ಸರ್ಕಾರಿ ಸೇವೆಗೆ ಆಧಾರ ಕಡ್ಡಾಯ ಏಕೆ?: ಕೋರ್ಟ್
ನವದೆಹಲಿ, ಮಾ.24: ಸರ್ಕಾರದ ಕೆಲವು ಸೇವೆಗಳಿಗೆ ಆಧಾರ್ ಗುರುತಿನ ಚೀಟಿ ಕಡ್ಡಾಯವಾಗಿ ಪಡೆಯಬೇಕೆಂಬ ಆದೇಶವನ್ನು ತಕ್ಷಣವೇ ಹಿಂತೆಗೆದುಕೊಳ್ಳುವಂತೆ ಸುಪ್ರೀಂಕೋರ್ಟ್ ನ್ಯಾಯಪೀಠ ಸೋಮವಾರ ಮಹತ್ವದ ಆದೇಶ ನೀಡಿದೆ.
ಯಾವುದೇ ಮಾಹಿತಿ ಇಲ್ಲವೇ ಸರ್ಕಾರದ ಸೇವೆಗೆ ಆಧಾರ್ ಕಾರ್ಡ್ ನ್ನು ಕಡ್ಡಾಯಗೊಳಿಸಬಾರದು. ಸದ್ಯಕ್ಕೆ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ನ್ಯಾಯಮೂರ್ತಿ ಬಿ.ಎಸ್.ಚವ್ಹಾಣ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸೂಚನೆ ನೀಡಿದೆ. ಆಧಾರ್ ಗುರುತಿನ ಚೀಟಿಗೆ ಸಂವಿಧಾನದ ಮಾನ್ಯತೆ ನೀಡಬೇಕೆಂಬ ಕೇಂದ್ರ ಸರ್ಕಾರದ ಮನವಿಯನ್ನು ತಳ್ಳಿ ಹಾಕಿದ ನ್ಯಾಯಾಧೀಶರು ಯಾವುದೇ ಸೇವೆಗೆ ಇದು ಕಡ್ಡಾಯವಲ್ಲ ಎಂದು ಪುನರ್ ಉಚ್ಚರಿಸಿದರು.
ರಾಷ್ಟ್ರೀಯ
ಭದ್ರತಾ
ದೃಷ್ಟಿಯಿಂದ
ಇಂತಹ
ಬೃಹತ್
ಯೋಜನೆಯಲ್ಲಿ
ಯಾವುದೇ
ರೀತಿಯ
ಲೋಪದೋಷ
ಉಂಟಾಗಬಾರದು.
ಈ
ಹಿನ್ನೆಲೆಯಲ್ಲಿ
ಆಧಾರ್
ಗುರುತಿನ
ಚೀಟಿಗೆ
ಸಂವಿಧಾನದ
ಮಾನ್ಯತೆ
ನೀಡುವಂತೆ
ಸರ್ಕಾರ
ಕೋರಿಕೊಂಡಿತ್ತು.
ಈಗಾಗಲೇ
ಕೆಲವು
ಖಾಸಗಿ
ಮತ್ತು
ಸರ್ಕಾರಿ
ಸಂಸ್ಥೆಗಳಲ್ಲಿ
ಬಯೋಮೆಟ್ರಿಕ್
ವ್ಯವಸ್ಥೆ
ಜಾರಿಯಲ್ಲಿರುವುದರಿಂದ
ಆಧಾರ್
ಕಡ್ಡಾಯವಾಗಲಾರದು.
ಸರ್ಕಾರ
ಹೆ
ರಡಿಸಿರುವ
ಆದೇಶವನ್ನು
ಹಿಂತೆಗೆದುಕೊಳ್ಳುವುದು
ಉತ್ತಮ
ಎಂದು
ಅಭಿಪ್ರಾಯಪಟ್ಟರು.
ಇದಕ್ಕೂ
ಮುನ್ನ
2013ರಲ್ಲಿ
ಅಪೆಕ್ಸ್
ಕೋರ್ಟ್
ಆಧಾರ್
ಗುರುತಿನ
ಚೀಟಿ
ಕಡ್ಡಾಯಗೊಳಿಸಬಾರದೆಂದು
ಕೇಂದ್ರ
ಸರ್ಕಾರಕ್ಕೆ
ಸೂಚನೆ
ನೀಡಿತ್ತು.
[ಮೋದಿ
ಮಾತನ್ನು
ಕನ್ನಡದಲ್ಲಿ
ಕೇಳಿರಿ]
ಸರ್ಕಾರದ ಯೋಜನೆಗಳಿಗೆ ಇದನ್ನು ಕಡ್ಡಾಯ ಮಾಡುವುದರಿಂದ ನಿಜವಾದ ಫಲಾನುಭವಿಗಳು ಯೋಜನೆ ಪಡೆಯದೆ ವಂಚಿತರಾಗುತ್ತಾರೆ ಎಂದು ನ್ಯಾಯಾಧೀಶರು ಹೇಳಿದ್ದರು. ಸಾರ್ವಜನಿಕ ಖಾಸಗಿ ಕ್ಷೇತ್ರ, ಐಓಸಿಎಲ್, ಪಿಪಿಸಿಎಲ್, ಎಚ್ ಪಿಸಿಎಲ್ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರ ಆಧಾರ ಗುರುತಿನ ಚೀಟಿ ಯೋಜನೆಯನ್ನು ಪ್ರಾರಂಭಿಸಿತ್ತು. ನ್ಯಾಯಾಲಯದ ಈ ತೀರ್ಪೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ಭಾರಿ ಹಿನ್ನಡೆಯಾಗಿದೆ.
ಯುಐಡಿಎಐ ಆಧಾರ್ ಸಂಖ್ಯೆಯ ನೋಂದಣಿಯನ್ನು ಕಡ್ಡಾಯ ಮಾಡಿಲ್ಲ. ಫಲಾನುಭವಿಗಳನ್ನು ಹೇಗೆ ಗುರುತಿಸಬೇಕೆಂಬುದು ಕೇಂದ್ರೀಯ ಇಲಾಖೆಗಳು, ಸಚಿವರು ಹಾಗೂ ರಾಜ್ಯ ಸರಕಾರಗಳ ನಿರ್ಧಾರಕ್ಕೆ ಸೇರಿದ ವಿಷಯವಾಗಿದೆ. ಆಧಾರ್, ವ್ಯಕ್ತಿಯ ಗುರುತನ್ನು ಸಾಬೀತುಪಡಿಸುತ್ತದೆಯೇ ಹೊರತು ಆತನ ರಾಷ್ಟ್ರೀಯತೆಯನ್ನಲ್ಲ. ಅದು ವಾಸ್ತವ್ಯ ದಾಖಲೆ ಯಾಗಿಯೂ ಕೆಲಸ ಮಾಡುತ್ತದೆ. ಅಲ್ಲದೆ ಅದು ಐಚ್ಛಿಕ ಸೌಲಭ್ಯ ವಾಗಿದ್ದು ಕಡ್ಡಾಯವಲ್ಲ ಎಂದು ಕೇಂದ್ರ ಯೋಜನಾ ಸಚಿವ ರಾಜೀವ್ ಶುಕ್ಲಾ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಮದುವೆ ನೋಂದಣಿಗೂ ಆಧಾರ್ ಕಡ್ಡಾಯ ಎಂಬ ವಿಷಯ ಕೇಳಿದ ಮೇಲೆ ಆಧಾರ್ ಮಾನ್ಯತೆ ಬಗ್ಗೆ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಕೆಎಸ್ ಪುಟ್ಟಸ್ವಾಮಿ ಅವರು ಸುಪ್ರೀಂಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಹಾಕಿದ್ದರು.