ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುಟುಕು: ವಾರಣಾಸಿ: ಮೋದಿ ವಿರುದ್ಧ ಅಜಯ್ ಕಣಕ್ಕೆ

By Mahesh
|
Google Oneindia Kannada News

ಬೆಂಗಳೂರು, ಏ.8: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

6.00: ಅಹಮದಾಬಾದಿನ ಪೂರ್ವ ಕ್ಷೇತ್ರದ ಅಭ್ಯರ್ಥಿ ಪರೇಶ್ ರಾವಲ್ ಆಸ್ತಿ ಘೋಷಿಸಿದ್ದು 79.40 ಕೋಟಿ ರು ಗಳಿಸಿದ್ದಾರೆ.
5.40: ಎಟಿಎಂಗೆ ಹಣ ಹಾಕುವ ವಾಹನಗಳ ಮೇಲೆ ಚುನಾವಣಾ ಆಯೋಗ ಕಣ್ಣಿಟ್ಟಿದ್ದು ಅಕ್ರಮ ಹಣ ಸಾಗಾಟ ಕಂಡು ಬಂದರೆ ವರದಿ ಮಾಡುವಂತೆ ನಾಗರಿಕರಲ್ಲಿ ಕೋರಲಾಗಿದೆ.
5.15: ವಾರಣಸಿಯಲ್ಲಿ ಸ್ಥಳೀಯ ಶಾಸಕ ಅಜಯ್ ರೈ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಕಣಕ್ಕಿಳಿಸಿದೆ.

5.00: ಅರವಿಂದ್ ಕೇಜ್ರಿವಾಲ್ ಗೆ ಕಪಾಳಮೋಕ್ಷ ಎಎಪಿ ಆಡಿರುವ ಒಳ್ಳೆ ಪಬ್ಲಿಸಿಟಿ ಗಿಮಿಕ್: ಪ್ರಕಾಶ್ ಜಾವಾಡೇಕರ್, ಬಿಜೆಪಿ ವಕ್ತಾರ.
4.30: ವಡೋದರಾದಲ್ಲಿ ನರೇಂದ್ರ ಮೋದಿ ವಿರುದ್ಧ ಸುನಿಲ್ ದಿಗಂಬರ್ ಕುಲಕರ್ಣಿ ಅವರು ಎಎಪಿ ಸ್ಪರ್ಧಿಯಾಗಿದ್ದಾರೆ. ಕಾಂಗ್ರೆಸ್ ನಿಂದ ಮದುಸೂಧನ್ ಮಿಸ್ತ್ರಿ ಕಣದಲ್ಲಿದ್ದಾರೆ.

Elections 2014 : News in Brief on April 08

3.45: ಹರ್ಯಾಣ: ಕಾಂಗ್ರೆಸ್ ಅಭ್ಯರ್ಥಿ ನವೀನ್ ಜಿಂದಾಲ್ ಪರ ನಟಿ ರವೀನಾ ಟಂಡನ್ ಪ್ರಚಾರ
3.10: ಮೋದಿ ಅವರನ್ನು ಆರೆಸ್ಸೆಸ್ ಗೂಂಡಾ ಎಂದಿದ್ದ ಬೇನಿ ಪ್ರಸಾದ್ ಮೇಲೆ ಎಫ್ ಐಆರ್ ದಾಖಲಾಗಿದೆ.
2.40: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಕೇಸು ದಾಖಲು.

13.20: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಮತ್ತೊಮ್ಮೆ ಕಪಾಳಮೋಕ್ಷ. ಆಟೋರಿಕ್ಷಾ ಚಾಲಕನೊಬ್ಬ ದಕ್ಷಿಣ ದೆಹಲಿಯಲ್ಲಿ ಚುನಾವಣಾ ಪ್ರಚಾರ ನಿರತ ಕೇಜ್ರಿವಾಲ್ ಅವರ ಕೆನ್ನೆಗೆ ಬಾರಿಸಿದ್ದಾನೆ.

13.15: ತೆಲಂಗಾಣ ರಚನೆಗೆ ಕಾರಣವಾದ ಟಿಆರ್ ಎಸ್ ಅಧ್ಯಕ್ಷ ಕೆ ಚಂದ್ರಶೇಖರ್ ರಾವ್ ಅವರು ಮೇಡಕ್ ನಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಜತೆ ಮೈತ್ರಿ ಬಗ್ಗೆ ಟಿಆರ್ ಎಸ್ ಇನ್ನೂ ನಿರ್ಣಯ ಕೈಗೊಂಡಿಲ್ಲ.

12.30: ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಕಂಡು ಬರುವುದಿಲ್ಲ. ಯುಪಿಎ ಬೆಂಬಲಿತ ಕೇರಳದಂಥ ರಾಜ್ಯದಲ್ಲಿ ಮಾತ್ರ ಕಂಡು ಬರುತ್ತದೆ: ಮೋದಿ.. [ಮೋದಿ ಕೇರಳ ಭಾಷಣ ಇಲ್ಲಿ ಓದಿ]

Elections 2014 : News in Brief on April 08

12.00: ಮಿಜೋರಾಂನಲ್ಲಿ ಚುನಾವಣೆಯಲ್ಲಿ ಏ.9 ರಿಂದ ಏ.11ಕ್ಕೆ ಮುಂದೂಡಲಾಗಿದೆ. ರಾಜ್ಯದಲ್ಲಿ ಮೂರು ದಿನಗಳ ಬಂದ್ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ಪ್ರಕಟಣೆ ಹೊರಡಿಸಿದೆ.

11.40: ಕಾಂಗ್ರೆಸ್ಸಿನಿಂದ ಬಿಜೆಪಿ ಬಂದ ಜಗದಾಂಬಿಕ ಪಾಲ್ ಅವರು ಉತ್ತರಪ್ರದೇಶದಲ್ಲಿ ಎಲ್ಲೆಡೆ ಮೋದಿ ಅಲೆ ಎದ್ದಿದೆ. ಕಾಂಗ್ರೆಸ್, ಎಸ್ ಪಿ ಹಾಗೂ ಬಿಎಸ್ಪಿ ನೆಲಕಚ್ಚಲಿದೆ ಎಂದಿದ್ದಾರೆ.

10.20: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಯನ್ನು ಮಂಗಳವಾರ ಘೋಷಿಸುವ ಸಾಧ್ಯತೆಯಿದೆ.

10.10: ಪಶ್ಚಿಮ ಬಂಗಾಳ ಸರ್ಕಾರ ಚುನಾವಣ ನಿಯಮಗಳನ್ನು ಪಾಲಿಸದಿದ್ದರೆ ಲೋಕಸಭೆ ಚುನಾವಣೆಯನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಸಿಎಂ ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗ ಎಚ್ಚರಿಕೆ.

10.00: ಮಾಧ್ಯಮಗಳ ವರದಿಯನ್ನು ಅಲ್ಲಗೆಳೆದ ನವೀನ್ ಪಟ್ನಾಯಕ್, ಬಿಜೆಪಿ ಜತೆಗೆ ಬಿಜೆಡಿ ಎಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
9.50: ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ವಿರುದ್ಧದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಜಸ್ಟೀಸ್ ಫಕ್ರುದ್ದೀನ್ ಬದಲಿಸಲಾಗಿದ್ದು, ಅರ್ಚನಾ ಶ್ರೀವಾಸ್ತವ್ ಕಣಕ್ಕಿಳಿಯುತ್ತಿದ್ದಾರೆ.

English summary
Elections 2014: Get all politic parties campaign information, candidates nomination, election commission releases.Lok Sabha election 2014 news in brief on April 08.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X