ಬಳ್ಳಾರಿ ಕೈವಶ, ರೆಡ್ಡಿಪಾಳಯಕ್ಕೆ ಮುಖಭಂಗ
ಬಳ್ಳಾರಿ, ಆ.25 : ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಜಯಗಳಿಸಿದ್ದಾರೆ. ರೆಡ್ಡಿಗಳ ಭದ್ರಕೋಟೆಯಾಗಿದ್ದ ಬಳ್ಳಾರಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಸಂಸದ ಬಿ.ಶ್ರೀರಾಮುಲು ಅವರ ಆಪ್ತ ಓಬಳೇಶ್ ಸೋಲು ಅನುಭವಿಸಿದ್ದಾರೆ.
ಸೋಮವಾರ
ನಡೆದ
ಬಳ್ಳಾರಿ
ಗ್ರಾಮಾಂತರ
ಕ್ಷೇತ್ರದಲ್ಲಿ
ಮತ
ಎಣಿಕೆಯಲ್ಲಿ
ಎನ್.ವೈ.ಗೋಪಾಲಕೃಷ್ಣ
ಅವರು
ಸುಮಾರು
33,144
ಮತಗಳ
ಅಂತರದಿಂದ
ಬಿಜೆಪಿ
ಅಭ್ಯರ್ಥಿ
ಓಬಳೇಶ್
ವಿರುದ್ಧ
ಗೆಲುವು
ಸಾಧಿಸಿದ್ದಾರೆ.
ಬಳ್ಳಾರಿಯಲ್ಲಿ
ಚುನಾವಣಾ
ಉಸ್ತುವಾರಿ
ವಹಿಸಿಕೊಂಡಿದ್ದ
ಇಂಧನ
ಸಚಿವ
ಡಿ.ಕೆ.ಶಿವಕುಮಾರ್
ರೆಡ್ಡಿಗಳಿಗೆ
ಅವರ
ಕ್ಷೇತ್ರದಲ್ಲಿಯೇ
ಸೋಲಿನ
ರುಚಿ
ತೋರಿಸಿದ್ದಾರೆ.
[ಫಲಿತಾಂಶದ
ಕ್ಷಣ-ಕ್ಷಣದ
ಮಾಹಿತಿ
ಇಲ್ಲಿದೆ]
"ಸಣ್ಣ-ಪುಟ್ಟ ಅಸಮಾಧಾನಗಳ ನಡುವೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದ್ದೇವೆ. ನಾವು ಪ್ರಭಾವಿಗಳಲ್ಲದಿದ್ದರೂ ಜನರು ನಮಗೆ ಬೆಂಬಲ ನೀಡಿದ್ದಾರೆ" ಎಂದು ಬಳ್ಳಾರಿಯಲ್ಲಿ ಜಯಗಳಿಸಿದ ಎನ್.ವೈ.ಗೋಪಾಲಕೃಷ್ಣ ಹೇಳಿದ್ದಾರೆ. [ಚಿಕ್ಕೋಡಿ ಸದಲಗಾ : ಗಣೇಶ್ ಹುಕ್ಕೇರಿಗೆ ಜಯ]
"ಕುಡಿಯುವ ನೀರು, ರಸ್ತೆ, ನೀರಾವರಿ ಯೋಜನೆಗಳು ವಿಫಲವಾಗಿದೆ ಅವುಗಳನ್ನು ಪೂರ್ಣಗೊಳಿಸುವುದು ನನ್ನ ಆದ್ಯತೆ" ಎಂದು ಎನ್.ವೈ.ಗೋಪಾಲಕೃಷ್ಣ ತಿಳಿಸಿದ್ದಾರೆ. [ಶಿಕಾರಿಪುರದಲ್ಲಿ ಬಿ.ವೈ.ರಾಘವೇಂದ್ರಗೆ ಗೆಲುವು]
ಉಪ ಚುನಾವಣೆ ಪ್ರಚಾರದಲ್ಲಿ ಏಕಾಂಗಿಯಾಗಿದ್ದ ಸಂಸದ ಬಿ.ಶ್ರೀರಾಮುಲು ಅವರು ತಮ್ಮ ಆಪ್ತನನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಓಬಳೇಶ್ ಭಾರೀ ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಶ್ರೀರಾಮುಲು ಅವರ ರಾಜೀನಾಮೆಯಿಂದ ತೆರವಾದ ಸ್ಥಾನ ಕಾಂಗ್ರೆಸ್ ಪಾಲಾಗಿದೆ.
ಪಡೆದ ಮತಗಳು [11 ಗಂಟಗೆ ಲಭ್ಯವಾದ ಮಾಹಿತಿಯಂತೆ]
ಎನ್.ವೈ.ಗೋಪಾಲಕೃಷ್ಣ
-
83,906
ಒಬಳೇಶ್
-
50,804