ಕಲ್ಪಕಂ ಅಣು ಸ್ಥಾವರಲ್ಲಿ ಗುಂಡಿನ ದಾಳಿ, ಮೂವರ ಸಾವು
ಚೆನ್ನೈ, ಅ.8 : ತಮಿಳುನಾಡಿನ ಕಲ್ಪಕಂ ಅಣು ಸ್ಥಾವರದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಯೋಧನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದ ಯೋಧನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ
ಮುಂಜಾನೆ
5.30ರ
ಸುಮಾರಿಗೆ
ವಿಜಯ್
ಪ್ರತಾಪ್
ಸಿಂಗ್
ಎಂಬ
ಕೇಂದ್ರೀಯ
ಕೈಗಾರಿಕಾ
ಭದ್ರತಾ
ಪಡೆಯ
(ಸಿಐಎಸ್ಎಫ್)
ಯೋಧನೊಬ್ಬ
ಗುಂಡಿನ
ದಾಳಿ
ನಡೆಸಿದ್ದಾನೆ.
ಸಿಐಎಸ್ಎಫ್ನ
ಮೂವರು
ಸಿಬ್ಬಂದಿ
ಗುಂಡಿನ
ದಾಳಿಯಲ್ಲಿ
ಮೃತಪಟ್ಟಿದ್ದು,
ಇಬ್ಬರು
ಗಾಯಗೊಂಡಿದ್ದಾರೆ.
ಗಾಯಗೊಂಡ ಸಿಬ್ಬಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗುಂಡಿನ ದಾಳಿ ನಡೆಸಿದ ಪ್ರತಾಪ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸಿಂಗ್ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. [ಕರ್ನಾಟಕ -ತಮಿಳುನಾಡು ನಡುವೆ ಸರ್ಕಾರಿ ಸಾರಿಗೆ ಇಲ್ಲ]
ರಸ್ತೆ ಅಪಘಾತ ಮೂರು ಸಾವು : ರಾಮನಗರ ಜಿಲ್ಲೆಯ ಮರೂರು ಬಳಿ ಕೆಎಸ್ಆರ್ಟಿಸಿ ಐರಾವತ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.