ಸಾಣೇಹಳ್ಳಿ ನಾಟಕೋತ್ಸವ ಆನ್ಲೈನ್ನಲ್ಲಿ ನೋಡಿ
ಚಿತ್ರದುರ್ಗ, ನ.5 : ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾಸಂಘದ ವತಿಯಿಂದ ಡಾ.ಶ್ರೀ ಪಂಡಿತಾರಾಧ್ಯ ಸ್ವಾಮಿಗಳ ಸಾನಿಧ್ಯದಲ್ಲಿ ರಾಷ್ಟ್ರೀಯ ನಾಟಕೋತ್ಸವ ಆರಂಭವಾಗಿದೆ. ಈ ಬಾರಿ ನಾಟಕೋತ್ಸವವನ್ನು ಆನ್ಲೈನ್ ಮೂಲಕವೂ ನೋಡುವ ವ್ಯವಸ್ಥೆ ಮಾಡಲಾಗಿದೆ.
ಹೊಸದುರ್ಗ
ತಾಲೂಕಿನ
ಸಾಣೇಹಳ್ಳಿಯಲ್ಲಿ
ನ.2ರಂದು
ರಾಷ್ಟ್ರೀಯ
ನಾಟಕೋತ್ಸವ
ಆರಂಭವಾಗಿದ್ದು
ನ.8ರವರೆಗೆ
ನಡೆಯಲಿದೆ.
ಸಾಣೇಹಳ್ಳಿಗೆ
ಬಂದು
ನಾಟಕ
ವೀಕ್ಷಿಸಲು
ಸಾಧ್ಯವಾಗದ
ರಂಗಾಸಕ್ತರಿಗೆ
ಅನುಕೂಲವಾಗಲಿ
ಎಂದು
ಆನ್ಲೈನ್
ಮೂಲಕ
ವೀಕ್ಷಿಸುವ
ವ್ಯವಸ್ಥೆಯನ್ನು
ಈ
ಬಾರಿ
ಪರಿಚಯಿಸಲಾಗಿದೆ.
[ನಾಟಕೋತ್ಸವದ
ಮಾಹಿತಿ
ಇಲ್ಲಿದೆ
ನೋಡಿ]
ನಾಟಕದ ಜೊತೆ ಪ್ರತಿದಿನ ಸಾಮೂಹಿಕ ಪ್ರಾರ್ಥನೆ, ಚಿಂತನ, ವಚನ ಗೀತೆ, ಉಪನ್ಯಾಸ ಕಾರ್ಯಕ್ರಮಗಳಿದ್ದು ಅವುಗಳನ್ನು ವೀಕ್ಷಿಸಬಹುದಾಗಿದೆ. ಹಿಂದಿನ ದಿನ ನಡೆದ ಕಾರ್ಯಕ್ರಮಗಳ ವಿಡಿಯೋವನ್ನು ವೆಬ್ಸೈಟ್ನಲ್ಲಿ ಹಾಕಲಾಗಿದ್ದು, ಅದನ್ನು ವೀಕ್ಷಿಸಬಹುದು. [ನ.2ರಿಂದ ರಾಷ್ಟ್ರೀಯ ನಾಟಕೋತ್ಸವ]
http://srishivakumara.ivb7webcaster.com.ವೆಬ್ಸೈಟ್ಗೆ ಭೇಟಿ ನೀಡಿ ನಾಟಕಗಳನ್ನು ನೋಡಬಹುದಾಗಿದೆ. ಪ್ರತಿದಿನ ಸಂಜೆ ನಾಟಕ ನಡೆಯಲಿದ್ದು, ಬೆಳಗ್ಗೆಯಿಂದ ವಿವಿಧ ಕಾರ್ಯಕ್ರಮಗಳನ್ನುನಡೆಯುತ್ತವೆ.
ಯಾವ ನಾಟಕಗಳಿವೆ : ನ.5ರಂದು ಲಿಂಗದೇವರು ಹಳೇಮನೆ ಅವರ 'ಚಿಕ್ಕದೇವಭೂಪ' ನಾಟಕವನ್ನು ಶಿವಸಂಚಾರ-14ರ ತಂಡ ಗಂಗಾಧರಸ್ವಾಮಿ ನಿರ್ದೇಶನದಲ್ಲಿ ಅಭಿನಯಿಸಲಿದೆ. ನ.6ರಂದು ದೆಹಲಿ ಕೇಂದ್ರ ಸಂಗೀತ ನಾಟಕ ಅಕಾಡಮೆ ಸಹಕಾರದಲ್ಲಿ 'ಸಂಗೀತ ಸೌಭದ್ರ' ನಾಟಕವನ್ನು ಕೀರ್ತಿ ಶಿಲೇದಾರ್ ನಿರ್ದೇಶನದಲ್ಲಿ ಪುಣೆಯ ಜೆ.ಜೆ.ಎಸ್.ಸಂಗೀತ ನಾಟ್ಯ ಸೇವಾ ಟ್ರಸ್ಟ್ ನವರು ಅಭಿನಯಿಸಲಿದ್ದಾರೆ. [ನಾಟಕಗಳನ್ನುನೋಡಲು ಇಲ್ಲಿ ಕ್ಲಿಕ್ ಮಾಡಿ]
ನ.7ರಂದು 'ಕೈಲಾಸಂ ಕೀಚಕ' ನಾಟಕವನ್ನು ಬೆಂಗಳೂರು ಸಂಚಾರಿ ಥಿಯೇಟರ್ ಅಭಿನಯಿಸಲಿದೆ. ನ.8ರಂದು ಡಾ.ಕೆ.ವೈ.ನಾರಾಯಣಸ್ವಾಮಿ ಅವರ 'ವಿನುರ ವೇಮ' ನಾಟಕವನ್ನು ಸಿ.ಬಸವಲಿಂಗಯ್ಯ ನಿರ್ದೇಶನದಲ್ಲಿ ಶಿವಸಂಚಾರ ತಂಡ ಅಭಿನಯಿಸಲಿದೆ.