ್ಲಿ
ಮತ್ತೆ
ಬಿಜೆಪಿ
ಗೆಲುವು
ಸಾಧಿಸಿದೆ.
ಕಾಂಗ್ರೆಸ್ಸಿನ
ರಾಜಕುಮಾರ್
ಗೋರೆ
ಅವರನ್ನು
ಗೋಪಾಲ್
ಪಾರ್ಮಾರ್
ಅವರು
27,102
ಅಂತರದಿಂದ
ಜಯ
ಸಾಧಿಸಿದ್ದಾರೆ.
ಇದೇ
ಕ್ಷೇತ್ರದ
ಶಾಸಕರಾಗಿದ್ದ
ಮನೋಹರ್
ಅವರು
ದೇವಾಸ್
ಲೋಕಸಭಾ
ಕ್ಷೇತ್ರದಿಂದ
ಸಂಸತ್ತಿಗೆ
ಆಯ್ಕೆಯಾಗಿದ್ದಾರೆ.
*
ಕತ್ನಿ
ಜಿಲ್ಲೆಯ
ಬಹೋರಿಬಾಂದ್
ಕ್ಷೇತ್ರದಲ್ಲಿ
ಕಾಂಗ್ರೆಸ್
1750
ಮತಗಳ
ಮುನ್ನಡೆ
ಪಡೆದಿದೆ.
*
ವಿಜಾರಘಾವ್
ಘರ್
ಕ್ಷೇತ್ರದಲ್ಲಿ
ಬಿಜೆಪಿಯ
ಸಂಜಯ್
ಪಾಠಕ್
ಅವರು
28,684
ಮತಗಳ
ಅಂತರರಿಂದ
ಕಾಂಗ್ರೆಸ್ಸಿನ
ಬ್ರಜೇಂದ್ರ
ಮಿಶ್ರಾ
ವಿರುದ್ಧ
ಮುನ್ನಡೆ
ಕಾಯ್ದುಕೊಂಡಿದ್ದಾರೆ.