ಗಂಗಾ ನದಿಗೆ ಬಸ್, ರೈಲು ಡಿಕ್ಕಿ: ಒಟ್ಟು 18 ಸಾವು
ರೈಲು- ಜೀಪು ಡಿಕ್ಕಿ: ಮಹಾರಾಜಗಂಜ್ ಜಿಲ್ಲೆಯ ಕೊಠಿಪುರ ಪ್ರದೇಶದಲ್ಲಿ ಜೀಪಿಗೆ ರೈಲೊಂದು ಡಿಕ್ಕಿ ಹೊಡೆದು 13 ಜನ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಇತರೆ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಮಧ್ಯರಾತ್ರಿ ಸಂಭವಿಸಿದೆ.
ಮದುವೆ ಮುಗಿಸಿಕೊಂಡು 16 ಮಂದಿ ರಾತ್ರಿ 1 ಗಂಟೆಯಲ್ಲಿ ಜೀಪ್ ನಲ್ಲಿ ಬರುತ್ತಿದ್ದ ಸಂದರ್ಭ ಕೋಠಿಪುರದ ಬಳಿಯ ಮಾನವ ರಹಿತ ಲೆವೆಲ್ ಕ್ರಾಸಿಂಗ್ ಬಳಿ ವೇಗವಾಗಿ ಬಂದ ರೈಲು ಜೀಪಿನ ಮೇಲೆ ನುಗ್ಗಿದೆ. ಈ ಭೀಕರ ಅಪಘಾತದಲ್ಲಿ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತರ ದೇಹಗಳು ಗುರುತಿಸಲೂ ಆಗದಂತೆ ಛಿದ್ರವಾಗಿದ್ದವು. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಹಾರಾಜಗಂಜ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಗಂಗಾ
ನದಿಗೆ
ಬಸ್:
ತೆಹ್ರಿ
ಜಿಲ್ಲೆಯ
ಸಕ್ನಿಧರ್
ಬಳಿ
ಬುಧವಾರ
ಗಂಗಾನದಿಗೆ
ಬಸ್
ಬಿದ್ದು
ಕೆಲವರು
ಮೃತಪಟ್ಟು,
ಹಲವರು
ಗಾಯ
ಗೊಂಡಿದ್ದಾರೆ.
ಇಂದು
ಬೆಳಗ್ಗೆ
6
ಗಂಟೆಯಲ್ಲಿ
ವೇಳೆ
ದೇವಪ್ರಯಾಗ್
ಮತ್ತು
ವ್ಯಾಸಿ
ಮಧ್ಯೆ
ಬಸ್
ಬಂದಾಗ
ಸುಮಾರು
300
ಮೀಟರ್
ಎತ್ತರದಿಂದ
ಬಸ್
ನದಿಗೆ
ಬಿದ್ದಿದೆ.
ಬಸ್ಸು
ದೆಹಲಿಯಿಂದ
ಗುಪ್ತಕಾಶೀಯತ್ತ
ಹೊರಟಿತ್ತು.
ಬಸ್ಸಿನಲ್ಲಿ
50ಕ್ಕೂ
ಹೆಚ್ಚು
ಮಂದಿ
ಪ್ರಯಾಣಿಕರಿದ್ದರು.
ಇದುವರೆಗೆ
5
ಶವಗಳನ್ನು
ಹೊರೆತೆಗೆಯಲಾಗಿದ್ದು
ರಭಸದಿಂದ
ನೀರು
ಹರಿಯುತ್ತಿರುವುದರಿಂದ
ಬಸ್
ಕೊಚ್ಚಿ
ಹೋಗಿದೆ.
ಶೋಧಕಾರ್ಯ
ಮುಂದುವರೆದಿದೆ.