ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನ್ಯಾಯಾಧೀಶೆ ರತ್ನಕಲಾ ಕಿರುಪರಿಚಯ
ಬೆಂಗಳೂರು, ಅ. 1 : ಅಕ್ರಮ ಆಸ್ತಿ ಗಳಿಕೆ ಸಂಬಂಧ ಪರಪ್ಪನ ಅಗ್ರಹಾರ ಸೇರಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮೇಲ್ಮನವಿ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 7, ಮಂಗಳವಾರಕ್ಕೆ ಹೋಗಿದೆ.
ಬುಧವಾರ
ಜಾಮೀನು
ಅರ್ಜಿ
ವಿಚಾರಣೆ
ನಡೆಸಿದ
ನ್ಯಾಯಾಧೀಶೆ
ರತ್ನಕಲಾ
ಕುರಿತ
ಒಂದಿಷ್ಟು
ಮಾಹಿತಿ...
ಯಾರಿವರು ನ್ಯಾಯಾಧೀಶೆ ರತ್ನಕಲಾ? ಜನವರಿ 27, 1956 ರಂದು ಜನಿಸಿದ ರತ್ನಕಲಾ 1982ರಲ್ಲಿ ವಕೀಲಿ ವೃತ್ತಿ ಆರಂಭಿಸಿದರು. ನಂತರ 1996 ರಲ್ಲಿ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶೆಯಾಗಿ ನೇಮಕಗೊಂಡರು. ಬೆಂಗಳೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು ಜಿಲ್ಲಾ ಮುಖ್ಯ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದರು. 2013ರ ಅಕ್ಟೋಬರ್ 24 ರಂದು ಹೈಕೋರ್ಟ್ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. (ಅ.1ರಂದೇ ಜಯಾ ಜಾಮೀನು ಅರ್ಜಿ ವಿಚಾರಣೆ)
ಇಂದು ವಿಚಾರಣೆ ನಡೆಸಿದ ರತ್ನಕಲಾ ಜಾಮೀನು ಅರ್ಜಿ ಮುಂದೂಡಿ ಆದೇಶ ಹೊರಡಿಸಿದ್ದಾರೆ.
Comments
English summary
Karnataka High Court additional judge Rathnakala will hear Jayalalithaa Bail Plea on Oct 1. Former CM of Tamil Nadu had been held guilty in a case disproportionate assets. Earlier HC adjourned her bail to Oct 6 but later Chief Justice of HC agreed to take up the case on Wednesday.