ರೆಡ್ಡಿ, ಆನಂದ್ ಸಿಂಗ್ ಆಪ್ತರು ಸಿಬಿಐ ಬಲೆಗೆ
ಬಳ್ಳಾರಿ, ಡಿ. 12 : ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐ ಮತ್ತಷ್ಟು ಚುರುಕುಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬಳ್ಳಾರಿಯಲ್ಲಿ ಬಂಧಿತ ಶಾಸಕ ಆನಂದ್ ಸಿಂಗ್ ಸಂಬಂಧಿ, ಒಬ್ಬರು ವಕೀಲರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಬಳ್ಳಾರಿಯಲ್ಲಿ
ಬುಧವಾರ
ಕಾರ್ಯಾಚರಣೆ
ನಡೆಸಿದ
ಸಿಬಿಐ
ಬೇಲೇಕೇರಿ
ಅದಿರು
ನಾಪತ್ತೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಬಳ್ಳಾರಿ
ಮತ್ತು
ಚಿತ್ತೂರಿನಲ್ಲಿ
ಮೂವರನ್ನು
ಬಂಧಿಸಿದೆ.
ಶಾಸಕ
ಆನಂದ್
ಸಿಂಗ್
ಸಂಬಂಧಿಕ
ಪ್ರವೀಣ್
ಸಿಂಗ್,
ಮಾಜಿ
ಸಚಿವ
ಜನಾರ್ದನ
ರೆಡ್ಡಿ
ಆಪ್ತ
ಚಿತ್ತೂರು
ಮೂಲದ
ಕೋನಪಲ್ಲಿ
ಜನಾರ್ದನ
ರೆಡ್ಡಿ,
ಶಾಸಕ
ನಾಗೇಂದ್ರ
ಬೆಂಬಲಿಗ
ಕುಕನೂರು
ನಾಗರಾಜು
ಬಂಧಿತರಾಗಿದ್ದಾರೆ.
ಬಂಧಿತರನ್ನು ಬುಧವಾರವೇ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಶುಕ್ರವಾರದವರೆಗೆ ಸಿಬಿಐ ವಶಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊಡಿಸಿದೆ. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಬೇಕು ಆದ್ದರಿಂದ ಅವರನ್ನು ಸಿಬಿಐ ವಶಕ್ಕೆ ಒಪ್ಪಿಸಿಬೇಕು ಎಂಬ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿ ಸಿಬಿಐ ವಶಕ್ಕೆ ನೀಡಿದೆ.
ಮೂರರು ಆರೋಪಿಗಳನ್ನು ಬಂಧಿಸುವ ಮೂಲಕ ಸಿಬಿಐ ಬೇಲೇಕೇರಿ ಬಂದರಿನಿಂದ 50.7 ಲಕ್ಷ ಟನ್ ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಈಗಾಗಲೇ ಈ ಪ್ರಕರಣದಲ್ಲಿ ಕಂಪ್ಲಿ ಶಾಸಕ ಸುರೇಶ್ ಬಾಬು, ಕೂಡ್ಲಗಿ ಶಾಸಕ ನಾಗೇಂದ್ರ, ಕಾರವಾರದ ಶಾಸಕ ಸತೀಶ್ ಸೈಲ್ ಬಂಧನವಾಗಿದೆ. (ಬೇಲೇಕೇರಿ ಪ್ರಕರಣ ಶಾಸಕರ ಬಂಧನ)
ಸದ್ಯ ಪ್ರಕರಣದ ಕಿಂಗ್ ಪಿನ್ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಆಪ್ತನನ್ನು ಬಂಧಿಸಲಾಗಿದ್ದು, ಅವರನ್ನು ಹೆಚ್ಚಿನ ವಿಚಾರಣೆಗೆ ಗುರಿಪಡಿಸಲಾಗಿದೆ.ಕೂಡ್ಲಿಗಿ ಶಾಸಕ ನಾಗೇಂದ್ರ ಬೆಂಬಲಿಗೆ ಮತ್ತು ಆನಂದ್ ಸಿಂಗ್ ಅವರ ಸಂಬಂಧಿಯನ್ನು ಬಂಧಿಸಲಾಗಿದ್ದು, ಇಬ್ಬರು ಶಾಸಕರಿಗೆ ಹೊಸ ಸಂಕಷ್ಟ ಎದುರಾಗಿದೆ.