ಇಂದು ಬಜೆಟ್, ಆರ್ಥಿಕ ಸ್ಥಿತಿ ಪುನಶ್ವೇತನಕ್ಕೆ ಆದ್ಯತೆ
ಬೆಂಗಳೂರು, ಜು. 10 : ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಚೊಚ್ಚಲ ಬಜೆಟ್ ಇಂದು ಮಂಡನೆಯಾಗಲಿದ್ದು, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ. ಕೈಗಾರಿಕೆ ಮತ್ತು ಆರ್ಥಿಕ ಪುನಶ್ವೇತನಕ್ಕೆ ಬಜೆಟ್ ನಲ್ಲಿ ಆದ್ಯತೆ ನೀಡುವ ಸಾಧ್ಯತೆ ಇದೆ.
ತಮ್ಮ
ಚುನಾವಣಾ
ಪ್ರಚಾರದ
ತುಂಬಾ
ಬಿಜೆಪಿ
ಉದ್ಯೋಗ
ಸೃಷ್ಟಿ,
ಬೆಲೆ
ನಿಯಂತ್ರಣದ
ಬಗ್ಗೆ
ಜನರಿಗೆ
ಭರವಸೆ
ನೀಡಿ
ಅಧಿಕಾರಕ್ಕೆ
ಬಂದಿದೆ.
ಆದ್ದರಿಂದ
ದೇಶದಲ್ಲಿ
ಉದ್ಯೋಗ
ಸೃಷ್ಟಿ
ಮಾಡಲು
ಇಂದಿನ
ಬಜೆಟ್
ನಲ್ಲಿ
ಹಲವು
ತೀರ್ಮಾನಗಳನ್ನು
ಕೈಗೊಳ್ಳುವ
ನಿರೀಕ್ಷೆಯನ್ನು
ಜನರು
ಇಟ್ಟುಕೊಂಡಿದ್ದಾರೆ.
ತೆರಿಗೆ ನೀತಿಯಲ್ಲಿ ಹಲವಾರು ಬದಲಾವಣೆಗಳನ್ನು ತಂದು ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ನಿಯಮಗಳನ್ನು ಬಜೆಟ್ ನಲ್ಲಿ ಅರುಣ್ ಜೇಟ್ಲಿ ಘೋಷಿಸಬಹುದೆಂದು ನಿರೀಕ್ಷಿಸಲಾಗಿದೆ. ಬೆಲೆ ಏರಿಕೆ, ಹಣ ದುಬ್ಬರ ತಡೆಗೆ ಜೇಟ್ಲಿ ಅಗತ್ಯಕ್ರಮಗಳನ್ನು ಘೋಷಿಸಬಹುದು. [ಕೇಂದ್ರ ಬಜೆಟ್ : ಕುತೂಹಲಕಾರಿ ವಿಷಯಗಳು]
ತೆರಿಗೆದಾರರ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಚಿಂತಿಸಿರುವ ಕೇಂದ್ರ ಸರ್ಕಾರ, ವಾರ್ಷಿಕ ಉಳಿತಾಯ ಮೊತ್ತದ ಮೇಲೆ ನೀಡುವ ತೆರಿಗೆ ವಿನಾಯ್ತಿ ಮಿತಿಯನ್ನು 2 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ. ಜೀವ ವಿಮೆ, ಕಾರ್ಮಿಕರ ಭವಿಷ್ಯ ನಿಧಿ , ರಾಷ್ಟ್ರೀಯ ಉಳಿತಾಯ ಪತ್ರಗಳು, ಗೃಹ ಸಾಲದ ಮರು ಪಾವತಿ ಮುಂತಾದವುಗಳಿಗೆ ತೆರಿಗೆ ವಿನಾಯ್ತಿ ಘೋಷಿಸಬಹುದು ಎಂದು ನಿರೀಕ್ಷಿಸಲಾಗುತ್ತಿದೆ. [ಅರುಣ್ ಜೇಟ್ಲಿ ಕೇಂದ್ರ ಬಜೆಟ್ ನಿರೀಕ್ಷೆಗಳೇನು?]
ಕಳೆದ ಎರಡು ವರ್ಷಗಳಲ್ಲಿ ಗಣನೀಯವಾಗಿ ಕುಸಿತ ಕಂಡಿರುವ ಗಣಿಗಾರಿಕೆ, ಕೈಗಾರಿಕೆ ವಲಯ, ಉತ್ಪಾದನಾ ವಲಯಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ. ಈಗಿರುವ ಆದಾಯ ತೆರಿಗೆ ಕಾಯ್ದೆಗಳ ಬದಲಾಗಿ ನೇರ ತೆರಿಗೆ ನೀತಿ (ಡಿಟಿಸಿ), ಏಕರೂಪ ದರದೊಂದಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಗೆ ಒತ್ತು ನೀಡಬಹುದು.
ದೇಶದಲ್ಲಿ ಮುಂಗಾರು ಮಳೆಯ ಕೊರತೆ ಉಂಟಾಗಿದೆ. ಆದ್ದರಿಂದ, ಆಹಾರ ಧಾನ್ಯಗಳ ಉತ್ಪಾದನೆ ಕುಸಿತವಾಗಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಇವುಗಳನ್ನು ಪರಿಹಾರ ಮಾಡಲು ಬಜೆಟ್ ನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ.