ಗಡಿಯಲ್ಲಿ ನಿಲ್ಲದ ಪಾಕ್ ತಂಟೆ, ಗುಂಡಿನ ದಾಳಿ
ಶ್ರೀನಗರ, ಅ.8 : ಪಾಕಿಸ್ತಾನ ಪುನಃ ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ನಾಗರೀಕರ ಮೇಲೆ ಗುಂಡಿನ ದಾಳಿ ಮಾಡಿದೆ. ಬುಧವಾರ ಗಡಿಯಲ್ಲಿ ನಡೆದ ಗುಂಡಿನ ದಾಳಿಯಿಂದಾಗಿ ಒಬ್ಬಳು ಮಹಿಳೆ ಮೃತಪಟ್ಟಿದ್ದು, 20 ಜನರು ಗಾಯಗೊಂಡಿದ್ದಾರೆ.
ಜಮ್ಮು
ಕಾಶ್ಮೀರದ
192
ಕಿ.ಮೀ
ಉದ್ದದ
ಅಂತರರಾಷ್ಟ್ರೀಯ
ಗಡಿ
ನಿಯಂತ್ರಣ
ರೇಖೆ
ಉದ್ದಕ್ಕೂ
ಪಾಕಿಸ್ತಾನ
ಪಡೆ
ಅಪ್ರಚೋದಿತ
ಗುಂಡಿನ
ದಾಳಿ
ನಡೆಸುತ್ತಿದೆ.
ಬುಧವಾರ
ಭಾರತೀಯ
ಸೇನೆಯ
ಕ್ಯಾಂಪ್
ಮತ್ತು
ಹಳ್ಳಿಗಳನ್ನು
ಗುರಿಯಾಗಿಸಿಕೊಂಡು
ದಾಳಿ
ನಡೆಸಲಾಗಿದೆ.
ಪಾಕ್
ಕದನ
ವಿರಾಮ
ಉಲ್ಲಂಘನೆಯಿಂದಾಗಿ
ಗಡಿಯಲ್ಲಿ
ಭಯದ
ವಾತಾವರಣ
ನಿರ್ಮಾಣವಾಗಿದೆ.
ಗುಂಡಿನ ದಾಳಿಯಿಂದಾಗಿ ಜನರು ತಮ್ಮ ಮನೆ ತೊರೆದು ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಜಮ್ಮು, ಸಾಂಬಾ ಮತ್ತು ಕತ್ವಾದ ಗಡಿ ನಿಯಂತ್ರಣ ರೇಖೆಯಲ್ಲಿ ಶೆಲ್ ದಾಳಿ ನಡೆದಿದ್ದು, ಬಿಎಸ್ಎಫ್ ಯೋಧರು ಇದರಿಂದ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. [ಗಡಿಯಲ್ಲಿ ಪಾಕ್ ಗುಂಡಿನ ದಾಳಿ, 9 ಸಾವು]
ಪಾಕಿಸ್ತಾನ ಪಡೆ ಅಕ್ಟೋಬರ್ 1ರಿಂದ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸುತ್ತಿದೆ. ಪಾಕ್ ಗುಂಡಿನ ದಾಳಿಯಿಂದಾಗಿ ಇದುವರೆಗೂ 70 ಮಂದಿ ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸಭೆ ನಡೆಸಿದ ಅಧಿಕಾರಿಗಳು : ಗಡಿಯಲ್ಲಿ ಪಾಕ್ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿರುವ ಬಗ್ಗೆ ಕೇಂದ್ರ ಗೃಹ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳು ಇಂದು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪಾಕ್ ಕದನ ವಿರಾಮ ಉಲ್ಲಂಘನೆ ನಿಲ್ಲಿಸುವ ತನಕ ಧ್ವಜಸಭೆ ನಡೆಸದಿರಲು ಸಭೆಯಲ್ಲಿ ನಿರ್ಧರಿಸಾಗಿದೆ ಎಂದು ತಿಳಿದುಬಂದಿದ್ದು, ಈ ಕುರಿತು ಸೇನೆಗೆ ಮಾಹಿತಿ ನೀಡಲಾಗಿದೆ.