ಅಧಿವೇಶನ : ನಾಲ್ವರು ಸಚಿವರು ಬಿಜೆಪಿ ಟಾರ್ಗೆಟ್
ಹುಬ್ಬಳ್ಳಿ, ಡಿ.1 : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶದಲ್ಲಿ ಸಿಎಂ ಸಿದ್ದರಾಮಯ್ಯ ಸಂಪುಟದ ನಾಲ್ವರು ಸಚಿವರು ಬಿಜೆಪಿಯ ಟಾರ್ಗೆಟ್ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಘೋಷಿಸಿದ್ದಾರೆ.
ಹುಬ್ಬಳ್ಳಿಯಲ್ಲಿ
ಸೋಮವಾರ
ಪತ್ರಿಕಾಗೋಷ್ಠಿ
ನಡೆಸಿ
ಮಾತನಾಡಿದ
ಕೆ.ಎಸ್.ಈಶ್ವರಪ್ಪ
ಅವರು,
ಸಚಿವರುಗಳಾದ
ದಿನೇಶ
ಗುಂಡೂರಾವ್,
ಎಚ್.ಎಸ್.
ಮಹದೇವ
ಪ್ರಸಾದ್,
ಖಮರುಲ್
ಇಸ್ಲಾಂ,
ಕೆ.ಜೆ.
ಜಾರ್ಜ್
ವಿರುದ್ಧ
ಬಿಜೆಪಿ
ಹೋರಾಟ
ನಡೆಸಲಿದೆ
ಎಂದು
ಹೇಳಿದರು.
[ಬೆಳಗಾವಿ
ಅಧಿವೇಶನ,
ಶಾಸಕರಿಗೆ
ಡಿನ್ನರ್
ಮಿಸ್]
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಭೂ ಒತ್ತುವರಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದ್ದರೂ ಸರ್ಕಾರ ಮೌನವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕುರಿತು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಈಶ್ವರಪ್ಪ ಅವರು ಆರೋಪಿಸಿದರು. [ಭೂ ಕಬಳಿಕೆ, ದಿನೇಶ್ ಗುಂಡೂರಾವ್ ಸ್ಪಷ್ಟನೆಗಳು]
ನಾಲ್ವರು ಸಚಿವರನ್ನು ಸಿಎಂ ಸಿದ್ದರಾಮಯ್ಯ ಅವರು ಸಂಪುಟದಿಂದ ಕೈಬಿಡಬೇಕು. ಅಲ್ಲಿಯವರೆಗೂ ಬಿಜೆಪಿ ಹೋರಾಟವನ್ನು ನಿಲ್ಲಿಸುವುದಿಲ್ಲ, ಸದನದವೊಳಗೆ ಮತ್ತು ಹೊರಗೆ ಬಿಜೆಪಿ ನಾಲ್ವರು ಸಚಿವರ ವಿರುದ್ಧ ಹೋರಾಟ ನಡೆಸಲಿದೆ ಎಂದು ಘೋಷಿಸಿದರು.
ಸರ್ಕಾರ
ಬೆಂಬಲಕ್ಕೆ
ನಿಂತಿದೆ
:
ರಾಜ್ಯದಲ್ಲಿ
ರಾಜಾರೋಷವಾಗಿ
ಅಕ್ರಮ
ಮರಳು
ಸಾಗಾಟ
ನಡೆಯುತ್ತಿದ್ದು,
ಅದನ್ನು
ತಡೆಯುವಲ್ಲಿ
ಸರ್ಕಾರ
ಸಂಪೂರ್ಣ
ವಿಫಲವಾಗಿದೆ
ಎಂದು
ಆರೋಪಿಸಿದ
ಈಶ್ವರಪ್ಪ
ಅವರು,
ಅಕ್ರಮ
ಮರಳು
ಸಾಗಾಟಕ್ಕೆ
ಸರ್ಕಾರದ
ಪರೋಕ್ಷ
ಬೆಂಬಲವಿದೆ
ಎಂದು
ದೂರಿದರು.
ರಾಜ್ಯದಲ್ಲಿ ಅತ್ಯಾಚಾರ, ಭೂ ಒತ್ತುವರಿ, ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಸರ್ಕಾರ ಎಂಬುದೇ ಇಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯಿಂದ ಹೋರಾಟ ಅನಿವಾರ್ಯವಾಗಿದೆ ಎಂದು ಹೇಳಿದರು.
ಅಂದಹಾಗೆ ಡಿ.9ರಿಂದ 20ರತನಕ ಬೆಳಗಾವಿಯಲ್ಲಿ ಅಧಿವೇಶನ ನಡೆಯಲಿದ್ದು, ಸರ್ಕಾರಕ್ಕೆ ಚಳಿ ಬಿಡಿಸಲು ಪ್ರತಿಪಕ್ಷ ಸಜ್ಜಾಗಿದೆ. ಹತ್ತು ದಿನದ ಅಧಿವೇಶನದಲ್ಲಿ ಪ್ರತಿಭಟನೆಯ ಕಾವೇ ಹೆಚ್ಚಾಗುವ ಸಾಧ್ಯತೆ ಇದೆ.