ಅಮ್ಮಾಗೆ ಬೆಂಬಲ, ತಮಿಳು ಚಿತ್ರೋದ್ಯಮ ಬಂದ್
ಚೆನ್ನೈ, ಸೆ. 30 : ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ತಮಿಳು ಚಿತ್ರರಂಗ ಬೆಂಬಲ ನೀಡಿದೆ. ಜಯಲಲಿತಾ ಅವರಿಗೆ ಶಿಕ್ಷೆ ಆಗಿದ್ದನ್ನು ಖಂಡಿಸಿ ತಮಿಳು ಚಿತ್ರೋದ್ಯಮ ಮಂಗಳವಾರ ಬಂದ್ ನಡೆಸುತ್ತಿದೆ. ಇಂದು ಬೆಳಗ್ಗೆಯಿಂದ ಸಂಜೆ 6 ಗಂಟೆಯ ತನಕ ಚಿತ್ರಪ್ರದರ್ಶನ ರದ್ದುಗೊಳಿಸಲಾಗಿದೆ.
ಜಯಲಲಿತಾ ಅವರಿಗೆ ಬೆಂಬಲ ನೀಡಿರುವ ನಟ ನಟಿಯರು, ಚಿತ್ರ ಪ್ರದರ್ಶಕರು ಚೆಪಾಕ್ ಕ್ರೀಡಾಂಗಣದಲ್ಲಿ ಮೌನ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿರಿಯ ನಟ ಶರತ್ ಕುಮಾರ್ ಸೇರಿದಂತೆ ಹಲವು ನಟ-ನಟಿಯರು ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರೀಕರಣ ಸೇರಿದಂತೆ ಕಾಲಿವುಡ್ನ ಎಲ್ಲಾ ಚಟುವಟಿಕೆಗಳು ಸಂರ್ಪೂಣವಾಗಿ ಸ್ಥಗಿತಗೊಂಡಿವೆ.
ತಮಿಳುನಾಡಿನಾದ್ಯಂತೆ ಮಂಗಳವಾರ ಚಿತ್ರ ಪ್ರದರ್ಶನವನ್ನು ಬೆಳಗ್ಗೆ 9ರಿಂದ ಸಂಜೆ 6ರ ತನಕ ರದ್ದುಪಡಿಸಲಾಗಿದೆ. ಚಿತ್ರಮಂದಿರದ ಮಾಲೀಕರು, ಪ್ರದರ್ಶಕರು, ವಿತರಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. [ಜಯಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ]
ಇತ್ತ ಬೆಂಗಳೂರಿನಲ್ಲಿ ಜಯಲಲಿತಾ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ ಕರ್ನಾಟಕ ಹೈಕೋರ್ಟ್ ಅರ್ಜಿಯ ವಿಚಾರಣೆಯನ್ನು ಅ.6ರ ಸೋಮವಾರಕ್ಕೆ ಮುಂದೂಡಿದೆ. [ತಮಿಳು ಚಿತ್ರರಂಗದ ಪ್ರತಿಭಟನೆ, ಚಿತ್ರಗಳು]
"The
verdict
is
not
final
and
Chief
Minister
Jayalalithaa
will
break
the
barriers
through
appropriate
legal
procedures
-
@realsarathkumar
—
AISMK
(@aismkparty)
September
29,
2014