ಉಪ ಚುನಾವಣೆ ಟಿಕೆಟ್, ಬಳ್ಳಾರಿ ಕೈ ಕಚೇರಿ ಧ್ವಂಸ
ಬಳ್ಳಾರಿ, ಆ.1 : ಉಪ ಚುನಾವಣೆ ಟಿಕೆಟ್ ಸಂಬಂಧ ಬಳ್ಳಾರಿ ಕಾಂಗ್ರೆಸ್ ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡ ಅಸ್ಸುಂಡಿ ಹೊನ್ನಾರಪ್ಪ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಅವರ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿ ಗಾಜುಗಳನ್ನು ಒಡೆದು ಪ್ರತಿಭಟನೆ ಮಾಡಿದರು.
ಉಪ
ಚುನಾವಣೆಗೆ
ಸಂಬಂಧಿಸಿದಂತೆ
ಕೆಪಿಸಿಸಿ
ಈಗಾಗಲೇ
ಅಭ್ಯರ್ಥಿಗಳನ್ನು
ಅಂತಿಮಗೊಳಿಸಿದೆ.
ಬಳ್ಳಾರಿ
ಗ್ರಾಮಾಂತರ
ಕ್ಷೇತ್ರಕ್ಕೆ
ಮೊಳಕಾಲ್ಮೂರು
ಕ್ಷೇತ್ರದ
ಮಾಜಿ
ಶಾಸಕ
ಎನ್.ವೈ.ಗೋಪಾಲಕೃಷ್ಣ
ಅವರನ್ನು
ಅಭ್ಯರ್ಥಿ
ಎಂದು
ಅಂತಿಮಗೊಳಿಸಿ
ಹೈಕಮಾಂಡ್
ನಾಯಕರಿಗೆ
ಪಟ್ಟಿ
ಕಳುಹಿಸಿದೆ.
ಆದರೆ,
ಸ್ಥಳೀಯರಿಗೆ
ಟಿಕೆಟ್
ನೀಡಿ
ಎಂದು
ಕಾಂಗ್ರೆಸ್
ಕಾರ್ಯಕರ್ತರು
ಪ್ರತಿಭಟನೆ
ಆರಂಭಿಸಿದ್ದಾರೆ.
ಶುಕ್ರವಾರ ಸ್ಥಳೀಯ ಕಾಂಗ್ರೆಸ್ ಮುಖಂಡ ಅಸ್ಸುಂಡಿ ಹೊನ್ನಾರಪ್ಪ ಅವರ ಬೆಂಗಲಿಗರು ಸ್ಥಳೀಯರಿಗೆ ಉಪ ಚುನಾವಣೆ ಟಿಕೆಟ್ ನೀಡಬೇಕು, ಹೊರಗಿನವರಿಗೆ ಟಿಕೆಟ್ ನೀಡಬಾರದು ಎಂದು ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. [ಉಪ ಚುನಾವಣೆಗೆ ಕಾಂಗ್ರೆಸ್ ಪಟ್ಟಿ ಸಿದ್ಧ]
ಅನಂತಪುರ ರಸ್ತೆಯಲ್ಲಿರುವ ಪಕ್ಷದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ಕಾರ್ಯಕರ್ತರು ಏಕಾಏಕಿ ಕಚೇರಿಗೆ ನುಗ್ಗಿ ಅಲ್ಲಿನ ಪಿಠೋಪಕರಣಗಳನ್ನು ಧ್ವಂಸಗೊಳಿಸಿದರು. ಕಚೇರಿಯ ಕಿಟಕಿ ಗಾಜುಗಳನ್ನು ಪುಡಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. [ಉಪ ಚುನಾವಣೆ ವೇಳಾಪಟ್ಟಿ]
ಕಚೇರಿಯ ಬೀಗ ಮುರಿದು ಒಳನುಗ್ಗಿದ ಕಾರ್ಯಕರ್ತರು ಕಾಂಗ್ರೆಸ್ ನಾಯಕರ ಭಾವಚಿತ್ರಗಳು ,ಬ್ಯಾನರ್ ಗಳನ್ನು ಹರಿದು, ಟಿವಿಯನ್ನು ಧ್ವಂಸಗೊಳಿಸಿದ್ದಾರೆ. ಕಚೇರಿಯ ಮುಂದೆ ಟಯರ್ ಸುಟ್ಟು ಪ್ರತಿಭಟನೆ ನಡೆಸಿದರು.