ತೆಲಂಗಾಣದಲ್ಲಿ ಭೀಕರ ಅಪಘಾತ, 21 ಮಕ್ಕಳು ಸಾವು
ಹೈದರಾಬಾದ್, ಜು. 22 : ಮಾನವ ರಹಿತ ರೈಲ್ವೆ ಕ್ರಾಸಿಂಗ್ ನಲ್ಲಿ ಶಾಲಾ ಬಸ್ಸಿಗೆ ರೈಲು ಡಿಕ್ಕಿ ಹೊಡೆದಿದ್ದರಿಂದ 21 ಶಾಲಾ ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ತೆಲಂಗಾಣದಲ್ಲಿ ನಡೆದಿದೆ. ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಗುರುವಾರ
ಬೆಳಗ್ಗೆ
ತೆಲಂಗಾಣ
ರಾಜ್ಯದ
ಮೇದಕ್
ಜಿಲ್ಲೆಯ
ಮುಸಾಯಿಪೇಟೆ
ಬಳಿ
ಈ
ಭೀಕರ
ಅಪಘಾತ
ನಡೆದಿದೆ.
ಅಪಘಾತ
ನಡೆದ
ಸ್ಥಳದಲ್ಲಿ
21
ಶಾಲಾ
ಮಕ್ಕಳು
ಸಾವನ್ನಪ್ಪಿದ್ದಾರೆ.
ಬಸ್ಸಿನಲ್ಲಿ
ಒಟ್ಟು
38
ಜನರು
ಪ್ರಯಾಣಿಸುತ್ತಿದ್ದರು
ಎಂದು
ತಿಳಿದುಬಂದಿದೆ.
ನಾಂದೇಡ್
ಪ್ಯಾಸೆಂಜರ್
ರೈಲು
ಮಾನವ
ರಹಿತ
ರೈಲ್ವೆ
ಕ್ರಾಸಿಂಗ್
ನಲ್ಲಿ
ತೂಪ್ರಾನಲ್ಲಿರುವ
ಕಾಕತೀಯ
ಖಾಸಗಿ
ಶಾಲೆಗೆ
ಸೇರಿದ
ಬಸ್ಸಿಗೆ
ಡಿಕ್ಕಿ
ಹೊಡೆದಿದ್ದರಿಂದ
ಈ
ಅಪಘಾತ
ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಕೊಂಪಲ್ಲಿಯ ಬಾಲಾಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ ಮಕ್ಕಳನ್ನು ಹೈದರಾಬಾದ್ ಯಶೋಧಾ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲು ಬರುವುದನ್ನು ಶಾಲಾ ಬಸ್ ಚಾಲಕ ಗಮನಿಸಿದರೂ ತಕ್ಷಣ ಹಳಿಯನ್ನು ದಾಟಲು ಹೋಗಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ರೈಲಿಗೆ ಸಿಕ್ಕಿದ ಬಸ್ ಸುಮಾರು 1 ಕಿ.ಮೀ.ವರೆಗೆ ಸಾಗಿದೆ. ['ಎಮ್ಮೆ ಜತೆ ಸರಸ' ಇದು ಕರೀಂನಗರದ ಕ್ರೈಂ]
ಅಪಘಾತ ನಡೆದ ಸ್ಥಳಕ್ಕೆ ತೆಲಂಗಾಣ ರಾಜ್ಯದ ಸಂಸದೀಯ ವ್ಯವಹಾರಗಳ ಸಚಿವ ಹರೀಶ್ ರಾವು ಭೇಟಿ ನೀಡಿದ್ದು, ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಮೃತಪಟ್ಟ ಮಕ್ಕಳ ಶವಗಳನ್ನು ಬಾಲಾಜಿ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಮೃತಪಟ್ಟ ಮಕ್ಕಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ನಂತರ ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೆಯೂ ಅಪಘಾತ ನಡೆದಿತ್ತು : ಮಾನವ ರಹಿತ ರೈಲ್ವೆ ಕ್ರಾಸಿಂಗ್ ಇರುವ ಮುಸಾಯಿ ಪೇಟೆ ಬಳಿ ರೈಲ್ವೆ ಗೇಟ್ ಅಳವಡಿಸುವಂತೆ ಸ್ಥಳೀಯರು ಸುಮಾರು 6 ತಿಂಗಳಿನಿಂದ ರೈಲ್ವೆ ಇಲಾಖೆಗೆ ಮನವಿ ಮಾಡುತ್ತಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಟ್ರಾಕ್ಟರ್ ಗೆ ರೈಲು ಡಿಕ್ಕಿ ಹೊಡೆದು ಆರು ಜನರು ಸಾವನ್ನಪ್ಪಿದ್ದರು ಎಂದು ಸ್ಥಳೀಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸದಾನಂದ ಗೌಡ ಸಂತಾಪ : ಮಾನವ ರಹಿತ ರೈಲ್ವೆ ಕ್ರಾಸಿಂಗ್ ನಲ್ಲಿ ನಡೆದ ಅಪಘಾತದಲ್ಲಿ 21 ಶಾಲಾ ಮಕ್ಕಳು ಸಾವನ್ನಪ್ಪಿರುವ ಪ್ರಕರಣದ ಬಗ್ಗೆ ಕೇಂದ್ರ ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.